ಮುಸ್ಲಿಮರ ಅತಿಹೆಚ್ಚು ಪ್ರವೇಶವಾದ ಕಾರಣ ಭಾರತವು ವೈದ್ಯಕೀಯ ಕಾಲೇಜನ್ನು ಮುಚ್ಚಿತೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಮುಸ್ಲಿಂ ವಿದ್ಯಾರ್ಥಿಗಳು ಹೆಚ್ಚಿನ ಪ್ರವೇಶವನ್ನು ಪಡೆದುಕೊಂಡದ್ದರಿಂದ ಭಾರತವು ಕಾಶ್ಮೀರದಲ್ಲಿ ವೈದ್ಯಕೀಯ ಕಾಲೇಜನ್ನು ಮುಚ್ಚಿದೆ.

ಕಡೆನುಡಿ/Conclusion:  ಈ ಹೇಳಿಕೆಯು ದಾರಿ ತಪ್ಪಿಸುವಂತಿದೆ. ಗಂಭೀರ ಮೂಲಸೌಕರ್ಯ ಕೊರತೆ ಮತ್ತು ಪದೇ ಪದೇ ನಿಯಂತ್ರಕ ವೈಫಲ್ಯದ ಪುನರಾವರ್ತನೆಯಿಂದಾಗಿ ಶ್ರೀ ಮಾತಾ ವೈಷ್ಣೋ ದೇವಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಕ್ಸಲೆನ್ಸ್ ಸಂಸ್ಥೆಯನ್ನು ಮುಚ್ಚಲು ರಾಷ್ಟ್ರೀಯ ವೈದ್ಯಕೀಯ ಆಯೋಗವು (NMC) ಆದೇಶಿಸಿತು. ಆದಾಗ್ಯೂ, ಕಾಲೇಜಿಗೆ ಹಿಂದೂ ದತ್ತಿ ಸಂಸ್ಥೆಯಿಂದ ಹಣಕಾಸು ಸಿಗುತ್ತಿದ್ದುದರಿಂದ ಇತರ ರಾಜಕೀಯ ಸಮಸ್ಯೆಗಳು ಮತ್ತು ಪ್ರತಿಭಟನೆಗಳು ಕೂಡ ನಡೆದಿದ್ದವು.

ರೇಟಿಂಗ್/Rating : ದಾರಿ ತಪ್ಪಿಸುವಂತಿದೆ.

******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

******************************************************

ಭಾರತವು ಕಾಶ್ಮೀರದಲ್ಲಿ ಒಂದು ವೈದ್ಯಕೀಯ ಕಾಲೇಜನ್ನು ಮುಚ್ಚಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ಅಲ್ ಜಜೀರಾ ಇಂಗ್ಲಿಷ್ ಜನವರಿ 15, 2026 ರಂದು X ನಲ್ಲಿ ಹೀಗೆ ಪೋಸ್ಟ್ ಮಾಡಿತು, “ಮುಸ್ಲಿಮರು ಹೆಚ್ಚಿನ ಪ್ರವೇಶಗಳನ್ನು ಗಳಿಸಿದ ನಂತರ ಭಾರತವು ಕಾಶ್ಮೀರ ವೈದ್ಯಕೀಯ ಕಾಲೇಜನ್ನು ಮುಚ್ಚಿದೆ” ಎನ್ನುತ್ತಾ, ಮುಸ್ಲಿಮರಿಗೆ ಹೆಚ್ಚಿನ ಪ್ರವೇಶದ ಕುರಿತಾದ ಪ್ರತಿಭಟನೆಗಳೇ ಶ್ರೀ ಮಾತಾ ವೈಷ್ಣೋ ದೇವಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಕ್ಸಲೆನ್ಸ್ (SMVDIME) ಅನ್ನು ಮುಚ್ಚಲು ಕಾರಣ ಎಂದು ಸೂಚಿಸುವ ಲೇಖನಕ್ಕೆ ಲಿಂಕ್ ಒದಗಿಸಲಾಗಿದೆ. ಈ ಪೋಸ್ಟ್ ವಿದ್ಯಾರ್ಥಿಗಳ ಧಾರ್ಮಿಕ ಸಂಯೋಜನೆ ಮತ್ತು ಕಾಲೇಜಿನ ಮುಚ್ಚುವಿಕೆಯ ನಡುವೆ ಸಂಬಂಧವಿದೆಯೆಂದು ಸೂಚಿಸುತ್ತದೆ. ಪೋಸ್ಟ್ ಅನ್ನು ಕೆಳಗೆ ನೋಡಿ –

ಮತ್ತೊಬ್ಬ ಬಳಕೆದಾರರು ಅಂಥದ್ದೇ ಹೇಳಿಕೆಯನ್ನು ಇಲ್ಲಿ ಹಂಚಿಕೊಂಡಿದ್ದಾರೆ:

 ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ದಾರಿತಪ್ಪಿಸುವಂತಿದೆ ಎಂದು ಕಂಡುಕೊಂಡಿತು. ಮೂಲಸೌಕರ್ಯದಲ್ಲಿನ ಪ್ರಮುಖ ಕೊರತೆಗಳು, ದೂರುಗಳು ಮತ್ತು ಕಡ್ಡಾಯ ನಿಯಂತ್ರಕ ಮಾನದಂಡಗಳನ್ನು ಪೂರೈಸುವಲ್ಲಿ ನಿರಂತರ ವೈಫಲ್ಯವನ್ನು ಗುರುತಿಸಿದ ನಂತರ ರಾಷ್ಟ್ರೀಯ ವೈದ್ಯಕೀಯ ಆಯೋಗವು ಶ್ರೀ ಮಾತಾ ವೈಷ್ಣೋ ದೇವಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಕ್ಸಲೆನ್ಸ್ ಅನ್ನು ಮುಚ್ಚಲು ನಿರ್ದೇಶಿಸಿತು. ಆದಾಗ್ಯೂ, ಕಾಲೇಜಿಗೆ ಹಿಂದೂ ದತ್ತಿ ಸಂಸ್ಥೆಯಿಂದ ಹಣಕಾಸು ಬರುತ್ತಿದ್ದ ಕಾರಣ ಇತರ ರಾಜಕೀಯ ಸಮಸ್ಯೆಗಳು ಮತ್ತು ಪ್ರತಿಭಟನೆಗಳೂ ಸಹ ಇದ್ದವು.

ಈ ಹೇಳಿಕೆಯ ಕುರಿತು ಇನ್ನಷ್ಟು ತಿಳಿದುಕೊಳ್ಳಲು ನಾವು ಮೊದಲು “ಶ್ರೀ ಮಾತಾ ವೈಷ್ಣೋ ದೇವಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಕ್ಸಲೆನ್ಸ್ ಮುಚ್ಚುವಿಕೆ” ಎಂಬ ಪದಗುಚ್ಛದೊಂದಿಗೆ ಅಂತರ್ಜಾಲ ಹುಡುಕಾಟವನ್ನು ನಡೆಸಿದೆವು. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಈ ಕಾಲೇಜು ಜಮ್ಮು ವಿಭಾಗದ ರಿಯಾಸಿ ಜಿಲ್ಲೆಯಲ್ಲಿದೆ. “42 ಮುಸ್ಲಿಂ ವಿದ್ಯಾರ್ಥಿಗಳು, ಏಳು ಹಿಂದೂ ವಿದ್ಯಾರ್ಥಿಗಳು ಮತ್ತು ಒಬ್ಬ ಸಿಖ್ಖ ವಿಧ್ಯಾರ್ಥಿ”ಯನ್ನು ನೀಟ್ ಪರೀಕ್ಷೆಯ ಮೂಲಕ ಪ್ರವೇಶ ನೀಡಲಾದ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೆ, ಹಿಂದೂಗಳಲ್ಲದ ಅಭ್ಯರ್ಥಿಗಳನ್ನು ಹೊರಹಾಕಲು ಅಥವಾ ಕಾಲೇಜನ್ನು ಮುಚ್ಚಲು ಒತ್ತಾಯಿಸಿ ಹಿಂದೂ ಗುಂಪುಗಳಿಂದ ಪ್ರತಿಭಟನೆಗಳು ನಡೆದವು” ಒಂದು ವಿಭಾಗವನ್ನು ಕೆಳಗೆ ನೋಡಿ-

ಅಲ್ ಜಜೀರಾ ವರದಿಯ ಪ್ರಕಾರ, ಕಾಶ್ಮೀರದ ಬಿಜೆಪಿ ವಕ್ತಾರ ಅಲ್ತಾಫ್ ಠಾಕೂರ್ “NMC ಹಲವಾರು ನ್ಯೂನತೆಗಳನ್ನು ಕಂಡುಕೊಂಡ ಕಾರಣ ಕಾಲೇಜಿನ ಮಾನ್ಯತೆಯನ್ನು ಹಿಂಪಡೆಯಲಾಗಿದೆ. ಈ ವಿಷಯವು ಹಿಂದೂ- ಮುಸ್ಲಿಮರ ಬಗ್ಗೆ ಅಲ್ಲವೇ ಅಲ್ಲ” ಎಂದು ವಾಹಿನಿಗೆ ಹೇಳಿದ್ದರು. “ಕಾಲೇಜಿಗೆ ಮುಖ್ಯವಾಗಿ ಮಾತಾ ವೈಷ್ಣೋ ದೇವಿ ದೇವಸ್ಥಾನದ ಭಕ್ತರ ಕೊಡುಗೆಗಳಿಂದ ಹಣ ನೀಡಲಾಗುತ್ತಿದ್ದುದರಿಂದ” ಆ ಪ್ರಮಾಣದಲ್ಲಿ ಮುಸ್ಲಿಂ ಅಭ್ಯರ್ಥಿಗಳು ಸ್ವೀಕಾರಾರ್ಹವಲ್ಲ ಎಂದು ಹಿಂದೂ ಸಮೂಹಗಳು ವಾದಿಸಿದವು ಎಂದು ವರದಿಗಳು ಹೇಳುತ್ತವೆ.

ಇಂಡಿಯನ್ ಎಕ್ಸ್‌ಪ್ರೆಸ್‌ನ ಒಂದು ವರದಿ ಸೇರಿದಂತೆ ಹಲವಾರು ವರದಿಗಳ ಪ್ರಕಾರ, “ಬೋಧನಾ ಸಿಬ್ಬಂದಿಯಲ್ಲಿ ಶೇಕಡಾ 39 ರಷ್ಟು ಕೊರತೆ ಮತ್ತು ಬೋಧಕರು, ಪ್ರದರ್ಶಕರು ಮತ್ತು ಹಿರಿಯ ನಿವಾಸಿಗಳಲ್ಲಿ ಶೇಕಡಾ 65 ರಷ್ಟು ಕೊರತೆಯನ್ನು” NMCಯು ಕಂಡುಹಿಡಿದಿದೆ. ಇದಲ್ಲದೆ, ಕ್ಲಿನಿಕಲ್ ಕಾರ್ಯಕ್ಷಮತೆಯು ಮಾನದಂಡಗಳಿಗಿಂತ ಬಹಳ ಕೆಳಗಿತ್ತು, ಹೊರರೋಗಿಗಳ ಹಾಜರಾತಿ ಶೇಕಡಾ 50 ಕ್ಕಿಂತ ಕಡಿಮೆ, ಕಡ್ಡಾಯವಾದ 80 ಶೇಕಡಕ್ಕೆ ಹೋಲಿಸಿದರೆ ಹಾಸಿಗೆಯ ಬಳಕೆ ಕೇವಲ ಶೇಕಡಾ 45 ರಷ್ಟಿತ್ತು ಮತ್ತು ಐಸಿಯು ಬಳಕೆ ಶೇಕಡಾ 50 ರಷ್ಟಿತ್ತು.

ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಲ್ಲಿ ಉಲ್ಲೇಖಿಸಲಾದ ಇತರ ಕಾರಣಗಳಲ್ಲಿ ಪ್ರಮುಖ ಮೂಲಸೌಕರ್ಯ ಕೊರತೆಗಳು, ಪ್ರಾಯೋಗಿಕ ಮತ್ತು ಸಂಶೋಧನಾ ಪ್ರಯೋಗಾಲಯಗಳ ಕೊರತೆ, ಕಳಪೆ ಗುಣಮಟ್ಟದ ಉಪನ್ಯಾಸ ಕೋಣೆಗಳು, ಅತೀವ ಕಡಿಮೆ ಸಂಪನ್ಮೂಲ ಹೊಂದಿರುವ ಗ್ರಂಥಾಲಯಗಳು, ART ಕೇಂದ್ರ, MDR-TB ಸೇವೆಗಳು, ಸಾಕಷ್ಟು ಶಸ್ತ್ರಚಿಕಿತ್ಸಾ ಕೊಠಡಿಗಳು ಮತ್ತು ಪ್ರತ್ಯೇಕ ಪುರುಷ ಮತ್ತು ಮಹಿಳಾ ವಾರ್ಡ್‌ಗಳಂತಹ ಪ್ರಮುಖ ಆಸ್ಪತ್ರೆ ಸೌಲಭ್ಯಗಳ ಅಸಮರ್ಪಕತೆ ಕೂಡ ಸೇರಿದ್ದವು. ವರದಿಯ ಒಂದು ವಿಭಾಗವನ್ನು ಕೆಳಗೆ ನೋಡಿ:

ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೊಣೆಗಾರಿಕೆಯನ್ನು ಪ್ರಶ್ನಿಸುತ್ತಾ, “ನೀವು ವೈದ್ಯಕೀಯ ಕಾಲೇಜನ್ನು ಸ್ಥಾಪಿಸಿದ್ದರೆ, ಅದು (ರಾಷ್ಟ್ರೀಯ ವೈದ್ಯಕೀಯ ಆಯೋಗ) ತಪಾಸಣೆಯಲ್ಲಿ ಏಕೆ ಉತ್ತೀರ್ಣವಾಗಲಿಲ್ಲ?” ಎಂದು ಕೇಳಿದರು. ಆತ ಸಂಸ್ಥೆ ಮುಚ್ಚಿದ ನಂತರದ ಆಚರಣೆಗಳನ್ನು ಕೂಡ ಟೀಕಿಸಿದರು, “ಈ ಸಂತೋಷ ಯಾಕೆ?” ಮತ್ತು “ಮಕ್ಕಳ ಭವಿಷ್ಯವನ್ನು ನಾಶಮಾಡುವುದು ನಿಮಗೆ ಸಂತೋಷವೆನಿಸಿದರೆ, ಪಟಾಕಿ ಹೊತ್ತಿಸಿ” ಎಂದು ಹೇಳಿದರು. ಬಿಜೆಪಿ ಯಾವುದೇ ಆಚರಣೆಗಳನ್ನು ನಿರಾಕರಿಸುತ್ತಾ, “ಮೂಲಸೌಕರ್ಯದಲ್ಲಿನ ನ್ಯೂನತೆಗಳನ್ನು ಕಂಡುಕೊಂಡ ನಂತರ ಆಯೋಗವು ನಿರ್ಧಾರವನ್ನು ತೆಗೆದುಕೊಂಡಿತು” ಎಂದು ಹೇಳಿದೆ.

ಆದ್ದರಿಂದ ಈ ಹೇಳಿಕೆ ದಾರಿ ತಪ್ಪಿಸುವಂತಿದೆ.

******************************************************
ಇದನ್ನೂ ಓದಿ:

ಒಡಿಶಾದಲ್ಲಿ 8,000 ವಿದ್ಯಾರ್ಥಿಗಳು ಮೇಜು ಮತ್ತು ಕುರ್ಚಿಗಳಿಲ್ಲದೆ ಪರೀಕ್ಷೆ ಬರೆಯಲು ವಾಯುನೆಲೆಯಲ್ಲಿ ಕುಳಿತರೇ? ಸತ್ಯ ಪರಿಶೀಲನೆ

ಭಾರತ ಸರ್ಕಾರವು ಅರುಣಾಚಲ ಮತ್ತು ಲಡಾಖ್ ಅನ್ನು ಚೀನಾಕ್ಕೆ ಶರಣಾಗಿಸಿದೆ ಎಂದು CDS ಸಿಬ್ಬಂದಿ ಜನರಲ್ ಅನಿಲ್ ಚೌಹಾಣ್ ಹೇಳಿದ್ದಾರೆಯೇ? ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*