ಕೆನಡಾ ಸರ್ಕಾರವು ಆರ್ಎಸ್ಎಸ್ ಅನ್ನು ನಿಷೇಧಿಸಿದೆಯೆಂದು ಹೇಳುವ ವೀಡಿಯೊ; ಸತ್ಯ ಪರಿಶೀಲನೆ

ಕೆನಡಾದಲ್ಲಿ ಖಲಿಸ್ತಾನ-ಪರ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಂತರ ಕೆನಡಾ ಮತ್ತು ಭಾರತದ ನಡುವಿನ ರಾಜತಾಂತ್ರಿಕ ವೈಮನಸ್ಯದ ನಡುವೆಯೇ ಕೆನಡಾ ಸರ್ಕಾರವು ಭಾರತದ ಒಂದು ಬಲಪಂಥೀಯ ಸಂಘಟನೆಯಾದ ಆರ್ಎಸ್ಎಸ್ ಅನ್ನು ನಿಷೇಧಿಸಿದೆ ಎನ್ನುವ ವೀಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಭಾರತದಕ್ಕೆ ತಾವು ಕಳಿಸಿರುವ ರಾಯಭಾರಿಯನ್ನು ಹಿಂದಕ್ಕೆ ಕರೆಸಲು ಮತ್ತು ಕೆನಡಾದಲ್ಲಿರುವ ಭಾರತದ ರಾಯಭಾರಿಯನ್ನು ಹಿಂದೆ ಕಳುಹಿಸಲು ಕೋರುವುದರ ಜೊತೆಗೆ ಭಾರತದೊಂದಿಗಿನ ವ್ಯಾಪಾರದ ಮೇಲೆ ನಿಷೇಧವನ್ನು ಹೇರುವಂತೆ ಈ ವೀಡಿಯೊ ಕೆನಡಾ ಸರ್ಕಾರವನ್ನು ಒತ್ತಾಯಿಸುತ್ತದೆ. […]