Don't Miss

Tag Archives: fake news

ಬ್ರಿಟಿಷ್ ನೌಕಾಪಡೆಯ ಅಧಿಕಾರಿಯೊಬ್ಬರು ಕುಡಿದ ಮತ್ತಿನಲ್ಲಿ ಚೆನ್ನೈಯಲ್ಲಿ ಗಲಾಟೆ ಮಾಡಿದ ವೀಡಿಯೊವನ್ನು ಭಾರತೀಯ ಪೋಲೀಸ್ ಶೋಷಣೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ; ಸತ್ಯ ಪರಿಶೀಲನೆ

Video of drunk British Navy Official creating ruckus in Chennai claimed as Indian police assault; Fact Check

ಹೇಳಿಕೆ/Claim: ಹಣ ನೀಡದಿದ್ದಕ್ಕಾಗಿ ಚೆನ್ನೈನಲ್ಲಿ ಭಾರತೀಯ ಪೋಲೀಸರು ಬ್ರಿಟಿಷ್ ನೌಕಾಪಡೆಯ ಅಧಿಕಾರಿಯನ್ನು ಥಳಿಸುವುದನ್ನು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. ಮದ್ಯದ ಅಮಲಿನಲ್ಲಿದ್ದ ಬ್ರಿಟಿಷ್ ನೌಕಾಪಡೆಯ ಸಿಬ್ಬಂದಿಯೊಬ್ಬರು ಚೆನ್ನೈಯ ರಸ್ತೆಯಲ್ಲಿ ಬೈಕ್ ಸವಾರರನ್ನು ಕಚ್ಚುವುದನ್ನು ತಡೆಯಲು ಪೋಲೀಸರು ಮತ್ತು ಸಾರ್ವಜನಿಕರು ಪ್ರಯತ್ನಿಸುತ್ತಿದ್ದರು. ರೇಟಿಂಗ್: ದಾರಿತಪ್ಪಿಸುವ ಸುದ್ದಿ -- ಸತ್ಯ ಪರಿಶೀಲನೆ ವಿವರಗಳು: ಹಣ ನೀಡಲು ನಿರಾಕರಿಸಿದ ಬ್ರಿಟಿಷ್ ನೌಕಾಪಡೆಯ ಅಧಿಕಾರಿಯೊಬ್ಬರಿಗೆ ಚೆನ್ನೈ ಪೊಲೀಸರು ಕಿರುಕುಳ ನೀಡಿದರೆನ್ನುವ ಹೇಳಿಕೆಯೊಂದಿಗೆ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ X ಪೋಸ್ಟ್‌ನ ಶೀರ್ಷಿಕೆಯು ಹೀಗಿದೆ: “ಬ್ರೇಕಿಂಗ್ ...

Read More »

ರಾಹುಲ್ ಗಾಂಧಿಯವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡುತ್ತಿದ್ದಾರೆ ಎನ್ನುವ ಧ್ವನಿ ಬದಲಾಯಿಸಿದ ವೀಡಿಯೊ; ಸತ್ಯ ಪರಿಶೀಲನೆ

Altered soundtrack of a video claims Rahul Gandhi resigning from Congress; Fact Check

ಹೇಳಿಕೆ/Claim: ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವ ಕುರಿತು ಹೇಳಿಕೆಯನ್ನು ಓದುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion:  ಈ ಹೇಳಿಕೆ ಸಂಪೂರ್ಣವಾಗಿ ಸುಳ್ಳು. ರಾಹುಲ್ ಗಾಂಧಿಯವರ ಕುರಿತು ಅಪಪ್ರಚಾರ ಮಾಡಲು ವಾಯನಾಡಿನಲ್ಲಿ ನಾಮಪತ್ರ ಸಲ್ಲಿಸುವ ಮೂಲ ವೀಡಿಯೊದ ಧ್ವನಿ ಸುರುಳಿಯನ್ನು  ಬದಲಾಯಿಸಲಾಗಿದೆ. ರೇಟಿಂಗ್: ಸಂಪೂರ್ಣವಾಗಿ ತಪ್ಪು -- ಸತ್ಯ ಪರಿಶೀಲನೆ ವಿವರಗಳು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಘೋಷಣೆಯನ್ನು ಓದುತ್ತಿರುವುದನ್ನು ಚಿತ್ರಿಸುವ ವೀಡಿಯೊವೊಂದನ್ನು ಟ್ವಿಟರ್ (X) ನಲ್ಲಿ ಹಂಚಿಕೊಳ್ಳಲಾಗುತ್ತಿದ್ದು ಇದು ಜನರ ಹುಬ್ಬೇರುವಂತೆ ಮಾಡಿದೆ. @MithilaWaala ಎಂಬ ಬಳಕೆದಾರರ ...

Read More »

ಸುಭಾಷ್ ಚಂದ್ರ ಬೋಸ್ ಅವರು ‘ಆಜಾದ್’ (ಸ್ವತಂತ್ರ) ಭಾರತದ ಮೊದಲ ಪ್ರಧಾನಿ ಎಂದು ಕಂಗನಾ ರಣಾವತ್ ಹೇಳಿದ್ದಾರೆ; ಸತ್ಯ ಪರಿಶೀಲನೆ

Kangana Ranaut claims Subhas Chandra Bose was the first PM of 'Azad' India; Fact Check

ಹೇಳಿಕೆ/Claim: ಆಜಾದ್ (ಸ್ವತಂತ್ರ) ಭಾರತದ ಮೊದಲ ಪ್ರಧಾನಿ ಸುಭಾಷ್ ಚಂದ್ರ ಬೋಸ್ ಎಂದು ನಟಿ ಕಂಗನಾ ರನೌತ್ ಹೇಳಿದ್ದಾರೆ. ಕಡೆನುಡಿ/Conclusion:ತಪ್ಪು ಹೇಳಿಕೆ. 1943ರಲ್ಲಿ ಸುಭಾಷ್ ಚಂದ್ರ ಬೋಸ್ ರವರನ್ನು ಸಿಂಗಾಪುರದಲ್ಲಿ ಸ್ಥಾಪಿಸಲಾದ  ಭಾರತದ ತಾತ್ಕಾಲಿಕ ಗಡಿಪಾರು ಸರ್ಕಾರದ ಪ್ರಧಾನ ಮಂತ್ರಿಯನ್ನಾಗಿ ನೇಮಿಸಲಾಗಿತ್ತು, ಸ್ವತಂತ್ರ ಭಾರತದಲ್ಲಲ್ಲ. ರೇಟಿಂಗ್: ಸಂಪೂರ್ಣವಾಗಿ ತಪ್ಪು --   ಸತ್ಯ ಪರಿಶೀಲನೆ ವಿವರಗಳು: ಬಾಲಿವುಡ್‌ನ ನಟಿ ಮತ್ತು ರಾಜಕಾರಣಿಯಾಗಿರುವ ಕಂಗನಾ ರನೌತ್ ರವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ರವರು ಭಾರತದ ಮೊದಲ ಪ್ರಧಾನಿಯಾಗಿದ್ದರು, ಜವಾಹರಲಾಲ್ ನೆಹರು ಅಲ್ಲ ...

Read More »

ಚೀನಾಕ್ಕೆ ಹೆದರಿ ಅರುಣಾಚಲ ಪ್ರದೇಶದಲ್ಲಿ 2024ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿಲ್ಲವೇ? ಸತ್ಯ ಪರಿಶೀಲನೆ

Didn't Congress field candidates in 2024 poll in Arunachal Pradesh fearing China? Fact Check

ಹೇಳಿಕೆ/Claim: ಚೀನಾಕ್ಕೆ ಹೆದರಿ ಕಾಂಗ್ರೆಸ್ ಪಕ್ಷವು ಅರುಣಾಚಲ ಪ್ರದೇಶದಲ್ಲಿ ಮುಂಬರುವ 2024 ರ ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡುವುದರಿಂದ ದೂರ ಉಳಿದಿದೆ. ಕಡೆನುಡಿ/Conclusion: ಪೋಸ್ಟ್‌ನಲ್ಲಿ ಮಾಡಿದ ಹೇಳಿಕೆ ಸುಳ್ಳು. ಇದಕ್ಕೆ ವಿರುದ್ಧವೆಂಬಂತೆ ಮುಂಬರುವ ಅರುಣಾಚಲ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ವಿಧಾನಸಭೆ ಮತ್ತು ಸಂಸದೀಯ ಕ್ಷೇತ್ರಗಳೆರಡಕ್ಕೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮುಂದುವರಿದಂತೆ, ಭಾರತದ ಚುನಾವಣಾ ಆಯೋಗದ ಮಾಹಿತಿಯು 2004 ರಿಂದ ಸಂಸತ್ ಚುನಾವಣೆಗಳಲ್ಲಿ ಕಾಂಗ್ರೆಸ್ ಸ್ಥಿರವಾಗಿ ಭಾಗವಹಿಸಿರುವುದನ್ನು ಖಚಿತಪಡಿಸುತ್ತದೆ. ರೇಟಿಂಗ್: ಸಂಪೂರ್ಣವಾಗಿ ಸುಳ್ಳು -- ಸತ್ಯ ಪರಿಶೀಲನೆ ವಿವರಗಳು: ಚೀನಾವನ್ನು ಅಸಮಾಧಾನಗೊಳಿಸುವ ಆತಂಕದಿಂದಾಗಿ ಮುಂಬರುವ ...

Read More »

ಹೆದ್ದಾರಿಯಲ್ಲಿ ಇಫ್ತಾರ್ ಕೂಟದ ವೀಡಿಯೊ ಕೋಲ್ಕತ್ತಾದ್ದಲ್ಲ, ಅದು ಕರ್ನಾಟಕದ್ದು; ಸತ್ಯ ಪರಿಶೀಲನೆ

ಹೇಳಿಕೆ/Claim: ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದ ಬೃಹತ್ ಇಫ್ತಾರ್ ಕೂಟವನ್ನು ಒಂದು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion: ಸುಳ್ಳು, ಆ ವೀಡಿಯೋ ಕರ್ನಾಟಕದ ಮಂಗಳೂರಿನ ಮುಡಿಪು ಎಂಬಲ್ಲಿಂದ ಬಂದಿದೆ. ರೇಟಿಂಗ್: ತಪ್ಪು ನಿರೂಪಣೆ — ಸತ್ಯ ಪರಿಶೀಲನೆ ವಿವರಗಳು ರಸ್ತೆಯೊಂದರ ಮೇಲೆ  ಇಫ್ತಾರ್ ಕೂಟಕ್ಕಾಗಿ ಆಸನಗಳನ್ನು ಇರಿಸಿರುವ ವೀಡಿಯೊವನ್ನು ಅದು  ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ  ಆಯೋಜಿಸಲಾಗಿರುವ ಕೂಟ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ರಂಜಾನ್ ತಿಂಗಳಲ್ಲಿ ಉಪವಾಸ ಮುರಿಯಲು ಮುಸಲ್ಮಾನರು ಸೂರ್ಯಾಸ್ತದ ನಂತರ ಇಫ್ತಾರ್ ಕೂಟವನ್ನು ನಡೆಸುತ್ತಾರೆ. *રસ્તા પર નમાઝ પછી, રસ્તા પર ઈફ્તાર ...

Read More »

ಆಪ್ ನಾಯಕರಾದ ಅತಿಶಿ, ಸೌರಭ್ ಭಾರದ್ವಾಜ್ ಅವರು X (ಟ್ವಿಟ್ಟರ್) ನಲ್ಲಿ ಕೇಜ್ರಿವಾಲ್ ಅವರನ್ನು ಅನ್‌ಫಾಲೋ ಮಾಡಿದ್ದಾರಾ? ಸತ್ಯ ಪರಿಶೀಲನೆ

Did AAP leaders Atishi, Saurabh Bhardwaj unfollow Kejriwal on X (Twitter)? Fact Check

ಹೇಳಿಕೆ/Claim: ಆಪ್ ನಾಯಕರಾದ ಅತಿಶಿ ಮತ್ತು ಸೌರಭ್ ಭಾರದ್ವಾಜ್ ಅವರು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು X (ಟ್ವಿಟ್ಟರ್) ನಲ್ಲಿ ಅನ್‌ಫಾಲೋ ಮಾಡಿದರು. ಕಡೆನುಡಿ/Conclusion: ಸುಳ್ಳು ಹೇಳಿಕೆ, ಇಬ್ಬರೂ ಈಗಲೂ X (ಟ್ವಿಟ್ಟರ್) ನಲ್ಲಿ ಕೇಜ್ರಿವಾಲ್ ಅವರನ್ನು ಅನುಸರಿಸುತ್ತಿದ್ದಾರೆ. ರೇಟಿಂಗ್: ತಪ್ಪು ನಿರೂಪಣೆ— ಸತ್ಯ ಪರಿಶೀಲನೆ ವಿವರಗಳು ದೆಹಲಿ ಸಚಿವರಾದ ಅತಿಶಿ ಮತ್ತು ಸೌರಭ್ ಭಾರದ್ವಾಜ್ ಅವರು ದೆಹಲಿ ಮುಖ್ಯಮಂತ್ರಿಗಳಾದ ಅರವಿಂದ್ ಕೇಜ್ರಿವಾಲ್ ಅವರನ್ನು Xನಲ್ಲಿ ಅನ್‌ಫಾಲೋ ಮಾಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಪೋಸ್ಟ್ ಅನ್ನು ಹಂಚಿಕೊಳ್ಳಲಾಗುತ್ತಿದೆ ಮತ್ತು ಅದನ್ನು ...

Read More »

ಸಾಲಿಸಿಟರ್ ಜನರಲ್ ರವರು ವಾದ ಮಂಡಿಸುತ್ತಿದ್ದಾಗ ಭಾರತದ ಮುಖ್ಯ ನ್ಯಾಯಮೂರ್ತಿಗಳು ನ್ಯಾಯಾಲಯದ ಕೊಠಡಿಯಿಂದ ಹೊರ ಹೋದರೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಸಾಲಿಸಿಟರ್ ಜನರಲ್ ಸರ್ವೋಚ್ಚ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿದ್ದಾಗ, ಮುಖ್ಯ ನ್ಯಾಯಾಧೀಶರು ಅಲ್ಲಿಂದ ಹೊರನಡೆದರು. ಕಡೆನುಡಿ/Conclusion: ಸಂಪೂರ್ಣವಾಗಿ ಸುಳ್ಳು. ಹೇಳಿಕೆಯನ್ನು ಸಮರ್ಥಿಸುವಂತೆ ವೀಡಿಯೊವನ್ನು ಥಟ್ಟನೆ ಕತ್ತರಿಸಲಾಗಿದೆ. ಅಧಿವೇಶನದುದ್ದಕ್ಕೂ ಸಿಜೆಐ ಉಪಸ್ಥಿತರಿದ್ದರು ಎಂಬುದನ್ನು ಮೂಲ ವೀಡಿಯೊ ತೋರಿಸುತ್ತದೆ. ರೇಟಿಂಗ್: ಸಂಪೂರ್ಣವಾಗಿ ಸುಳ್ಳು— ಸತ್ಯ ಪರಿಶೀಲನೆ ವಿವರಗಳು ರಾಜಕೀಯ ಪಕ್ಷಗಳಿಗಾಗಿ ಚುನಾವಣಾ ಬಾಂಡ್‌ಗಳ ಕುರಿತಾದ ಐತಿಹಾಸಿಕ ತೀರ್ಪಿನ ನಡುವೆ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ರವರು ತಮ್ಮ ವಾದವನ್ನು ಮಂಡಿಸುತ್ತಿರುವಾಗ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೊರನಡೆದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಹೇಳಿಕೆಗಳೊಂದಿಗೆ ವೈರಲ್ ಆಗಿದೆ. ...

Read More »

ಬೆಂಗಳೂರಿನಲ್ಲಿ ಅಂಗಡಿಗಳ ಕೇಸರಿ ಬಣ್ಣದ ಸೂಚನಾ ಫಲಕಗಳನ್ನು ಬೃ.ಬೆಂ.ಮ.ಪಾ ತೆಗೆದುಹಾಕುತ್ತಿದ್ದಾರಾ? ಸತ್ಯ ಪರಿಶೀಲನೆ

BBMP removing saffron-coloured signboards of shops in Bengaluru? Fact Check

ಹೇಳಿಕೆ/Claim:  ಕರ್ನಾಟಕ ಸರ್ಕಾರವು ಹಿಂದೂ ಅಂಗಡಿ ಮಾಲೀಕರ ಕೇಸರಿ ಬಣ್ಣದ ಫಲಕಗಳನ್ನು ತೆಗೆದುಹಾಕುತ್ತಿದೆ. ಕಡೆನುಡಿ/Conclusion: ಸುಳ್ಳು. BBMPಯು ಬೆಂಗಳೂರಿನಲ್ಲಿ ಫೆಬ್ರವರಿ 28, 2024 ರ ಗಡುವಿನೊಂದಿಗೆ 60% ಕನ್ನಡ ನಾಮಫಲಕಗಳ ನಿಯಮವನ್ನು ಜಾರಿಗೆ ತಂದಿತ್ತು, ಆ ಗಡುವನ್ನು ಎರಡು ವಾರಗಳ ಕಾಲ ವಿಸ್ತರಿಸಲಾಯಿತು. ರೇಟಿಂಗ್: ದಾರಿತಪ್ಪಿಸುವ ಸುದ್ದಿ— ಸತ್ಯ ಪರಿಶೀಲನೆ  ವಿವರಗಳು ಹಿಂದಿಯಲ್ಲಿ ಸಂದೇಶವನ್ನು ಹೊಂದಿರುವ ವೀಡಿಯೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅದರ ಅನುವಾದ ಹೀಗಿದೆ: “ನೀವು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದರೆ, ಕರ್ನಾಟಕದಲ್ಲಿ ನಿಮ್ಮ ಅಂಗಡಿ, ಮನೆ, ಪ್ರದೇಶ, ದೇವಸ್ಥಾನ ಇತ್ಯಾದಿಗಳಲ್ಲಿ ಕೇಸರಿ ...

Read More »

ಮೋದಿಯವರು ಶೇಖ್‌ಗಳಿಗೆ ಕೇಸರಿ ತೊಡಿಸಿದರೇ? ನಕಲಿ ಚಿತ್ರ ಪುನರುದ್ಭವ; ಸತ್ಯ ಪರಿಶೀಲನೆ

ಹೇಳಿಕೆ/Claim: ಮೋದಿಯವರು ಸ್ವಯಂ ಟೋಪಿ ಧರಿಸುವುದಿಲ್ಲ ಆದರೆ ಶೇಖ್‌ಗಳಿಗೆ ಕೇಸರಿ ತೊಡಿಸುತ್ತಾರೆ. ಕಡೆನುಡಿ/Conclusion: ಸುಳ್ಳು. ವೈರಲ್ ಆದ ಚಿತ್ರ ಫೋಟೋಶಾಪ್ ಮಾಡಿರುವುದು. ರೇಟಿಂಗ್: ತಪ್ಪು ನಿರೂಪಣೆ — ಸತ್ಯ ಪರಿಶೀಲನೆ ವಿವರಗಳು ಅಬುಧಾಬಿಯ ಆಡಳಿತಗಾರ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ‘MBZ’ ಜೊತೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಇರುವ ಚಿತ್ರವನ್ನು ವಾಟ್ಸಾಪ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಮೊಹಮ್ಮದ್ ರವರು ಕೇಸರಿ ಉಡುಪನ್ನು ಧರಿಸಿರುವುದನ್ನು ಕಾಣಬಹುದು. ಹಿಂದಿಯಲ್ಲಿರುವ ಶೀರ್ಷಿಕೆ ಹೀಗಿದೆ: “ಇದು ಮೋದಿ! ತಾವು ಸ್ವಯಂ ಟೋಪಿ ಧರಿಸುವುದಿಲ್ಲ, ಆದರೆ ಶೇಖ್ ಕೇಸರಿ ಧರಿಸುವಂತೆ ...

Read More »

ಯೋಗಿ ಆದಿತ್ಯನಾಥ್ ಸರ್ಕಾರವು ಉತ್ತರ ಪ್ರದೇಶದಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿ ಮೀಸಲಾತಿಯನ್ನು ರದ್ದುಗೊಳಿಸಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಯೋಗಿ ಆದಿತ್ಯನಾಥ್ ಸರ್ಕಾರವು ಉತ್ತರ ಪ್ರದೇಶದ ಖಾಸಗಿ ವೈದ್ಯಕೀಯ ಕಾಲೇಜುಗಳಿಂದ ಮೀಸಲಾತಿಯನ್ನು ರದ್ದುಗೊಳಿಸಿದೆ. ಕಡೆನುಡಿ/Conclusion: ಸುಳ್ಳು. ಯೋಗಿ ಆದಿತ್ಯನಾಥ್ ಸರ್ಕಾರವು ಉತ್ತರ ಪ್ರದೇಶದ ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಿಂದ ಮೀಸಲಾತಿಯನ್ನು ರದ್ದುಗೊಳಿಸಿಲ್ಲ. ಹಿಂದಿನ ಅಖಿಲೇಶ್ ಯಾದವರ ಸಮಾಜವಾದಿ ಪಕ್ಷದ ಸರ್ಕಾರವೇ ಈ ನಿಯಮವನ್ನು ಜಾರಿಗೆ ತಂದಿತ್ತು. ರೇಟಿಂಗ್: ತಪ್ಪು ನಿರೂಪಣೆ-- ಸತ್ಯ ಪರಿಶೀಲನೆ ವಿವರಗಳು ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರವು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಮೀಸಲಾತಿಯನ್ನು ರದ್ದುಗೊಳಿಸಿದೆ ಎಂಬ ಹೇಳಿಕೆಯೊಂದಿಗೆ, ಪೋಸ್ಟರ್‌ ಹೊಂದಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.”ಯುಪಿ ...

Read More »