Don't Miss

Author Archives: admin

ಹೆದ್ದಾರಿಯಲ್ಲಿ ಇಫ್ತಾರ್ ಕೂಟದ ವೀಡಿಯೊ ಕೋಲ್ಕತ್ತಾದ್ದಲ್ಲ, ಅದು ಕರ್ನಾಟಕದ್ದು; ಸತ್ಯ ಪರಿಶೀಲನೆ

ಹೇಳಿಕೆ/Claim: ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದ ಬೃಹತ್ ಇಫ್ತಾರ್ ಕೂಟವನ್ನು ಒಂದು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion: ಸುಳ್ಳು, ಆ ವೀಡಿಯೋ ಕರ್ನಾಟಕದ ಮಂಗಳೂರಿನ ಮುಡಿಪು ಎಂಬಲ್ಲಿಂದ ಬಂದಿದೆ. ರೇಟಿಂಗ್: ತಪ್ಪು ನಿರೂಪಣೆ — ಸತ್ಯ ಪರಿಶೀಲನೆ ವಿವರಗಳು ರಸ್ತೆಯೊಂದರ ಮೇಲೆ  ಇಫ್ತಾರ್ ಕೂಟಕ್ಕಾಗಿ ಆಸನಗಳನ್ನು ಇರಿಸಿರುವ ವೀಡಿಯೊವನ್ನು ಅದು  ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ  ಆಯೋಜಿಸಲಾಗಿರುವ ಕೂಟ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ರಂಜಾನ್ ತಿಂಗಳಲ್ಲಿ ಉಪವಾಸ ಮುರಿಯಲು ಮುಸಲ್ಮಾನರು ಸೂರ್ಯಾಸ್ತದ ನಂತರ ಇಫ್ತಾರ್ ಕೂಟವನ್ನು ನಡೆಸುತ್ತಾರೆ. *રસ્તા પર નમાઝ પછી, રસ્તા પર ઈફ્તાર ...

Read More »

ಆಪ್ ನಾಯಕರಾದ ಅತಿಶಿ, ಸೌರಭ್ ಭಾರದ್ವಾಜ್ ಅವರು X (ಟ್ವಿಟ್ಟರ್) ನಲ್ಲಿ ಕೇಜ್ರಿವಾಲ್ ಅವರನ್ನು ಅನ್‌ಫಾಲೋ ಮಾಡಿದ್ದಾರಾ? ಸತ್ಯ ಪರಿಶೀಲನೆ

Did AAP leaders Atishi, Saurabh Bhardwaj unfollow Kejriwal on X (Twitter)? Fact Check

ಹೇಳಿಕೆ/Claim: ಆಪ್ ನಾಯಕರಾದ ಅತಿಶಿ ಮತ್ತು ಸೌರಭ್ ಭಾರದ್ವಾಜ್ ಅವರು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು X (ಟ್ವಿಟ್ಟರ್) ನಲ್ಲಿ ಅನ್‌ಫಾಲೋ ಮಾಡಿದರು. ಕಡೆನುಡಿ/Conclusion: ಸುಳ್ಳು ಹೇಳಿಕೆ, ಇಬ್ಬರೂ ಈಗಲೂ X (ಟ್ವಿಟ್ಟರ್) ನಲ್ಲಿ ಕೇಜ್ರಿವಾಲ್ ಅವರನ್ನು ಅನುಸರಿಸುತ್ತಿದ್ದಾರೆ. ರೇಟಿಂಗ್: ತಪ್ಪು ನಿರೂಪಣೆ— ಸತ್ಯ ಪರಿಶೀಲನೆ ವಿವರಗಳು ದೆಹಲಿ ಸಚಿವರಾದ ಅತಿಶಿ ಮತ್ತು ಸೌರಭ್ ಭಾರದ್ವಾಜ್ ಅವರು ದೆಹಲಿ ಮುಖ್ಯಮಂತ್ರಿಗಳಾದ ಅರವಿಂದ್ ಕೇಜ್ರಿವಾಲ್ ಅವರನ್ನು Xನಲ್ಲಿ ಅನ್‌ಫಾಲೋ ಮಾಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಪೋಸ್ಟ್ ಅನ್ನು ಹಂಚಿಕೊಳ್ಳಲಾಗುತ್ತಿದೆ ಮತ್ತು ಅದನ್ನು ...

Read More »

ಸಾಲಿಸಿಟರ್ ಜನರಲ್ ರವರು ವಾದ ಮಂಡಿಸುತ್ತಿದ್ದಾಗ ಭಾರತದ ಮುಖ್ಯ ನ್ಯಾಯಮೂರ್ತಿಗಳು ನ್ಯಾಯಾಲಯದ ಕೊಠಡಿಯಿಂದ ಹೊರ ಹೋದರೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಸಾಲಿಸಿಟರ್ ಜನರಲ್ ಸರ್ವೋಚ್ಚ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿದ್ದಾಗ, ಮುಖ್ಯ ನ್ಯಾಯಾಧೀಶರು ಅಲ್ಲಿಂದ ಹೊರನಡೆದರು. ಕಡೆನುಡಿ/Conclusion: ಸಂಪೂರ್ಣವಾಗಿ ಸುಳ್ಳು. ಹೇಳಿಕೆಯನ್ನು ಸಮರ್ಥಿಸುವಂತೆ ವೀಡಿಯೊವನ್ನು ಥಟ್ಟನೆ ಕತ್ತರಿಸಲಾಗಿದೆ. ಅಧಿವೇಶನದುದ್ದಕ್ಕೂ ಸಿಜೆಐ ಉಪಸ್ಥಿತರಿದ್ದರು ಎಂಬುದನ್ನು ಮೂಲ ವೀಡಿಯೊ ತೋರಿಸುತ್ತದೆ. ರೇಟಿಂಗ್: ಸಂಪೂರ್ಣವಾಗಿ ಸುಳ್ಳು— ಸತ್ಯ ಪರಿಶೀಲನೆ ವಿವರಗಳು ರಾಜಕೀಯ ಪಕ್ಷಗಳಿಗಾಗಿ ಚುನಾವಣಾ ಬಾಂಡ್‌ಗಳ ಕುರಿತಾದ ಐತಿಹಾಸಿಕ ತೀರ್ಪಿನ ನಡುವೆ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ರವರು ತಮ್ಮ ವಾದವನ್ನು ಮಂಡಿಸುತ್ತಿರುವಾಗ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೊರನಡೆದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಹೇಳಿಕೆಗಳೊಂದಿಗೆ ವೈರಲ್ ಆಗಿದೆ. ...

Read More »

ಪ್ರಧಾನಿ ಮೋದಿಯವರು 26 ವರ್ಷದವರಾಗಿದ್ದಾಗ ಕೇದಾರನಾಥದಲ್ಲಿ ಹಸ್ತಾಧಾರ ಯೋಗ ಮುದ್ರೆಯಲ್ಲಿ ತೊಡಗಿರುವುದನ್ನು ಈ ವೀಡಿಯೊ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಪ್ರಧಾನಿ ಮೋದಿಯವರು ತಮ್ಮ 26ನೇ ವಯಸ್ಸಿನಲ್ಲಿ ಕೇದಾರನಾಥ ದೇವಸ್ಥಾನದಲ್ಲಿ ಹಸ್ತಾಧಾರ ಯೋಗ ಮುದ್ರೆಯನ್ನು ಪ್ರದರ್ಶಿಸಿದರು. ಮೋದಿಯವರ ಅಪರೂಪದ ವೀಡಿಯೊ. ಕಡೆನುಡಿ/Conclusion: ಸುಳ್ಳು. ವೀಡಿಯೊದಲ್ಲಿ ಹಸ್ತಾಧಾರ ಯೋಗ ಮಾಡುತ್ತಿರುವ ವ್ಯಕ್ತಿ ಆಚಾರ್ಯ ಸಂತೋಷ್ ತ್ರಿವೇದಿಯವರು, ಪ್ರಧಾನಿ ಮೋದಿ 26ರ ವಯಸ್ಸಿನವರಾಗಿದ್ದಾಗ ಅಲ್ಲ. ರೇಟಿಂಗ್: ಸಂಪೂರ್ಣವಾಗಿ ತಪ್ಪು-- ಸತ್ಯ ಪರಿಶೀಲನೆ ವಿವರಗಳು ಮುಂದೊಂದು ದಿನ ಈತ ಭಾರತದ ಪ್ರಧಾನಿಯಾಗುತ್ತಾರೆ ಎಂದು ಯಾರೂ ಅಂದುಕೊಂಡಿರಲಿಲ್ಲ ಎಂಬ ಹೇಳಿಕೆಯೊಂದಿಗೆ ಯೋಗಿಯೊಬ್ಬರು ತಮ್ಮ ಕೈಗಳ ಮೇಲೆ ತಲೆಕೆಳಗಾಗಿ ನಡೆಯುವ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ, ಇದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ...

Read More »

ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ರವರ ಬಂಧನವನ್ನು ಪ್ರತಿಭಟಿಸುತ್ತಿರುವ ಜನಸಮೂಹವೆಂದು ಜಗನ್ನಾಥ ರಥಯಾತ್ರೆಯ ಚಿತ್ರವನ್ನು ತೋರಿಸಲಾಗಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim: ದೆಹಲಿ ಮುಖ್ಯ ಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನದ ನಂತರ ನಡೆದ ಪ್ರತಿಭಟನೆಗಳನ್ನು ತೋರಿಸುವ ಬೃಹತ್ ಜನಸಮೂಹದ ಚಿತ್ರ. ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. 2023 ರಲ್ಲಿ ಪ್ರಸಿದ್ಧ ಜಗನ್ನಾಥ ರಥ ಯಾತ್ರೆಯಲ್ಲಿ ಭಾಗವಹಿಸಿದ ಜನರನ್ನು ಚಿತ್ರ ತೋರಿಸುತ್ತದೆ. ರೇಟಿಂಗ್: ತಪ್ಪು ನಿರೂಪಣೆ-- ಸತ್ಯ ಪರಿಶೀಲನೆ ವಿವರಗಳು ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರವರ ಬಂಧನವನ್ನು ಪ್ರತಿಭಟಿಸುತ್ತಿರುವ ಜನಸಮೂಹವನ್ನು ತೋರಿಸುತ್ತಿರುವುದೆಂಬ ಹೇಳಿಕೆಯೊಂದಿಗೆ ರಸ್ತೆಯಲ್ಲಿ ಜನರ ಬೃಹತ್ ಸಮೂಹವನ್ನು ತೋರಿಸುವ ಚಿತ್ರವೊಂದನ್ನು ಹಂಚಿಕೊಳ್ಳಲಾಗಿದೆ. ದೆಹಲಿಯ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥರಾದ ಅರವಿಂದ್ ಕೇಜ್ರಿವಾಲ್ ...

Read More »

ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷವನ್ನು ಟೀಕಿಸಿ ಬಿಜೆಪಿಯನ್ನು ಹೊಗಳುತ್ತಿರುವುದನ್ನು ತೋರಿಸುವ ತಿದ್ದಿದ ವಾಟ್ಸಾಪ್ ವೀಡಿಯೊ; ಸತ್ಯ ಪರಿಶೀಲನೆ

ಹೇಳಿಕೆ/Claim: ರಾಹುಲ್ ಗಾಂಧಿಯವರು ಬಿಜೆಪಿಯನ್ನು ಕಾಂಗ್ರೆಸ್‌ನೊಂದಿಗೆ ಗೊಂದಲಿಸಿಕೊಂಡು , ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಿದ್ದಾರೆಂದು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion: ಸುಳ್ಳು. ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಿರುವುದನ್ನು ತೋರಿಸಲು ವೀಡಿಯೊವನ್ನು ತಿದ್ದಲಾಗಿದೆ ಮತ್ತು ಧ್ವನಿಯನ್ನು ಬದಲಾಯಿಸಲಾಗಿದೆ. ರೇಟಿಂಗ್:ಸಂಪೂರ್ಣವಾಗಿ ಸುಳ್ಳು– ಸತ್ಯ ಪರಿಶೀಲನೆ ವಿವರಗಳು ಮಧ್ಯಪ್ರದೇಶದಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಪಾಲ್ಗೊಂಡು ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವೀಡಿಯೊವನ್ನು ವಾಟ್ಸಾಪ್‌ನಲ್ಲಿ “ಪರಮ ಸತ್ಯ” ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಈ ವೀಡಿಯೊದಲ್ಲಿ, ರಾಹುಲ್ ಗಾಂಧಿಯವರು ಬಿಜೆಪಿಯನ್ನು ಕಾಂಗ್ರೆಸ್‌ಗೆ ಹೋಲಿಸುತ್ತಾ ಅವರ ಪಾತ್ರಗಳನ್ನು ಹೇಗೆ ...

Read More »

ಭಾರತದಲ್ಲಿ ರಸ್ತೆ ಇಲಾಖೆಯ ಕಟ್ಟಡದ ಮುಂಭಾಗದಲ್ಲಿ ನೀರು ಕಟ್ಟಿಕೊಂಡಿರುವ “ಕಚ್ಚಾ” ರಸ್ತೆ ಕಾಣಿಸುತ್ತದೆಯೇ? ಸತ್ಯ ಪರಿಶೀಲನೆ

Waterlogged, 'kachcha' road seen in front of a building of Dept. of Roads in India? Fact Check

ಹೇಳಿಕೆ/Claim: ಭಾರತೀಯ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರನ್ನು ಟ್ಯಾಗ್ ಮಾಡಿ,  “ರಸ್ತೆಗಳ ಇಲಾಖೆ”  ಕಟ್ಟಡದ ಮುಂಭಾಗದಲ್ಲಿ ಜಲಾವೃತಗೊಂಡ ರಸ್ತೆಯನ್ನು ಹಂಚಿಕೊಳ್ಳಲಾಗಿದೆ. ಕಡೆನುಡಿ/Conclusion:ಸುಳ್ಳು. ಕಟ್ಟಡ ಮತ್ತು ಜಲಾವೃತ ರಸ್ತೆಯೆರಡೂ ನೇಪಾಳದಲ್ಲಿದೆ, ಭಾರತದಲ್ಲಿ ಅಲ್ಲ. ರೇಟಿಂಗ್:ತಪ್ಪು ನಿರೂಪಣೆ-- ಸತ್ಯ ಪರಿಶೀಲನೆ ವಿವರಗಳು ಜಲಾವೃತಗೊಂಡ ರಸ್ತೆಯನ್ನು ಚಿತ್ರಿಸುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ, ಇದು “ರಸ್ತೆ ಇಲಾಖೆ” ಕಟ್ಟಡದ ದೃಶ್ಯವೆಂಬುದು ಚಿತ್ರದ ಜೊತೆಯಿರುವ ಹೇಳಿಕೆ. பாஜகவின் சாதனைகளில் இதுவும் ஒன்று…. “Department of Roads” “சாலை போக்குவரத்து துறை”ஒட்டிய சாலைக்கே சாலை அமைக்க வக்கில்லை 💦💦💦 pic.twitter.com/53ECsR62jt ...

Read More »

ನಾಗಾರ್ಜುನ ಸಿಮೆಂಟ್ಸ್ 9/11 ವಿಷಯವಸ್ತುವನ್ನು ಒಳಗೊಂಡ ಜಾಹೀರಾತನ್ನು ತೋರಿಸಿದೆಯೇ? ಸತ್ಯ ಪರಿಶೀಲನೆ

Did Nagarjuna cements show ad featuring 9/11 theme? Fact Check

ಹೇಳಿಕೆ/Claim: ನಾಗಾರ್ಜುನ ಸಿಮೆಂಟ್ಸ್ ತನ್ನ ಜಾಹೀರಾತಿನಲ್ಲಿ “ದಯಾಹೀನವಾಗಿ”; 9/11 ದುರಂತವನ್ನು ಬಳಸಿದೆ. ಕಡೆನುಡಿ/Conclusion: ಸುಳ್ಳು, ಅಂತಹ ಯಾವುದೇ ಜಾಹೀರಾತನ್ನು ನಾಗಾರ್ಜುನ ಸಿಮೆಂಟ್ಸ್ ಎಂದೂ ತೋರಿಸಿಲ್ಲ. ರೇಟಿಂಗ್: ತಪ್ಪು ನಿರೂಪಣೆ-- ಸತ್ಯ ಪರಿಶೀಲನೆ ವಿವರಗಳು ಆಂಧ್ರಪ್ರದೇಶ ಮೂಲದ ಸಿಮೆಂಟ್ ತಯಾರಕ ಕಂಪನಿಯಾದ ನಾಗಾರ್ಜುನ ಸಿಮೆಂಟ್‌ನ ಜಾಹೀರಾತು ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ 9/11 ದಾಳಿಯನ್ನು ನೆನಪಿಸುವಂತೆ ನ್ಯೂಯಾರ್ಕ್ ನಗರದ ಅವಳಿ ಕಟ್ಟಡಗಳ ಮೇಲೆ ವಿಮಾನ ಎರಗುತ್ತಿರುವ ಅನಿಮೇಶನ್ ಅನ್ನು ತೋರಿಸಲಾಗಿದೆ, ಆದರೆ ಕಟ್ಟಡವನ್ನು ಭೇದಿಸಲು ಸಾಧ್ಯವಾಗದೆ ಅದು ತಕ್ಷಣವೇ ಹಿಂತೆಗೆದು ...

Read More »

ಡಿಎಂಕೆ ಶಾಸಕ ಮನ್ಸೂರ್ ಮೊಹಮ್ಮದ್ ಪೊಲೀಸ್ ಇನ್ಸ್‌ಪೆಕ್ಟರ್ ಗೆ ಹೊಡೆದರಾ? ವೀಡಿಯೊ ವೈರಲ್; ಸತ್ಯ ಪರಿಶೀಲನೆ

Did DMK MLA Mansoor Mohammed beat up police inspector? Video goes viral; Fact Check

ಹೇಳಿಕೆ/Claim: ಡಿಎಂಕೆ ನಾಯಕರೊಬ್ಬರು ಸಮವಸ್ತ್ರದಲ್ಲಿರುವ ಪೊಲೀಸ್ ಅಧಿಕಾರಿಯನ್ನು ಥಳಿಸುತ್ತಿರುವುದನ್ನು ತೋರಿಸುವ ವೀಡಿಯೊ, ತಮಿಳುನಾಡಿನ ಹತಾಶ ಪರಿಸ್ಥಿತಿಯನ್ನು ಸೂಚಿಸುತ್ತದೆ. ಕಡೆನುಡಿ/Conclusion: ಸುಳ್ಳು. ಮೀರಟ್ ಬಿಜೆಪಿ ಕೌನ್ಸಿಲರ್ ಮುನೀಶ್ ಕುಮಾರ್ ಅವರ ಹಳೆಯ 2018 ರ ವೀಡಿಯೊವನ್ನು ತಮಿಳುನಾಡಿನ ಡಿಎಂಕೆ ನಾಯಕ ಎಂದು ತಪ್ಪಾಗಿ ತೋರಿಸಲಾಗಿದೆ. ರೇಟಿಂಗ್: ಸಂಪೂರ್ಣವಾಗಿ ಸುಳ್ಳು— ಸತ್ಯ ಪರಿಶೀಲನೆ ವಿವರಗಳು ವ್ಯಕ್ತಿಯೊಬ್ಬ ಸಮವಸ್ತ್ರದಲ್ಲಿದ್ದ ಪೊಲೀಸ್ ಅಧಿಕಾರಿಯನ್ನು ಥಳಿಸುತ್ತಿರುವ ವೀಡಿಯೊ ಎಲ್ಲಾ ಸುದ್ದಿವಾಹಿನಿಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಆ ವ್ಯಕ್ತಿಯು ಡಿಎಂಕೆ ನಾಯಕ ಎಂದು ಹೇಳಲಾಗುತ್ತಿದೆ. ಶೀರ್ಷಿಕೆಯು ಹೀಗಿದೆ: “ಡಿಎಂಕೆ ಶಾಸಕ ಮನ್ಸೂರ್ ...

Read More »

ಬೆಂಗಳೂರಿನಲ್ಲಿ ಅಂಗಡಿಗಳ ಕೇಸರಿ ಬಣ್ಣದ ಸೂಚನಾ ಫಲಕಗಳನ್ನು ಬೃ.ಬೆಂ.ಮ.ಪಾ ತೆಗೆದುಹಾಕುತ್ತಿದ್ದಾರಾ? ಸತ್ಯ ಪರಿಶೀಲನೆ

BBMP removing saffron-coloured signboards of shops in Bengaluru? Fact Check

ಹೇಳಿಕೆ/Claim:  ಕರ್ನಾಟಕ ಸರ್ಕಾರವು ಹಿಂದೂ ಅಂಗಡಿ ಮಾಲೀಕರ ಕೇಸರಿ ಬಣ್ಣದ ಫಲಕಗಳನ್ನು ತೆಗೆದುಹಾಕುತ್ತಿದೆ. ಕಡೆನುಡಿ/Conclusion: ಸುಳ್ಳು. BBMPಯು ಬೆಂಗಳೂರಿನಲ್ಲಿ ಫೆಬ್ರವರಿ 28, 2024 ರ ಗಡುವಿನೊಂದಿಗೆ 60% ಕನ್ನಡ ನಾಮಫಲಕಗಳ ನಿಯಮವನ್ನು ಜಾರಿಗೆ ತಂದಿತ್ತು, ಆ ಗಡುವನ್ನು ಎರಡು ವಾರಗಳ ಕಾಲ ವಿಸ್ತರಿಸಲಾಯಿತು. ರೇಟಿಂಗ್: ದಾರಿತಪ್ಪಿಸುವ ಸುದ್ದಿ— ಸತ್ಯ ಪರಿಶೀಲನೆ  ವಿವರಗಳು ಹಿಂದಿಯಲ್ಲಿ ಸಂದೇಶವನ್ನು ಹೊಂದಿರುವ ವೀಡಿಯೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅದರ ಅನುವಾದ ಹೀಗಿದೆ: “ನೀವು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದರೆ, ಕರ್ನಾಟಕದಲ್ಲಿ ನಿಮ್ಮ ಅಂಗಡಿ, ಮನೆ, ಪ್ರದೇಶ, ದೇವಸ್ಥಾನ ಇತ್ಯಾದಿಗಳಲ್ಲಿ ಕೇಸರಿ ...

Read More »