Don't Miss

ಈ ಕ್ಲಿಪ್ ನಲ್ಲಿ ನಿಜವಾಗಿಯೂ ಕೆಳಜಾತಿಯ ಹಿಂದೂಗಳಿಗೆ ನೆಲದ ಮೇಲೆ ಊಟ ಬಡಿಸುವುದನ್ನು ತೋರಿಸಲಗಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಕೆಳಜಾತಿಯ ಹಿಂದೂಗಳಿಗೆ ನೆಲದ ಮೇಲೆ ಬಡಿಸಿದ ಆಹಾರವನ್ನು ತಿನ್ನಲು ಒತ್ತಾಯಿಸಲಾಗುತ್ತಿದೆ ಎಂದು ವೀಡಿಯೊ ಕ್ಲಿಪ್ ಹೇಳುತ್ತದೆ.

ಕಡೆನುಡಿ/Conclusion: ಹೇಳಿಕೆ ದಾರಿತಪ್ಪಿಸುವಂತಿದೆ. ಈ ವೀಡಿಯೊದಲ್ಲಿ ಕರ್ನಾಟಕದ ಉಡುಪಿಯ ಕೃಷ್ಣನ ದೇವಸ್ಥಾನದ ಒಂದು ಹಳೆಯ ಸಂಪ್ರದಾಯವನ್ನು ತೋರಿಸಲಾಗಿದೆ, ಭಕ್ತರು ತಮ್ಮ ಪ್ರಾರ್ಥನೆಗಳು ಪೂರೈಸಿದಾಗ ತಾವೇ ನೆಲದ ಮೇಲೆ ಪ್ರಸಾದವನ್ನು ತಿನ್ನಲು ಆಯ್ಕೆ ಮಾಡುತ್ತಾರೆ.

ರೇಟಿಂಗ್/Rating: ದಾರಿತಪ್ಪಿಸುವಂತಿದೆ–


ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಒಂದು ಕ್ಲಿಪ್ ಅನ್ನು ಹಂಚಿಕೊಳ್ಳುತ್ತಾ ಕೆಳಜಾತಿಯ ಹಿಂದೂಗಳಿಗೆ ದೇವಸ್ಥಾನಗಳಲ್ಲಿ ನೆಲದ ಮೇಲೆ ಊಟ ಮಾಡಲು ಒತ್ತಾಯಿಸಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. X ಬಳಕೆದಾರ ‘MuslimahAqsa’ ಈ ಮುಂದಿನ ಶೀರ್ಷಿಕೆಯೊಂದಿಗೆ ಅಂತಹ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ: ये हिंदू धर्म की खूबसूरती गरीब नीची जाति के लोगों को जमीन पर खाना उतारा जा रहा है और ऊंची जाति के लोगो को थाली में. इसलिए कहती हूं इस्लाम से बेहतर कोई मजहब नहीं…”

ಕನ್ನಡದಲ್ಲಿ ಭಾಷಾಂತರ ಹೀಗೆದೆ: “ಹಿಂದೂ ಧರ್ಮದ ಸೌಂದರ್ಯವೆಂದರೆ ಬಡ ಕೆಳಜಾತಿಯ ಜನರಿಗೆ ನೆಲದ ಮೇಲೆ ಮತ್ತು ಮೇಲಿನ ಜಾತಿಯ ಜನರಿಗೆ ತಟ್ಟೆಯಲ್ಲಿ ಆಹಾರ ಬಡಿಸಲಾಗುತ್ತಿದೆ. ಅದಕ್ಕಾಗಿಯೇ ಇಸ್ಲಾಂಗಿಂತ ಉತ್ತಮವಾದ ಧರ್ಮವಿಲ್ಲ ಎಂದು ಹೇಳುತ್ತೇನೆ…” ಪೋಸ್ಟ್ ಗೆ 45,000 ಕ್ಕೂ ಹೆಚ್ಚು ವೀಕ್ಷಣೆಗಳು  ದೊರಕಿವೆ ಮತ್ತು ಅದನ್ನು ಇಲ್ಲಿ ವೀಕ್ಷಿಸಬಹುದು.

27ನೇ ಅಕ್ಟೋಬರ್ 2025 ರಂದು Instagram ನಲ್ಲಿ ಇದೇ ರೀತಿಯ ಹಕ್ಕನ್ನು ಮಾಡಲಾಗಿತ್ತು. ಇಲ್ಲಿ ವೀಕ್ಷಿಸಬಹುದು:

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ಈ ಹೇಳಿಕೆಯನ್ನು ತನಿಖೆ ಮಾಡಿದ್ದು, ಅದು ದಾರಿತಪ್ಪಿಸುವಂತಿದೆ ಎಂದು ಕಂಡುಹಿಡಿದಿದೆ. ಕ್ಲಿಪ್‌ನ ನೈಜ ಸಂದರ್ಭವನ್ನು ತಪ್ಪಾಗಿ ನಿರೂಪಿಸಲಾಗಿದೆ. ಈ ದೃಶ್ಯಾವಳಿಯು ಕರ್ನಾಟಕದ ಉಡುಪಿ ಕೃಷ್ಣ ದೇವಸ್ಥಾನದಲ್ಲಿ ಬಹಳ ಹಿಂದಿನಿಂದ ನಡೆದು ಬರುತ್ತಿರುವ ಸಂಪ್ರದಾಯವನ್ನು ಚಿತ್ರಿಸುತ್ತದೆ.

ಮೊದಲನೆಯದಾಗಿ, ಈ ಹೇಳಿಕೆಯ ಕುರಿತು ಹೆಚ್ಚಿನ ಮಾಹಿತಿ ಅಥವಾ ವರದಿಗಳನ್ನು ಪಡೆಯಲು ನಾವು “ಉಡುಪಿ ಕೃಷ್ಣ ದೇವಸ್ಥಾನದ ಭಕ್ತರು ನೆಲದ ಮೇಲೆ ಆಹಾರ ತಿನ್ನುವುದು” ಎಂಬ ಪದಗುಚ್ಛದೊಂದಿಗೆ ಅಂತರ್ಜಾಲದ ಹುಡುಕಾಟವನ್ನು ನಡೆಸಿದೆವು. ಈ 700 ವರ್ಷಗಳಷ್ಟು ಹಳೆಯದಾದ ಸಂಪ್ರದಾಯದ ಬಗ್ಗೆ ಹಲವಾರು ವಾಹಿನಿಗಳು ಪೋಸ್ಟ್ ಮಾಡಿದ್ದನ್ನು ನಾವು ನೋಡಿದೆವು, ಅದನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಈ ಪದ್ಧತಿಯ ಹಿಂದಿನ ಇತಿಹಾಸ ಹೀಗಿದೆ: 16ನೇ ಶತಮಾನದಲ್ಲಿ, ಹಿಂದೂ ಸಂತ ಕನಕದಾಸರನ್ನು, ಅವರ ಕೆಳಜಾತಿಯ ಕಾರಣ ಕೃಷ್ಣನ ದೇವಸ್ಥಾನದೊಳಕ್ಕೆ ಪ್ರವೇಶಿಸಲು ಬಿಟ್ಟಿರಲಿಲ್ಲ. ಇದಕ್ಕೆ ಪ್ರತಿಕ್ರಿಯೆಯಾಗಿ, ಕನಕದಾಸರು ಶ್ರೀಕೃಷ್ಣನನ್ನು ಸ್ತುತಿಸುವ ಹಾಡನ್ನು ಹಾಡುತ್ತಾ ದೇವಾಲಯದ ಹಿಂದೆ ಕುಳಿತುಬಿಟ್ಟರು. ದಂತಕಥೆಯ ಅನುಸಾರ, ಶ್ರೀಕೃಷ್ಣನ ವಿಗ್ರಹವು ಮಾಯೆಯಂತೆ ಕನಕದಾಸರ ಕಡೆಗೆ ತಿರುಗಿತು ಮತ್ತು ಗೋಡೆಯಲ್ಲಿ ದೊಡ್ಡ ರಂಧ್ರವನ್ನು ಸೃಷ್ಟಿಸಿತು, ಈ ಮೂಲಕ ಕನಕದಾಸರು ಶ್ರೀಕೃಷ್ಣನ ವಿಗ್ರಹವನ್ನು ನೋಡಿದರು. ಆದ್ದರಿಂದ, ಇಂದಿಗೂ ಸಹ, ಎಲ್ಲಾ ಭಕ್ತರು ಈ ಕಿಟಕಿಯ ಮೂಲಕವೂ ಕೃಷ್ಣನ ದರ್ಶನ ಪಡೆಯುತ್ತಾರೆ, ಇದನ್ನು ಕನಕನ ಕಿಂಡಿ ಎಂದು ಕರೆಯಲಾಗುತ್ತದೆ. ಪ್ರಸ್ತುತ, ಯಾವುದೇ ಜಾತಿ ತಾರತಮ್ಯವಿಲ್ಲ.

ನೆಲದ ಮೇಲೆ ಆಹಾರ ತಿನ್ನುವುದು ಇಲ್ಲಿ ಒಂದು ಸಂಪ್ರದಾಯವಾಗಿದ್ದು, ಇದು ಐಚ್ಛಿಕವೇ ಹೊರತು ಕಡ್ಡಾಯವಲ್ಲ, ಅಥವಾ ಯಾವುದೇ ಒಂದು ಜಾತಿಯ ಮೇಲೆ ಹೇರಲಾಗಿರುವಂತಹದ್ದಲ್ಲ. ಕೆಲವು ಭಕ್ತರು ದೇವರು ತಮ್ಮ ಪ್ರಾರ್ಥನೆಗಳನ್ನು ಪೂರೈಸಿದ್ದಕ್ಕಾಗಿ ದೇವರಿಗೆ ಸಲ್ಲಿಸುವ ಸೇವೆಯ ರೂಪದಲ್ಲಿ, ಬಾಳೆ ಎಲೆಯನ್ನು ಬಳಸುವ ಬದಲು ನೆಲದ ಮೇಲೆ ಪ್ರಸಾದ ಅಥವಾ ಊಟವನ್ನು ಸೇವಿಸುತ್ತಾರೆ. ಈ ಪದ್ಧತಿಗೆ ಯಾವುದೇ ಜಾತಿಯ ಭೇದವಿಲ್ಲ ಮತ್ತು ಬಾಳೆ ಎಲೆಯ ಮೇಲೆ ಅಥವಾ ನೆಲದ ಮೇಲೆ ತಿನ್ನುವ ಆಯ್ಕೆಗಳಲ್ಲಿ ಎಲ್ಲರನ್ನೂ ಸಮಾನವಾಗಿ ಪರಿಗಣಿಸಲಾಗುತ್ತದೆ. ಕೆಳಗಿನ ವೀಡಿಯೊವನ್ನು ನೋಡಿ ಅಥವಾ ಇಲ್ಲಿ ಕ್ಲಿಕ್ ಮಾಡಿ.

‘miss.pragatiii’ ಎಂಬ ಮತ್ತೊಬ್ಬ ದೃಢೀಕೃತ ಇನ್‌ಸ್ಟಾಗ್ರಾಮ್ ಬಳಕೆದಾರರೂ ಕೂಡ ಈ ವೀಡಿಯೊದ ಕುರಿತು ಹೇಳಿಕೆಗಳನ್ನು ಪೋಸ್ಟ್ ಮಾಡಿದ್ದಾರೆ. ಆ ರೀಲ್‌ನಲ್ಲಿರುವ ವೀಡಿಯೊದಲ್ಲಿ “”बताओ कौन सा मंदिर है?” ಅಂದರೆ “ಹೇಳಿ, ಯಾವ ದೇವಾಲಯ?” ಎಂಬ ಶೀರ್ಷಿಕೆ ಇರುವುದನ್ನು ಕಾಣಬಹುದು. ಕರ್ನಾಟಕದ ಉಡುಪಿ ಕೃಷ್ಣನ ದೇವಸ್ಥಾನದಲ್ಲಿ ಜನರು ಬಾಳೆ ಎಲೆಯಲ್ಲಿ ಅಥವಾ ಸರಿಯಾಗಿ ಸ್ವಚ್ಛಗೊಳಿಸಿದ ನೆಲದ ಮೇಲೆ ಊಟ ಮಾಡುವ ಊಟ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ, ಊಟ ಮಾಡಲು ಮೀಸಲಿರುವ ಶುಚಿಗೊಳಿಸಿದ ನೆಲದ ಮೇಲೆ ಯಾರೂ ಕಾಲಿಡುವಂತಿಲ್ಲ, ಎಂದು ಅವರು ವಿವರಿಸುತ್ತಾರೆ. ಪೋಸ್ಟ್ ಅನ್ನು ಕೆಳಗೆ ನೋಡಿ:

 

View this post on Instagram

 

A post shared by Pragati Mohari (@miss.pragatiii)

 

ಟೈಮ್ಸ್ ನೌ ಮರಾಠಿ ಪ್ರಕಟಿಸಿದ ಮತ್ತೊಂದು ವರದಿಯು ಈ ಸಂಪ್ರದಾಯದ ಬಗ್ಗೆ ಮತ್ತಷ್ಟು ಮಾಹಿತಿ ನೀಡುತ್ತದೆ. ಕನ್ನಡದ ಅನುವಾದಿತ ವರದಿ ಹೀಗಿದೆ, “ಯಾವ ಭಕ್ತರ ಆಸೆ ಈಡೇರುತ್ತದೆಯೋ, ಅವರು ಶ್ರೀಕೃಷ್ಣನಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಮತ್ತು ಅವನ ಮೇಲಿನ ಭಕ್ತಿಯನ್ನು ತೋರಿಸಲು ಈ ದೇವಾಲಯದ ನೆಲದ ಮೇಲೆ ಅರ್ಪಿಸುವ ಆಹಾರವನ್ನು ತಿನ್ನುತ್ತಾರೆ” ಎಂದು ಉಲ್ಲೇಖಿಸಲಾಗಿದೆ. ವರದಿಯ ಒಂದು ಭಾಗವನ್ನು ಕೆಳಗೆ ವೀಕ್ಷಿಸಿ:

ಕರ್ನಾಟಕದ ಉಡುಪಿ ಕೃಷ್ಣನ ದೇವಸ್ಥಾನದ ಹಳೆಯ ಸಂಪ್ರದಾಯವನ್ನು ಈ ವೀಡಿಯೊ ಪ್ರದರ್ಶಿಸುತ್ತದೆ, ಅಲ್ಲಿ ಭಕ್ತರು ತಮ್ಮ ಪ್ರಾರ್ಥನೆಗಳು ಪೂರೈಸಿದಾಗ ಸ್ವಯಂಪ್ರೇರಣೆಯಿಂದ ನೆಲದ ಮೇಲೆ ಪ್ರಸಾದವನ್ನು ತಿನ್ನಲು ಆಯ್ಕೆ ಮಾಡುತ್ತಾರೆ ಮತ್ತು ಇದು ಕೆಳಜಾತಿಯ ಹಿಂದೂಗಳನ್ನು ನೆಲದ ಮೇಲೆ ಬಡಿಸಿದ ಆಹಾರವನ್ನು ತಿನ್ನಲು ಒತ್ತಾಯಿಸುವಂತಹ ಸನ್ನಿವೇಶವಲ್ಲ. ಜಾತಿಯನ್ನು ಲೆಕ್ಕಿಸದೆ ಎಲ್ಲರಿಗೂ ಭಕ್ತರ ಇಚ್ಛೆಯಂತೆ ತಟ್ಟೆಯಲ್ಲಿ ಅಥವಾ ನೆಲದ ಮೇಲೆ ಆಹಾರವನ್ನು ನೀಡಲಾಗುತ್ತದೆ.

ಆದ್ದರಿಂದ, ಈ ಹೇಳಿಕೆ ದಾರಿ ತಪ್ಪಿಸುವಂತಿದೆ.

******************************************************
ಇದನ್ನೂ ಓದಿ:

ಬೋಧ್ ಗಯಾ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದೆ ಬಾಂಸುರಿ ಸ್ವರಾಜ್ ರಾಷ್ಟ್ರಗೀತೆಗೆ ಅಗೌರವ ತೋರಿದರೇ? ಸತ್ಯ ಪರಿಶೀಲನೆ

ಪಂಜಾಬ್‌ನಲ್ಲಿ ಪ್ರವಾಹ ಪೀಡಿತ ಕುಟುಂಬಗಳಿಗೆ ಯುವರಾಜ್ ಸಿಂಗ್ 42 ಕೋಟಿ ರೂ. ಮೌಲ್ಯದ 600 ಟ್ರ್ಯಾಕ್ಟರ್‌ಗಳನ್ನು ನೀಡಿದ್ದಾರೆಯೇ? ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*