Don't Miss

Tag Archives: Kannada fake news

ಗೋಮಾಂಸ ಸೇವನೆ ಸಮಸ್ಯೆಯಾಗಬಾರದು ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆಯೇ? ಸತ್ಯ ಪರಿಶೀಲನೆ

Claim/ಹೇಳಿಕೆ: ಗೋಮಾಂಸ ಸೇವಿಸುವುದರಲ್ಲಿ ತಪ್ಪೇನಿಲ್ಲ ಎಂದು ದಿಗ್ವಿಜಯ್ ಸಿಂಗ್ ಹೇಳುತ್ತಾರೆ. Conclusion/ಕಡೆನುಡಿ: ಸುಳ್ಳು, ದಿಗ್ವಿಜಯ್ ಸಿಂಗ್ ಅವರು ಸಾವರ್ಕರ್ ಅವರ ಬರವಣಿಗೆಯನ್ನು ಉಲ್ಲೇಖಿಸುತ್ತಿದ್ದರು ಮತ್ತು ಇದು ಅವರ ಸ್ವಂತದ ಹೇಳಿಕೆಯಲ್ಲ. ರೇಟಿಂಗ್: ತಪ್ಪು ನಿರೂಪಣೆ. Fact Check  ವಿವರಗಳು ಕಾಂಗ್ರೆಸ್ ನಾಯಕರಾದ ದಿಗ್ವಿಜಯ್ ಸಿಂಗ್ ರವರು ಮತ್ತೊಂದು ವಿವಾದದ ಕೇಂದ್ರವಾಗಿದ್ದಾರೆ, ಅದೂ ನವೆಂಬರ್ 2023 ರಲ್ಲಿ ನಡೆಯಲಿರುವ ಮಧ್ಯಪ್ರದೇಶ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ನಡುವೆ. ಈ ಮಧ್ಯ ಪ್ರದೇಶದ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಹಿರಿಯ ನಾಯಕರನ್ನು ಒಳಗೊಂಡಿರುವ ಒಂದು ವೀಡಿಯೊ ವೈರಲ್ ಆಗುತ್ತಿದ್ದು ...

Read More »

ಈ ವೀಡಿಯೊ 170-ವರ್ಷ-ಹಳೆಯ ಟಿಸ್ಸಾಟ್ ವಾಚ್ನ ಮರುಸ್ಥಾಪನೆಯನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಒಂದು ಕೈಗಡಿಯಾರದ ಮರುಸ್ಥಾಪನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಮುರಿದ ಗಡಿಯಾರವನ್ನು ಸರಿ ಮಾಡಿರುವುದನ್ನು ತೋರಿಸುತ್ತಾರೆ ಮತ್ತು ಫಲಿತಾಂಶವಾಗಿ ಗಡಿಯಾರವು ಹೊಸದರಂತೆ ಕಾಣುತ್ತದೆ. ತೋರಿಸಲಾಗಿರುವ ಗಡಿಯಾರವು ಟಿಸ್ಸಾಟ್ನ 1853 ರ ಗಡಿಯಾರ ಎಂದು ವೀಡಿಯೊ ಹೇಳುತ್ತದೆ. Servicing a Tissot watch after 167 years, made in 1853. Mesmerising.. pic.twitter.com/irpT3IwfKw — Shilpa (@shilpa_cn) June 19, 2021 ವೀಡಿಯೊದೊಂದಿಗೆ ವೈರಲ್ ಆಗುತ್ತಿರುವ ವಾಟ್ಸಾಪ್ನಲ್ಲಿನ ಹೇಳಿಕೆ ಹೀಗಿದೆ: 170 ವರ್ಷಗಳ ನಂತರ 1853 ರಲ್ಲಿ ತಯಾರಿಸಲಾದ ಟಿಸ್ಸಾಟ್ ಗಡಿಯಾರದ ...

Read More »

ಸತ್ಯ ಪರಿಶೀಲನೆ: ಸುಡಾನ್‌ನಲ್ಲಿ ಡ್ರೋನ್ ದಾಳಿಯ ಒಂದು ಹಳೆಯ ವೀಡಿಯೊಗೂ ಗಾಜಾ಼ ಮೇಲಿನ ದಾಳಿಗೂ ಸಂಬಂಧ ಕಲ್ಪಿಸಲಾಗಿದೆ

ಗಾಜಾ಼ದಲ್ಲಿನ ವೈಮಾನಿಕ ದಾಳಿ ಎನ್ನಲಾದ ಒಂದು ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಗಾಜಾ಼ ಮತ್ತು ಪ್ಯಾಲೆಸ್ತೀನೀ ಮಕ್ಕಳು ನೀರಿನ ಟ್ಯಾಂಕ್ ಒಂದರ ಬಳಿ ಜೊತೆಗೂಡಿದ್ದಾಗ ಇಸ್ರೇಲ್ ಅವರ ಮೇಲೆ ಬಾಂಬ್ ದಾಳಿ ನಡೆಸಿತು ಎಂದು ವೀಡಿಯೊ ಹೇಳುತ್ತದೆ. ವೀಡಿಯೊದೊಂದಿಗೆ ವೈರಲ್ ಆಗುತ್ತಿರುವ ಹೇಳಿಕೆ ಹೀಗಿದೆ: भूख और प्यास से तड़प रहे पेलेस्टाइन, गाज़ा के बच्चे जब पानी पीने के लिए पानी की टंकी के पास पहुंचे तो, जालिम कातिल इजरायल आतंकवादी यो ...

Read More »

ಈ ವೈರಲ್ ವೀಡಿಯೊ ಪ್ಲಾಸ್ಟಿಕ್ನಿಂದ ಗೋಧಿಯ ಉತ್ಪಾದನೆಯನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

Claim/ಹೇಳಿಕೆ: ಫ್ಯಾಕ್ಟರಿಯು ಪ್ಲಾಸ್ಟಿಕ್‌ನಿಂದ ಗೋಧಿ ಧಾನ್ಯಗಳನ್ನು ತಯಾರಿಸುತ್ತಿರುವುದನ್ನು ಒಂದು ವೈರಲ್ ವೀಡಿಯೊ ತೋರಿಸುತ್ತದೆ. Conclusion/ಕಡೆನುಡಿ: ಈ ವೈರಲ್ ವೀಡಿಯೊ ಪ್ಲಾಸ್ಟಿಕ್ ಅನ್ನು ಮರುಬಳಕೆ ಮಾಡುವಂತಹ ಉತ್ಪಾದನಾ ಕಂಪನಿಯೊಂದನ್ನು ತೋರಿಸುತ್ತದೆ. ಪ್ಲಾಸ್ಟಿಕ್ ಅನ್ನು ಸಣ್ಣ ತುಂಡುಗಳಾಗಿ ವಿಭಜಿಸಿ, ತೊಳೆದು, ನೂಲನ್ನಾಗಿ ಮಾಡಿ, ನಂತರ ಸಣ್ಣ ಗುಳಿಗೆಗಳನ್ನು ರೂಪಿಸಲು ಪುಡಿಮಾಡಲಾಗುತ್ತದೆ. ಈ ಗುಳಿಗೆಗಳನ್ನು ಕೈಗಾರಿಕೆಗಳಲ್ಲಿ ಬಳಸಲಾಗುತ್ತದೆ ಮತ್ತು ಅವು ಮಾನವ ಬಳಕೆಗಾಗಿ ಅಲ್ಲ. ಅವು ಆಹಾರ ಧಾನ್ಯಗಳೂ ಸಹ ಅಲ್ಲ. ರೇಟಿಂಗ್: ಶುದ್ಧ ಸುಳ್ಳು. Fact check  ವಿವರಗಳು: ಒಂದು ವೈರಲ್ ವೀಡಿಯೊ ಪ್ಲಾಸ್ಟಿಕ್‌ನಿಂದ ಗೋಧಿಯನ್ನು ಉತ್ಪಾದಿಸಲಾಗುತ್ತಿದೆ ಎನ್ನುವ ...

Read More »

ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ನಿಧನರಾದರೇ? ನಕಲಿ ಟ್ವಿಟರ್ ಖಾತೆಯ ಹೇಳಿಕೆ ವೈರಲ್ ಆಗಿದೆ; ಸತ್ಯ ಪರಿಶೀಲನೆ

ಈ ವರ್ಷದ ನೊಬೆಲ್ ಅರ್ಥಶಾಸ್ತ್ರ ಪ್ರಶಸ್ತಿ ವಿಜೇತ ಕ್ಲಾಡಿಯಾ ಗೋಲ್ಡಿನ್ ರವರ ಹೆಸರಿನಲ್ಲಿರುವ X ಕಾರ್ಪ್ (ಈ ಹಿಂದೆ ಟ್ವಿಟರ್) ಹ್ಯಾಂಡಲ್ ನಿಂದ ಅಕ್ಟೋಬರ್ 10 ರಂದು ಅನುಭವಿ ಭಾರತೀಯ ಅರ್ಥಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಅಮರ್ತ್ಯ ಸೇನ್ ರವರ ಮರಣದ ಬಗ್ಗೆ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿದವು. ಹೆಚ್ಚಿನ ಸುದ್ದಿವಾಹಿನಿಗಳು ಈ ಸುದ್ದಿಯನ್ನು ಎತ್ತಿಕೊಂಡವು ಮತ್ತು ಪರಿಶೀಲಿಸದ ಖಾತೆಯ ಒಂದು ಟ್ವೀಟ್‌ನ ಆಧಾರದ ಮೇಲೆ ಪಿಟಿಐ ಬ್ರೇಕಿಂಗ್ ನ್ಯೂಸ್ ಅನ್ನು ಸಹ ಹಾಕಿತು. ಕ್ಲಾಡಿಯಾ ಗೋಲ್ಡಿನ್ ರವರನ್ನು ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ...

Read More »

ನಡೆಯುತ್ತಿರುವ ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದ ನಡುವೆಯೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ಮಗನನ್ನು ಸೈನ್ಯಕ್ಕೆ ಕಳುಹಿಸಿದರೇ? ಸತ್ಯ ಪರಿಶೀಲನೆ

ಗಾಜಾ಼ ಪಟ್ಟಿಯಲ್ಲಿ ನಡೆಯುತ್ತಿರುವ ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದ ನಡುವೆ, ಹಮಾಸ್ ಹಠಾತ್ ದಾಳಿಯನ್ನು ಪ್ರಾರಂಭಿಸಿದ ನಂತರ, ಅನೇಕ ವೀಡಿಯೊಗಳು ಮತ್ತು ಚಿತ್ರಗಳು  ವಿವಿಧ ಹೇಳಿಕೆಗಳೊಂದಿಗೆ ಅಂತರ್ಜಾಲದಲ್ಲಿ ಪುಟಿದೆದ್ದಿವೆ. ವೈರಲ್ ಚಿತ್ರಗಳಲ್ಲೊಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ಮಗನನ್ನು ಸೇನೆಗೆ ಸೇರಲು ಕಳುಹಿಸಿದ್ದಾರೆ ಎಂದು ಹೇಳಿಕೊಂಡಿದೆ. ಈ ವೈರಲ್ ಟ್ವೀಟ್ ಬೆಂಜಮಿನ್ ನೆತನ್ಯಾಹುರವರು ಒಬ್ಬ ಯುವಕನೊಂದಿಗೆ ಇರುವ ಚಿತ್ರವನ್ನು ತೋರಿಸುತ್ತದೆ. ಟ್ವೀಟ್‌ನಲ್ಲಿ, “ಎಂತಹ ನಾಯಕ. ನಿಜವಾದ ದೇಶಭಕ್ತಿ: ಬೆಂಜಮಿನ್ ನೆತನ್ಯಾಹು ಹಮಾಸ್ ವಿರುದ್ಧದ ಯುದ್ಧದಲ್ಲಿ ಭಾಗವಹಿಸಲು ರಾಷ್ಟ್ರೀಯ ಕರ್ತವ್ಯಕ್ಕೆ ತಮ್ಮ ಮಗನನ್ನು ಕಳುಹಿಸುತ್ತಿದ್ದಾರೆ. ಇಸ್ರೇಲಿ ...

Read More »

ಹಮಾಸ್ ಇಸ್ರೇಲ್‌ ನೊಳಗೆ ಪ್ಯಾರಾಗ್ಲೈಡ್ ಮಾಡಿ ಆಟದ ಮೈದಾನವನ್ನು ಪ್ರವೇಶಿಸಿತು ಎಂದು ವೈರಲ್ ವೀಡಿಯೊ ಆರೋಪಿಸಿದೆ; ಸತ್ಯ ಪರಿಶೀಲನೆ

ಪ್ಯಾಲೇಸ್ಟಿನಿನ ಮಿಲಿಟರಿ ಗುಂಪಾದ ಹಮಾಸ್, ಇಸ್ರೇಲ್ ಮೇಲೆ ದಾಳಿ ನಡೆಸಲು ಮೋಟರೀಕೃತ ಪ್ಯಾರಾಗ್ಲೈಡರ್‌ಗಳನ್ನು ಬಳಸಿತು. ಆದರೆ, ಹಮಾಸ್‌ನ ನಿಜವಾದ ದಾಳಿಯನ್ನು ತೋರಿಸುತ್ತಿರುವುದಾಗಿ ಹೇಳುವ ದಾಳಿಗೆ ಸಂಬಂಧಿಸಿರದ ಇತರ ಅನೇಕ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅಂತಹ ಒಂದು ವೀಡಿಯೊದಲ್ಲಿ ಪ್ಯಾರಾಗ್ಲೈಡರ್‌ಗಳು ಆಟದ ಮೈದಾನದಂತೆ ಕಾಣುತ್ತಿರುವ ಸ್ಥಳದೊಳಗೆ ಹಾರಿ ಬರುವುದನ್ನು  ಕಾಣಬಹುದು. ವೀಡಿಯೊದೊಂದಿಗಿನ ಹೇಳಿಕೆಯ ಪ್ರಕಾರ “ಹಮಾಸ್ ಭಯೋತ್ಪಾದಕರು ಇಸ್ರೇಲ್‌ ನೊಳಗೆ ಪ್ಯಾರಾಗ್ಲೈಡ್ ಮಾಡಿದರು, ಅಮಾಯಕ ನಾಗರಿಕರನ್ನು ಹತ್ಯೆಗೊಳಿಸಲು, ಮಹಿಳೆಯರು ಮತ್ತು ಮಕ್ಕಳನ್ನು ಅತ್ಯಾಚಾರಕ್ಕೊಳಗಾಗಿಸಿ ಕೊಲ್ಲಲು ಮನೆ-ಮನೆಗೆ ಹೋದರು.” ಪ್ಯಾರಾಗ್ಲೈಡರ್‌ಗಳು ಗಾಳಿಯಲ್ಲಿ ಹಾರಿ ಆಟದ ಮೈದಾನದಲ್ಲಿ ...

Read More »

1982 ರ ಈ ಭಾರತೀಯ ಅಂಚೆ ಚೀಟಿಯು ಒಬ್ಬ ಮುಸ್ಲಿಂ ಕುಸ್ತಿಪಟು ಹಿಂದೂ ಕುಸ್ತಿಪಟುವನ್ನು ಹೊಡೆಯುತ್ತಿರುವುದನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

1982ರ ಭಾರತೀಯ ಅಂಚೆ ಚೀಟಿ ಎಂದು ಆರೋಪಿಸಲಾಗುತ್ತಿರುವ ಒಂದು ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಅಂಚೆ ಚೀಟಿಯಲ್ಲಿ ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯೊಂದಿಗೆ ಕುಸ್ತಿಯಾಡುತ್ತಿದ್ದು ಆ ಎರಡನೆಯ ವ್ಯಕ್ತಿಯನ್ನು ನೆಲದಿಂದ ಮೇಲೆತ್ತಿರುವುದನ್ನು ಕಾಣಬಹುದು. ಚಿತ್ರದ ಜೊತೆಗೆ ವೈರಲ್ ಆಗುತ್ತಿರುವ ಹೇಳಿಕೆಯ ಪ್ರಕಾರ ಈ ಅಂಚೆ ಚೀಟಿಯು ಮುಸ್ಲಿಂ ಕುಸ್ತಿಪಟುವೊಬ್ಬನು ಅಗ್ರ ಹಿಂದೂ ಪಟುವನ್ನು ಹೊಡೆಯುತ್ತಿರುವುದನ್ನು ಚಿತ್ರಿಸುತ್ತದೆ. ಹೇಳಿಕೆಯಲ್ಲಿರುವ ವಿಷಯ ಹೀಗಿದೆ: 1982ರಲ್ಲಿ ಏಷ್ಯನ್ ಕ್ರೀಡಾಕೂಟದ ಸಮಯದಲ್ಲಿ ಇಂದಿರಾ ಗಾಂಧಿ ಈ ಅಂಚೆಚೀಟಿಯನ್ನು ಬಿಡುಗಡೆ ಮಾಡಿದರು. ಈ ಅಂಚೆ ಚೀಟಿಯು ಒಬ್ಬ ಒಟ್ಟೋಮನ್ ...

Read More »

ಕೌನ್ ಬನೇಗಾ ಕರೋರ್ಪತಿಯಲ್ಲಿ ಮಧ್ಯ ಪ್ರದೇಶದ ಶಿವರಾಜ್ ಸಿಂಘ್ ಚೌಹಾನ್ ರವರನ್ನು ಕೆಣಕುವ ರಾಜಕೀಯ ಪ್ರಶ್ನೆಯನ್ನು ಕೇಳಲಾಗಿತ್ತೇ? ಸತ್ಯ ಪರಿಶೀಲನೆ

ಕೌನ್ ಬನೇಗಾ ಕರೋರ್ಪತಿ ಕಾರ್ಯಕ್ರಮದ್ದು ಎನ್ನಲಾಗಿರುವ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಮಿತಾಭ್ ಬಚ್ಚನ್ ರವರು ಸ್ಪರ್ಧಿಗೆ ರೂ. 20,000ಕ್ಕೆ ಒಂದು ರಾಜಕೀಯ ಪ್ರಶ್ನೆ ಕೇಳುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಪ್ರಶ್ನೆ ಹೀಗಿದೆ, इनमें से किस मुख्यमंत्री को उनकी झूठी घोषना के करण घोषना मशीन कहा जाता है? [ಅನುವಾದ: ಇವರಲ್ಲಿ ಯಾವ ಮುಖ್ಯಮಂತ್ರಿಗಳನ್ನು ಅವರ ಸುಳ್ಳು ಘೋಷಣೆಗಳ ಕಾರಣದಿಂದಾಗಿ ಘೋಷಣಾ ಮಶೀನ್ ಎಂದು ಕರೆಯುತ್ತಾರೆ?] ಸ್ಪರ್ಧಿಗೆ ಕೊಡಲಾದ ಆಯ್ಕೆಗಳು ಮನೋಹರ್ ಲಾಲ್ ಖಟ್ಟರ್, ಶಿವರಾಜ್ ಸಿಂಘ್ ...

Read More »

ಉತ್ತರ ಪ್ರದೇಶ, ಬಿಹಾರದ ಜನರನ್ನು ದೆಹಲಿಯಿಂದ ಓಡಿಸಬೇಕು ಎಂದು ಬಿಜೆಪಿ ಸಂಸದ ರಮೇಶ್ ಬಿಧುರಿ ಹೇಳಿದ್ದಾರೆಯೇ? ಸತ್ಯ ಪರಿಶೀಲನೆ

ಭಾರತೀಯ ಜನತಾ ಪಕ್ಷದ (ಬಿಜೆಪಿ) ರಮೇಶ್ ಬಿಧುರಿಯವರು ಸಂಸತ್ ಚರ್ಚೆಯ ಸಂದರ್ಭದಲ್ಲಿ ಬಹುಜನ ಸಮಾಜ ಪಕ್ಷದ ನಾಯಕರೊಬರನ್ನು ನಿಂದಿಸಿದ್ದಕ್ಕಾಗಿ ಇತ್ತೀಚೆಗೆ ಸುದ್ದಿಯಲ್ಲಿ ಬಂದರು. ಅಂದಿನಿಂದ, ಅವರಿಗೆ ಸಂಬಂಧಿತ ಹಲವಾರು ಹೇಳಿಕೆಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ. ಈ ಬಾರಿ ಅವರಿಗೆ ಸಂಬಂಧಿಸಿದ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. FACT CHECK ಉತ್ತರ ಪ್ರದೇಶ ಮತ್ತು ಬಿಹಾರದಿಂದ ವಲಸೆ ಬಂದಿರುವ ಜನರನ್ನು ದೆಹಲಿಯಿಂದ ಓಡಿಸಬೇಕು ಎಂದು ರಮೇಶ್ ಬಿಧುರಿಯವರು ಹೇಳಿದ್ದಾರೆ ಎಂದು ಪತ್ರಿಕಾ ವಾರ್ತೆಯ ಚಿತ್ರದೊಂದಿಗಿರುವ ಒಂದು ಹೇಳಿಕೆಯು ಪ್ರತಿಪಾದಿಸುತ್ತದೆ. ಈ ಚಿತ್ರದಲ್ಲಿ, ಬಿಧುರಿಯವರು ಹೇಳಿರುವುದಾಗಿ ಒಂದು ...

Read More »