Don't Miss

Monthly Archives: March 2024

ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷವನ್ನು ಟೀಕಿಸಿ ಬಿಜೆಪಿಯನ್ನು ಹೊಗಳುತ್ತಿರುವುದನ್ನು ತೋರಿಸುವ ತಿದ್ದಿದ ವಾಟ್ಸಾಪ್ ವೀಡಿಯೊ; ಸತ್ಯ ಪರಿಶೀಲನೆ

ಹೇಳಿಕೆ/Claim: ರಾಹುಲ್ ಗಾಂಧಿಯವರು ಬಿಜೆಪಿಯನ್ನು ಕಾಂಗ್ರೆಸ್‌ನೊಂದಿಗೆ ಗೊಂದಲಿಸಿಕೊಂಡು , ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಿದ್ದಾರೆಂದು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion: ಸುಳ್ಳು. ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಿರುವುದನ್ನು ತೋರಿಸಲು ವೀಡಿಯೊವನ್ನು ತಿದ್ದಲಾಗಿದೆ ಮತ್ತು ಧ್ವನಿಯನ್ನು ಬದಲಾಯಿಸಲಾಗಿದೆ. ರೇಟಿಂಗ್:ಸಂಪೂರ್ಣವಾಗಿ ಸುಳ್ಳು– ಸತ್ಯ ಪರಿಶೀಲನೆ ವಿವರಗಳು ಮಧ್ಯಪ್ರದೇಶದಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಪಾಲ್ಗೊಂಡು ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವೀಡಿಯೊವನ್ನು ವಾಟ್ಸಾಪ್‌ನಲ್ಲಿ “ಪರಮ ಸತ್ಯ” ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಈ ವೀಡಿಯೊದಲ್ಲಿ, ರಾಹುಲ್ ಗಾಂಧಿಯವರು ಬಿಜೆಪಿಯನ್ನು ಕಾಂಗ್ರೆಸ್‌ಗೆ ಹೋಲಿಸುತ್ತಾ ಅವರ ಪಾತ್ರಗಳನ್ನು ಹೇಗೆ ...

Read More »

ಭಾರತದಲ್ಲಿ ರಸ್ತೆ ಇಲಾಖೆಯ ಕಟ್ಟಡದ ಮುಂಭಾಗದಲ್ಲಿ ನೀರು ಕಟ್ಟಿಕೊಂಡಿರುವ “ಕಚ್ಚಾ” ರಸ್ತೆ ಕಾಣಿಸುತ್ತದೆಯೇ? ಸತ್ಯ ಪರಿಶೀಲನೆ

Waterlogged, 'kachcha' road seen in front of a building of Dept. of Roads in India? Fact Check

ಹೇಳಿಕೆ/Claim: ಭಾರತೀಯ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರನ್ನು ಟ್ಯಾಗ್ ಮಾಡಿ,  “ರಸ್ತೆಗಳ ಇಲಾಖೆ”  ಕಟ್ಟಡದ ಮುಂಭಾಗದಲ್ಲಿ ಜಲಾವೃತಗೊಂಡ ರಸ್ತೆಯನ್ನು ಹಂಚಿಕೊಳ್ಳಲಾಗಿದೆ. ಕಡೆನುಡಿ/Conclusion:ಸುಳ್ಳು. ಕಟ್ಟಡ ಮತ್ತು ಜಲಾವೃತ ರಸ್ತೆಯೆರಡೂ ನೇಪಾಳದಲ್ಲಿದೆ, ಭಾರತದಲ್ಲಿ ಅಲ್ಲ. ರೇಟಿಂಗ್:ತಪ್ಪು ನಿರೂಪಣೆ-- ಸತ್ಯ ಪರಿಶೀಲನೆ ವಿವರಗಳು ಜಲಾವೃತಗೊಂಡ ರಸ್ತೆಯನ್ನು ಚಿತ್ರಿಸುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ, ಇದು “ರಸ್ತೆ ಇಲಾಖೆ” ಕಟ್ಟಡದ ದೃಶ್ಯವೆಂಬುದು ಚಿತ್ರದ ಜೊತೆಯಿರುವ ಹೇಳಿಕೆ. பாஜகவின் சாதனைகளில் இதுவும் ஒன்று…. “Department of Roads” “சாலை போக்குவரத்து துறை”ஒட்டிய சாலைக்கே சாலை அமைக்க வக்கில்லை 💦💦💦 pic.twitter.com/53ECsR62jt ...

Read More »

ನಾಗಾರ್ಜುನ ಸಿಮೆಂಟ್ಸ್ 9/11 ವಿಷಯವಸ್ತುವನ್ನು ಒಳಗೊಂಡ ಜಾಹೀರಾತನ್ನು ತೋರಿಸಿದೆಯೇ? ಸತ್ಯ ಪರಿಶೀಲನೆ

Did Nagarjuna cements show ad featuring 9/11 theme? Fact Check

ಹೇಳಿಕೆ/Claim: ನಾಗಾರ್ಜುನ ಸಿಮೆಂಟ್ಸ್ ತನ್ನ ಜಾಹೀರಾತಿನಲ್ಲಿ “ದಯಾಹೀನವಾಗಿ”; 9/11 ದುರಂತವನ್ನು ಬಳಸಿದೆ. ಕಡೆನುಡಿ/Conclusion: ಸುಳ್ಳು, ಅಂತಹ ಯಾವುದೇ ಜಾಹೀರಾತನ್ನು ನಾಗಾರ್ಜುನ ಸಿಮೆಂಟ್ಸ್ ಎಂದೂ ತೋರಿಸಿಲ್ಲ. ರೇಟಿಂಗ್: ತಪ್ಪು ನಿರೂಪಣೆ-- ಸತ್ಯ ಪರಿಶೀಲನೆ ವಿವರಗಳು ಆಂಧ್ರಪ್ರದೇಶ ಮೂಲದ ಸಿಮೆಂಟ್ ತಯಾರಕ ಕಂಪನಿಯಾದ ನಾಗಾರ್ಜುನ ಸಿಮೆಂಟ್‌ನ ಜಾಹೀರಾತು ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ 9/11 ದಾಳಿಯನ್ನು ನೆನಪಿಸುವಂತೆ ನ್ಯೂಯಾರ್ಕ್ ನಗರದ ಅವಳಿ ಕಟ್ಟಡಗಳ ಮೇಲೆ ವಿಮಾನ ಎರಗುತ್ತಿರುವ ಅನಿಮೇಶನ್ ಅನ್ನು ತೋರಿಸಲಾಗಿದೆ, ಆದರೆ ಕಟ್ಟಡವನ್ನು ಭೇದಿಸಲು ಸಾಧ್ಯವಾಗದೆ ಅದು ತಕ್ಷಣವೇ ಹಿಂತೆಗೆದು ...

Read More »

ಡಿಎಂಕೆ ಶಾಸಕ ಮನ್ಸೂರ್ ಮೊಹಮ್ಮದ್ ಪೊಲೀಸ್ ಇನ್ಸ್‌ಪೆಕ್ಟರ್ ಗೆ ಹೊಡೆದರಾ? ವೀಡಿಯೊ ವೈರಲ್; ಸತ್ಯ ಪರಿಶೀಲನೆ

Did DMK MLA Mansoor Mohammed beat up police inspector? Video goes viral; Fact Check

ಹೇಳಿಕೆ/Claim: ಡಿಎಂಕೆ ನಾಯಕರೊಬ್ಬರು ಸಮವಸ್ತ್ರದಲ್ಲಿರುವ ಪೊಲೀಸ್ ಅಧಿಕಾರಿಯನ್ನು ಥಳಿಸುತ್ತಿರುವುದನ್ನು ತೋರಿಸುವ ವೀಡಿಯೊ, ತಮಿಳುನಾಡಿನ ಹತಾಶ ಪರಿಸ್ಥಿತಿಯನ್ನು ಸೂಚಿಸುತ್ತದೆ. ಕಡೆನುಡಿ/Conclusion: ಸುಳ್ಳು. ಮೀರಟ್ ಬಿಜೆಪಿ ಕೌನ್ಸಿಲರ್ ಮುನೀಶ್ ಕುಮಾರ್ ಅವರ ಹಳೆಯ 2018 ರ ವೀಡಿಯೊವನ್ನು ತಮಿಳುನಾಡಿನ ಡಿಎಂಕೆ ನಾಯಕ ಎಂದು ತಪ್ಪಾಗಿ ತೋರಿಸಲಾಗಿದೆ. ರೇಟಿಂಗ್: ಸಂಪೂರ್ಣವಾಗಿ ಸುಳ್ಳು— ಸತ್ಯ ಪರಿಶೀಲನೆ ವಿವರಗಳು ವ್ಯಕ್ತಿಯೊಬ್ಬ ಸಮವಸ್ತ್ರದಲ್ಲಿದ್ದ ಪೊಲೀಸ್ ಅಧಿಕಾರಿಯನ್ನು ಥಳಿಸುತ್ತಿರುವ ವೀಡಿಯೊ ಎಲ್ಲಾ ಸುದ್ದಿವಾಹಿನಿಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಆ ವ್ಯಕ್ತಿಯು ಡಿಎಂಕೆ ನಾಯಕ ಎಂದು ಹೇಳಲಾಗುತ್ತಿದೆ. ಶೀರ್ಷಿಕೆಯು ಹೀಗಿದೆ: “ಡಿಎಂಕೆ ಶಾಸಕ ಮನ್ಸೂರ್ ...

Read More »

ಬೆಂಗಳೂರಿನಲ್ಲಿ ಅಂಗಡಿಗಳ ಕೇಸರಿ ಬಣ್ಣದ ಸೂಚನಾ ಫಲಕಗಳನ್ನು ಬೃ.ಬೆಂ.ಮ.ಪಾ ತೆಗೆದುಹಾಕುತ್ತಿದ್ದಾರಾ? ಸತ್ಯ ಪರಿಶೀಲನೆ

BBMP removing saffron-coloured signboards of shops in Bengaluru? Fact Check

ಹೇಳಿಕೆ/Claim:  ಕರ್ನಾಟಕ ಸರ್ಕಾರವು ಹಿಂದೂ ಅಂಗಡಿ ಮಾಲೀಕರ ಕೇಸರಿ ಬಣ್ಣದ ಫಲಕಗಳನ್ನು ತೆಗೆದುಹಾಕುತ್ತಿದೆ. ಕಡೆನುಡಿ/Conclusion: ಸುಳ್ಳು. BBMPಯು ಬೆಂಗಳೂರಿನಲ್ಲಿ ಫೆಬ್ರವರಿ 28, 2024 ರ ಗಡುವಿನೊಂದಿಗೆ 60% ಕನ್ನಡ ನಾಮಫಲಕಗಳ ನಿಯಮವನ್ನು ಜಾರಿಗೆ ತಂದಿತ್ತು, ಆ ಗಡುವನ್ನು ಎರಡು ವಾರಗಳ ಕಾಲ ವಿಸ್ತರಿಸಲಾಯಿತು. ರೇಟಿಂಗ್: ದಾರಿತಪ್ಪಿಸುವ ಸುದ್ದಿ— ಸತ್ಯ ಪರಿಶೀಲನೆ  ವಿವರಗಳು ಹಿಂದಿಯಲ್ಲಿ ಸಂದೇಶವನ್ನು ಹೊಂದಿರುವ ವೀಡಿಯೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅದರ ಅನುವಾದ ಹೀಗಿದೆ: “ನೀವು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದರೆ, ಕರ್ನಾಟಕದಲ್ಲಿ ನಿಮ್ಮ ಅಂಗಡಿ, ಮನೆ, ಪ್ರದೇಶ, ದೇವಸ್ಥಾನ ಇತ್ಯಾದಿಗಳಲ್ಲಿ ಕೇಸರಿ ...

Read More »

ಮೋದಿಯವರು ಶೇಖ್‌ಗಳಿಗೆ ಕೇಸರಿ ತೊಡಿಸಿದರೇ? ನಕಲಿ ಚಿತ್ರ ಪುನರುದ್ಭವ; ಸತ್ಯ ಪರಿಶೀಲನೆ

ಹೇಳಿಕೆ/Claim: ಮೋದಿಯವರು ಸ್ವಯಂ ಟೋಪಿ ಧರಿಸುವುದಿಲ್ಲ ಆದರೆ ಶೇಖ್‌ಗಳಿಗೆ ಕೇಸರಿ ತೊಡಿಸುತ್ತಾರೆ. ಕಡೆನುಡಿ/Conclusion: ಸುಳ್ಳು. ವೈರಲ್ ಆದ ಚಿತ್ರ ಫೋಟೋಶಾಪ್ ಮಾಡಿರುವುದು. ರೇಟಿಂಗ್: ತಪ್ಪು ನಿರೂಪಣೆ — ಸತ್ಯ ಪರಿಶೀಲನೆ ವಿವರಗಳು ಅಬುಧಾಬಿಯ ಆಡಳಿತಗಾರ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ‘MBZ’ ಜೊತೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಇರುವ ಚಿತ್ರವನ್ನು ವಾಟ್ಸಾಪ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಮೊಹಮ್ಮದ್ ರವರು ಕೇಸರಿ ಉಡುಪನ್ನು ಧರಿಸಿರುವುದನ್ನು ಕಾಣಬಹುದು. ಹಿಂದಿಯಲ್ಲಿರುವ ಶೀರ್ಷಿಕೆ ಹೀಗಿದೆ: “ಇದು ಮೋದಿ! ತಾವು ಸ್ವಯಂ ಟೋಪಿ ಧರಿಸುವುದಿಲ್ಲ, ಆದರೆ ಶೇಖ್ ಕೇಸರಿ ಧರಿಸುವಂತೆ ...

Read More »

ಯೋಗಿ ಆದಿತ್ಯನಾಥ್ ಸರ್ಕಾರವು ಉತ್ತರ ಪ್ರದೇಶದಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿ ಮೀಸಲಾತಿಯನ್ನು ರದ್ದುಗೊಳಿಸಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಯೋಗಿ ಆದಿತ್ಯನಾಥ್ ಸರ್ಕಾರವು ಉತ್ತರ ಪ್ರದೇಶದ ಖಾಸಗಿ ವೈದ್ಯಕೀಯ ಕಾಲೇಜುಗಳಿಂದ ಮೀಸಲಾತಿಯನ್ನು ರದ್ದುಗೊಳಿಸಿದೆ. ಕಡೆನುಡಿ/Conclusion: ಸುಳ್ಳು. ಯೋಗಿ ಆದಿತ್ಯನಾಥ್ ಸರ್ಕಾರವು ಉತ್ತರ ಪ್ರದೇಶದ ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಿಂದ ಮೀಸಲಾತಿಯನ್ನು ರದ್ದುಗೊಳಿಸಿಲ್ಲ. ಹಿಂದಿನ ಅಖಿಲೇಶ್ ಯಾದವರ ಸಮಾಜವಾದಿ ಪಕ್ಷದ ಸರ್ಕಾರವೇ ಈ ನಿಯಮವನ್ನು ಜಾರಿಗೆ ತಂದಿತ್ತು. ರೇಟಿಂಗ್: ತಪ್ಪು ನಿರೂಪಣೆ-- ಸತ್ಯ ಪರಿಶೀಲನೆ ವಿವರಗಳು ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರವು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಮೀಸಲಾತಿಯನ್ನು ರದ್ದುಗೊಳಿಸಿದೆ ಎಂಬ ಹೇಳಿಕೆಯೊಂದಿಗೆ, ಪೋಸ್ಟರ್‌ ಹೊಂದಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.”ಯುಪಿ ...

Read More »

ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಬ್ಯಾರಿಕೇಡ್‌ಗಳ ಹೊರತಾಗಿಯೂ ದೆಹಲಿಯೊಳಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹಳೆಯ ವೀಡಿಯೊವನ್ನು ಬಳಸಿ ತೋರಿಸಲಾಗಿದೆ; ಸತ್ಯ ಪರಿಶೀಲನೆ

Old video passed off as that of farmers' protest at border trying to enter Delhi despite barricades; Fact Check

ಹೇಳಿಕೆ/Claim: ರೈತರು ತಮ್ಮ ಟ್ರ್ಯಾಕ್ಟರ್‌ಗಳಲ್ಲಿ ಚಲಿಸುತ್ತಿರುವ ವೀಡಿಯೊವನ್ನು ದೆಹಲಿಯ ಗಡಿಯ ವೀಡಿಯೊ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಕಡೆನುಡಿ/Conclusion: ಸುಳ್ಳು. ಒಂದು ವಾರ ಹಳೆಯ ಪಂಜಾಬ್‌ನ ವೀಡಿಯೊವನ್ನು, ರೈತರು ತಮ್ಮ ಟ್ರ್ಯಾಕ್ಟರ್‌ಗಳಲ್ಲಿ ದೆಹಲಿಯೊಳಗೆ ಪ್ರವೇಶಿಸುತ್ತಿರುವುದು ಎನ್ನುವಂತೆ ತೋರಿಸಲಾಗಿದೆ. ರೇಟಿಂಗ್: ತಪ್ಪು ನಿರೂಪಣೆ -- ಸತ್ಯ ಪರಿಶೀಲನೆ ವಿವರಗಳು ಫೆಬ್ರವರಿ 13, 2024 ರ ಮಂಗಳವಾರದಂದು ಪ್ರತಿಭಟನೆ ನಡೆಸಲು ದೊಡ್ಡ ಪ್ರಮಾಣದಲ್ಲಿ ರೈತರು ದೆಹಲಿಯೊಳಗೆ ಪ್ರವೇಶಿಸಲು ಪ್ರಾರಂಭಿಸಿದಾಗಿನಿಂದ, ವಿಭಿನ್ನ ಹೇಳಿಕೆಗಳನ್ನು ಹೊಂದಿರುವ ಹಲವಾರು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿವೆ. ಅವುಗಳಲ್ಲಿ, ರೈತರನ್ನು ಹೊತ್ತಿರುವ ಒಂದು ಟ್ರ್ಯಾಕ್ಟರ್‌ ರಾಷ್ಟ್ರ ...

Read More »

ಜಾತಿ ಗಣತಿ ಭಾಷಣ: ರಾಹುಲ್ ಗಾಂಧಿಯವರು 50+15=73 ಎಂದರಾ? ಸತ್ಯ ಪರಿಶೀಲನೆ

ಹೇಳಿಕೆ/Claim: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಜಾತಿ ಗಣತಿ ಕುರಿತಾದ ತಮ್ಮ ಭಾಷಣದಲ್ಲಿ 50+15 ಅನ್ನು 73 ಎಂದು ತಪ್ಪಾಗಿ ಲೆಕ್ಕ ಮಾಡಿದರು ಎಂದು ವೀಡಿಯೊ ಹೇಳುತ್ತದೆ. ಕಡೆನುಡಿ/Conclusion: ಸುಳ್ಳು. ರಾಹುಲ್ ಗಾಂಧಿಯವರ ಮೂಲ ಭಾಷಣದಿಂದ 8% ಆದಿವಾಸಿಗಳ ಉಲ್ಲೇಖವನ್ನು ಅಳಿಸಲು ವೀಡಿಯೊವನ್ನು ಬದಲಾಯಿಸಲಾಗಿದೆ. ರೇಟಿಂಗ್:ತಪ್ಪು ನಿರೂಪಣೆ  ಸತ್ಯ ಪರಿಶೀಲನೆ ವಿವರಗಳು ಜಾತಿ ಗಣತಿ ಮತ್ತು ಮೀಸಲಾತಿಯ ವಿಷಯದ ಬಗ್ಗೆ ರಾಹುಲ್ ಗಾಂಧಿಯವರು ಮಾತನಾಡುತ್ತಿರುವ ವೀಡಿಯೊ ವೈರಲ್ ಆಗಿದ್ದು,ಮೂಲಭೂತ ಲೆಕ್ಕಾಚಾರದಲ್ಲಿ ತಪ್ಪು ಮಾಡಿದ್ದಕ್ಕಾಗಿ ಈ ಕಾಂಗ್ರೆಸ್ ನಾಯಕರನ್ನು ಅಪಹಾಸ್ಯ ಮಾಡುವ ಉದ್ದೇಶದಿಂದ ಹಲವಾರು ಶೀರ್ಷಿಕೆಗಳನ್ನು ...

Read More »

ದಕ್ಷಿಣ ಭಾರತದ ಶಾಲೆಯು ಮಧ್ಯಾಹ್ನದ ಊಟಕ್ಕೆ ಅನ್ನ ಮತ್ತು ಅರಿಶಿನ ನೀರನ್ನು ಕೊಡುತ್ತಿರುವುದಾಗಿ ವೀಡಿಯೊ ಹೇಳುತ್ತದೆ; ಸತ್ಯ ಪರಿಶೀಲನೆ

ದಕ್ಷಿಣ ಭಾರತದ ಶಾಲೆಯು ಮಧ್ಯಾಹ್ನದ ಊಟಕ್ಕೆ ಅನ್ನ ಮತ್ತು ಅರಿಶಿನ ನೀರನ್ನು ಕೊಡುತ್ತಿರುವುದಾಗಿ ವೀಡಿಯೊ ಹೇಳುತ್ತದೆ; ಸತ್ಯ ಪರಿಶೀಲನೆ

ಹೇಳಿಕೆ/Claim: ದಕ್ಷಿಣ ಭಾರತದ ಶಾಲೆಗಳಲ್ಲಿ ಕೇವಲ ಅನ್ನ ಮತ್ತು ಅರಿಶಿನ ನೀರನ್ನು ಮಾತ್ರ ನೀಡುತ್ತಿರುವ ಮಧ್ಯಾಹ್ನದ ಊಟದ ಯೋಜನೆಯ ಕುರಿತು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion: ಮಧ್ಯಾಹ್ನದ ಊಟದ ವೈರಲ್ ವೀಡಿಯೋ ಒಡಿಶಾದ ಸರ್ಕಾರಿ ಶಾಲೆಯಿಂದ ಬಂದಿದೆಯೇ ಹೊರತು ಹೇಳಿಕೆಯಲ್ಲಿ ತಿಳಿಸಲಾಗಿರುವಂತೆ ದಕ್ಷಿಣ ಭಾರತದಿಂದಲ್ಲ. ರೇಟಿಂಗ್:ತಪ್ಪು ನಿರೂಪಣೆ -- ಸತ್ಯ ಪರಿಶೀಲನೆ ವಿವರಗಳು ದಕ್ಷಿಣ ಭಾರತದಲ್ಲಿ ಜಾರಿಯಲ್ಲಿರುವ ಮಧ್ಯಾಹ್ನದೂಟದ ಯೋಜನೆಯಲ್ಲಿ ಕೇವಲ ಅನ್ನ ಮತ್ತು ಅರಿಶಿನ ನೀರು ಮಾತ್ರವಿದೆ ಎನ್ನುವ ಸಣ್ಣ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹಿಂದಿಯಲ್ಲಿರುವ ಇದರ ಶೀರ್ಷಿಕೆ ಹೀಗಿದೆ:” देखें कि ...

Read More »