ಹೇಳಿಕೆ/Claim: ಬಿಜೆಪಿಯು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ SC/ST/OBC ಮೀಸಲಾತಿಯನ್ನು ಕೊನೆಗೊಳಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ಬಿಜೆಪಿ ಎಲ್ಲಾ ಮೀಸಲಾತಿಗಳನ್ನು ರದ್ದುಪಡಿಸುತ್ತದೆ ಎಂದು ಅಮಿತ್ ಶಾ ಹೇಳುತ್ತಿದ್ದಾರೆ ಎಂದು ತೋರಿಸಲು ಧ್ವನಿಯನ್ನು ಬದಲಾಯಿಸಿ ವೈರಲ್ ವೀಡಿಯೊವನ್ನು ಎಡಿಟ್ ಮಾಡಲಾಗಿದೆ. ರೇಟಿಂಗ್: ತಪ್ಪು ನಿರೂಪಣೆ — ಸತ್ಯ ಪರಿಶೀಲನೆ ವಿವರಗಳು: ಬಿಜೆಪಿ ಸರ್ಕಾರ ಪುನಃ ರಚನೆಯಾದರೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ (SC/ST/OBC) ನೀಡಲಾಗಿದ್ದ […]
ಹೇಳಿಕೆ/Claim: ಹಣ ನೀಡದಿದ್ದಕ್ಕಾಗಿ ಚೆನ್ನೈನಲ್ಲಿ ಭಾರತೀಯ ಪೋಲೀಸರು ಬ್ರಿಟಿಷ್ ನೌಕಾಪಡೆಯ ಅಧಿಕಾರಿಯನ್ನು ಥಳಿಸುವುದನ್ನು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. ಮದ್ಯದ ಅಮಲಿನಲ್ಲಿದ್ದ ಬ್ರಿಟಿಷ್ ನೌಕಾಪಡೆಯ ಸಿಬ್ಬಂದಿಯೊಬ್ಬರು ಚೆನ್ನೈಯ ರಸ್ತೆಯಲ್ಲಿ ಬೈಕ್ ಸವಾರರನ್ನು ಕಚ್ಚುವುದನ್ನು ತಡೆಯಲು ಪೋಲೀಸರು ಮತ್ತು ಸಾರ್ವಜನಿಕರು ಪ್ರಯತ್ನಿಸುತ್ತಿದ್ದರು. ರೇಟಿಂಗ್: ದಾರಿತಪ್ಪಿಸುವ ಸುದ್ದಿ — ಸತ್ಯ ಪರಿಶೀಲನೆ ವಿವರಗಳು: ಹಣ ನೀಡಲು ನಿರಾಕರಿಸಿದ ಬ್ರಿಟಿಷ್ ನೌಕಾಪಡೆಯ ಅಧಿಕಾರಿಯೊಬ್ಬರಿಗೆ ಚೆನ್ನೈ ಪೊಲೀಸರು ಕಿರುಕುಳ ನೀಡಿದರೆನ್ನುವ ಹೇಳಿಕೆಯೊಂದಿಗೆ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ […]
ಹೇಳಿಕೆ/Claim: ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವ ಕುರಿತು ಹೇಳಿಕೆಯನ್ನು ಓದುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion: ಈ ಹೇಳಿಕೆ ಸಂಪೂರ್ಣವಾಗಿ ಸುಳ್ಳು. ರಾಹುಲ್ ಗಾಂಧಿಯವರ ಕುರಿತು ಅಪಪ್ರಚಾರ ಮಾಡಲು ವಾಯನಾಡಿನಲ್ಲಿ ನಾಮಪತ್ರ ಸಲ್ಲಿಸುವ ಮೂಲ ವೀಡಿಯೊದ ಧ್ವನಿ ಸುರುಳಿಯನ್ನು ಬದಲಾಯಿಸಲಾಗಿದೆ. ರೇಟಿಂಗ್: ಸಂಪೂರ್ಣವಾಗಿ ತಪ್ಪು — ಸತ್ಯ ಪರಿಶೀಲನೆ ವಿವರಗಳು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಘೋಷಣೆಯನ್ನು ಓದುತ್ತಿರುವುದನ್ನು ಚಿತ್ರಿಸುವ ವೀಡಿಯೊವೊಂದನ್ನು ಟ್ವಿಟರ್ (X) ನಲ್ಲಿ ಹಂಚಿಕೊಳ್ಳಲಾಗುತ್ತಿದ್ದು ಇದು ಜನರ […]
ಹೇಳಿಕೆ/Claim: ಆಜಾದ್ (ಸ್ವತಂತ್ರ) ಭಾರತದ ಮೊದಲ ಪ್ರಧಾನಿ ಸುಭಾಷ್ ಚಂದ್ರ ಬೋಸ್ ಎಂದು ನಟಿ ಕಂಗನಾ ರನೌತ್ ಹೇಳಿದ್ದಾರೆ. ಕಡೆನುಡಿ/Conclusion:ತಪ್ಪು ಹೇಳಿಕೆ. 1943ರಲ್ಲಿ ಸುಭಾಷ್ ಚಂದ್ರ ಬೋಸ್ ರವರನ್ನು ಸಿಂಗಾಪುರದಲ್ಲಿ ಸ್ಥಾಪಿಸಲಾದ ಭಾರತದ ತಾತ್ಕಾಲಿಕ ಗಡಿಪಾರು ಸರ್ಕಾರದ ಪ್ರಧಾನ ಮಂತ್ರಿಯನ್ನಾಗಿ ನೇಮಿಸಲಾಗಿತ್ತು, ಸ್ವತಂತ್ರ ಭಾರತದಲ್ಲಲ್ಲ. ರೇಟಿಂಗ್: ಸಂಪೂರ್ಣವಾಗಿ ತಪ್ಪು — ಸತ್ಯ ಪರಿಶೀಲನೆ ವಿವರಗಳು: ಬಾಲಿವುಡ್ನ ನಟಿ ಮತ್ತು ರಾಜಕಾರಣಿಯಾಗಿರುವ ಕಂಗನಾ ರನೌತ್ ರವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ರವರು ಭಾರತದ […]
ಹೇಳಿಕೆ/Claim: ಚೀನಾಕ್ಕೆ ಹೆದರಿ ಕಾಂಗ್ರೆಸ್ ಪಕ್ಷವು ಅರುಣಾಚಲ ಪ್ರದೇಶದಲ್ಲಿ ಮುಂಬರುವ 2024 ರ ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡುವುದರಿಂದ ದೂರ ಉಳಿದಿದೆ. ಕಡೆನುಡಿ/Conclusion: ಪೋಸ್ಟ್ನಲ್ಲಿ ಮಾಡಿದ ಹೇಳಿಕೆ ಸುಳ್ಳು. ಇದಕ್ಕೆ ವಿರುದ್ಧವೆಂಬಂತೆ ಮುಂಬರುವ ಅರುಣಾಚಲ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ವಿಧಾನಸಭೆ ಮತ್ತು ಸಂಸದೀಯ ಕ್ಷೇತ್ರಗಳೆರಡಕ್ಕೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮುಂದುವರಿದಂತೆ, ಭಾರತದ ಚುನಾವಣಾ ಆಯೋಗದ ಮಾಹಿತಿಯು 2004 ರಿಂದ ಸಂಸತ್ ಚುನಾವಣೆಗಳಲ್ಲಿ ಕಾಂಗ್ರೆಸ್ ಸ್ಥಿರವಾಗಿ ಭಾಗವಹಿಸಿರುವುದನ್ನು ಖಚಿತಪಡಿಸುತ್ತದೆ. ರೇಟಿಂಗ್: ಸಂಪೂರ್ಣವಾಗಿ ಸುಳ್ಳು — ಸತ್ಯ ಪರಿಶೀಲನೆ […]
ಹೇಳಿಕೆ/Claim: ಸಾಲಿಸಿಟರ್ ಜನರಲ್ ಸರ್ವೋಚ್ಚ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿದ್ದಾಗ, ಮುಖ್ಯ ನ್ಯಾಯಾಧೀಶರು ಅಲ್ಲಿಂದ ಹೊರನಡೆದರು. ಕಡೆನುಡಿ/Conclusion: ಸಂಪೂರ್ಣವಾಗಿ ಸುಳ್ಳು. ಹೇಳಿಕೆಯನ್ನು ಸಮರ್ಥಿಸುವಂತೆ ವೀಡಿಯೊವನ್ನು ಥಟ್ಟನೆ ಕತ್ತರಿಸಲಾಗಿದೆ. ಅಧಿವೇಶನದುದ್ದಕ್ಕೂ ಸಿಜೆಐ ಉಪಸ್ಥಿತರಿದ್ದರು ಎಂಬುದನ್ನು ಮೂಲ ವೀಡಿಯೊ ತೋರಿಸುತ್ತದೆ. ರೇಟಿಂಗ್: ಸಂಪೂರ್ಣವಾಗಿ ಸುಳ್ಳು— ಸತ್ಯ ಪರಿಶೀಲನೆ ವಿವರಗಳು ರಾಜಕೀಯ ಪಕ್ಷಗಳಿಗಾಗಿ ಚುನಾವಣಾ ಬಾಂಡ್ಗಳ ಕುರಿತಾದ ಐತಿಹಾಸಿಕ ತೀರ್ಪಿನ ನಡುವೆ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ರವರು ತಮ್ಮ ವಾದವನ್ನು ಮಂಡಿಸುತ್ತಿರುವಾಗ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೊರನಡೆದ ವೀಡಿಯೊ ಸಾಮಾಜಿಕ […]
ಹೇಳಿಕೆ/Claim: ಪ್ರಧಾನಿ ಮೋದಿಯವರು ತಮ್ಮ 26ನೇ ವಯಸ್ಸಿನಲ್ಲಿ ಕೇದಾರನಾಥ ದೇವಸ್ಥಾನದಲ್ಲಿ ಹಸ್ತಾಧಾರ ಯೋಗ ಮುದ್ರೆಯನ್ನು ಪ್ರದರ್ಶಿಸಿದರು. ಮೋದಿಯವರ ಅಪರೂಪದ ವೀಡಿಯೊ. ಕಡೆನುಡಿ/Conclusion: ಸುಳ್ಳು. ವೀಡಿಯೊದಲ್ಲಿ ಹಸ್ತಾಧಾರ ಯೋಗ ಮಾಡುತ್ತಿರುವ ವ್ಯಕ್ತಿ ಆಚಾರ್ಯ ಸಂತೋಷ್ ತ್ರಿವೇದಿಯವರು, ಪ್ರಧಾನಿ ಮೋದಿ 26ರ ವಯಸ್ಸಿನವರಾಗಿದ್ದಾಗ ಅಲ್ಲ. ರೇಟಿಂಗ್: ಸಂಪೂರ್ಣವಾಗಿ ತಪ್ಪು– ಸತ್ಯ ಪರಿಶೀಲನೆ ವಿವರಗಳು ಮುಂದೊಂದು ದಿನ ಈತ ಭಾರತದ ಪ್ರಧಾನಿಯಾಗುತ್ತಾರೆ ಎಂದು ಯಾರೂ ಅಂದುಕೊಂಡಿರಲಿಲ್ಲ ಎಂಬ ಹೇಳಿಕೆಯೊಂದಿಗೆ ಯೋಗಿಯೊಬ್ಬರು ತಮ್ಮ ಕೈಗಳ ಮೇಲೆ ತಲೆಕೆಳಗಾಗಿ ನಡೆಯುವ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ […]
ಹೇಳಿಕೆ/Claim: ದೆಹಲಿ ಮುಖ್ಯ ಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನದ ನಂತರ ನಡೆದ ಪ್ರತಿಭಟನೆಗಳನ್ನು ತೋರಿಸುವ ಬೃಹತ್ ಜನಸಮೂಹದ ಚಿತ್ರ. ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. 2023 ರಲ್ಲಿ ಪ್ರಸಿದ್ಧ ಜಗನ್ನಾಥ ರಥ ಯಾತ್ರೆಯಲ್ಲಿ ಭಾಗವಹಿಸಿದ ಜನರನ್ನು ಚಿತ್ರ ತೋರಿಸುತ್ತದೆ. ರೇಟಿಂಗ್: ತಪ್ಪು ನಿರೂಪಣೆ– ಸತ್ಯ ಪರಿಶೀಲನೆ ವಿವರಗಳು ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರವರ ಬಂಧನವನ್ನು ಪ್ರತಿಭಟಿಸುತ್ತಿರುವ ಜನಸಮೂಹವನ್ನು ತೋರಿಸುತ್ತಿರುವುದೆಂಬ ಹೇಳಿಕೆಯೊಂದಿಗೆ ರಸ್ತೆಯಲ್ಲಿ ಜನರ ಬೃಹತ್ ಸಮೂಹವನ್ನು ತೋರಿಸುವ ಚಿತ್ರವೊಂದನ್ನು ಹಂಚಿಕೊಳ್ಳಲಾಗಿದೆ. ದೆಹಲಿಯ ಮುಖ್ಯಮಂತ್ರಿ ಮತ್ತು ಆಮ್ […]
ಹೇಳಿಕೆ/Claim: ಭಾರತೀಯ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರನ್ನು ಟ್ಯಾಗ್ ಮಾಡಿ, “ರಸ್ತೆಗಳ ಇಲಾಖೆ” ಕಟ್ಟಡದ ಮುಂಭಾಗದಲ್ಲಿ ಜಲಾವೃತಗೊಂಡ ರಸ್ತೆಯನ್ನು ಹಂಚಿಕೊಳ್ಳಲಾಗಿದೆ. ಕಡೆನುಡಿ/Conclusion:ಸುಳ್ಳು. ಕಟ್ಟಡ ಮತ್ತು ಜಲಾವೃತ ರಸ್ತೆಯೆರಡೂ ನೇಪಾಳದಲ್ಲಿದೆ, ಭಾರತದಲ್ಲಿ ಅಲ್ಲ. ರೇಟಿಂಗ್:ತಪ್ಪು ನಿರೂಪಣೆ– ಸತ್ಯ ಪರಿಶೀಲನೆ ವಿವರಗಳು ಜಲಾವೃತಗೊಂಡ ರಸ್ತೆಯನ್ನು ಚಿತ್ರಿಸುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ, ಇದು “ರಸ್ತೆ ಇಲಾಖೆ” ಕಟ್ಟಡದ ದೃಶ್ಯವೆಂಬುದು ಚಿತ್ರದ ಜೊತೆಯಿರುವ ಹೇಳಿಕೆ. பாஜகவின் சாதனைகளில் இதுவும் ஒன்று…. “Department of Roads” “சாலை போக்குவரத்து துறை”ஒட்டிய சாலைக்கே […]
ಹೇಳಿಕೆ/Claim: ಡಿಎಂಕೆ ನಾಯಕರೊಬ್ಬರು ಸಮವಸ್ತ್ರದಲ್ಲಿರುವ ಪೊಲೀಸ್ ಅಧಿಕಾರಿಯನ್ನು ಥಳಿಸುತ್ತಿರುವುದನ್ನು ತೋರಿಸುವ ವೀಡಿಯೊ, ತಮಿಳುನಾಡಿನ ಹತಾಶ ಪರಿಸ್ಥಿತಿಯನ್ನು ಸೂಚಿಸುತ್ತದೆ. ಕಡೆನುಡಿ/Conclusion: ಸುಳ್ಳು. ಮೀರಟ್ ಬಿಜೆಪಿ ಕೌನ್ಸಿಲರ್ ಮುನೀಶ್ ಕುಮಾರ್ ಅವರ ಹಳೆಯ 2018 ರ ವೀಡಿಯೊವನ್ನು ತಮಿಳುನಾಡಿನ ಡಿಎಂಕೆ ನಾಯಕ ಎಂದು ತಪ್ಪಾಗಿ ತೋರಿಸಲಾಗಿದೆ. ರೇಟಿಂಗ್: ಸಂಪೂರ್ಣವಾಗಿ ಸುಳ್ಳು— ಸತ್ಯ ಪರಿಶೀಲನೆ ವಿವರಗಳು ವ್ಯಕ್ತಿಯೊಬ್ಬ ಸಮವಸ್ತ್ರದಲ್ಲಿದ್ದ ಪೊಲೀಸ್ ಅಧಿಕಾರಿಯನ್ನು ಥಳಿಸುತ್ತಿರುವ ವೀಡಿಯೊ ಎಲ್ಲಾ ಸುದ್ದಿವಾಹಿನಿಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಆ ವ್ಯಕ್ತಿಯು ಡಿಎಂಕೆ ನಾಯಕ ಎಂದು ಹೇಳಲಾಗುತ್ತಿದೆ. […]