ಹೇಳಿಕೆ/Claim:ನ್ಯೂಜಿಲೆಂಡ್ನ ಗೃಹ ಸಚಿವರು ಸನಾತನ ಧರ್ಮವನ್ನು ಅಳವಡಿಸಿಕೊಳ್ಳುತ್ತಿದ್ದಾರೆಂದು ತೋರಿಸುವ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಕಡೆನುಡಿ/Conclusion: ಸುಳ್ಳು. ನ್ಯೂಜಿಲೆಂಡ್ನ ಗೃಹ ಸಚಿವರು ಸನಾತನ ಧರ್ಮವನ್ನು ಅಳವಡಿಸಿಕೊಳ್ಳುತ್ತಿರುವುದನ್ನು ವೀಡಿಯೊ ತೋರಿಸುವುದಿಲ್ಲ, ಅದು ಬ್ರೆಂಟ್ ಗೋಬಲ್ ಎಂಬ ಅಮೇರಿಕದ ಯೋಗ ಶಿಕ್ಷಕರು ದೈನಂದಿನ ಪ್ರಾರ್ಥನೆಯಲ್ಲಿ ತೊಡಗಿರುವುದನ್ನು ತೋರಿಸುತ್ತದೆ. ರೇಟಿಂಗ್:ತಪ್ಪು ನಿರೂಪಣೆ — ಸತ್ಯ ಪರಿಶೀಲನೆ ವಿವರಗಳು ವಿದೇಶಿ ವ್ಯಕ್ತಿಯೊಬ್ಬರು ಕೈಮುಗಿದು ಹಿಂದೂ ಆಚರಣೆಗಳನ್ನು ಪರಿಪಾಲಿಸುತ್ತಿರುವ ವೀಡಿಯೊವೊಂದು ಅದು ನ್ಯೂಜಿಲೆಂಡ್ನ ಗೃಹ ಸಚಿವರು ಸನಾತನ ಧರ್ಮವನ್ನು ಅಳವಡಿಸಿಕೊಳ್ಳುತ್ತಿರುವುದು ಎಂಬ ಹೇಳಿಕೆಯೊಂದಿಗೆ Xನಲ್ಲಿ (ಈ ಹಿಂದೆ ಟ್ವಿಟರ್) ವೈರಲ್ ಆಗುತ್ತಿದೆ. ಶೀರ್ಷಿಕೆಯು ಹೀಗಿದೆ: “ಸನಾತನದ ಶಕ್ತಿಯನ್ನು ...
Read More »Tag Archives: fact checking in kannada
ಇಲ್ಲ, “ಡಿಎಂಕೆ ಹಿಂದೂಗಳನ್ನು ಮತಕ್ಕಾಗಿ ಬೇಡುವುದಿಲ್ಲ ” ಎಂದು ಸ್ಟಾಲಿನ್ ಎಂದಿಗೂ ಹೇಳಿಲ್ಲ; ಸತ್ಯ ಪರಿಶೀಲನೆ
ಹೇಳಿಕೆ/Claim: “ನಮ್ಮ ಗೆಲುವು ಕೇವಲ ಹಿಂದೂ ಮತಗಳ ಮೇಲೆ ಅವಲಂಬಿತವಾಗಿರುವುದಾದರೆ, ನಾವು ಸೋತರೂ ಪರವಾಗಿಲ್ಲ. ಹಿಂದೂಗಳಲ್ಲಿ ಮತ ಯಾಚನೆ ಮಾಡುವ ಮಟ್ಟಕ್ಕೆ ಡಿಎಂಕೆ ಇಳಿಯುವುದಿಲ್ಲ” ಎಂದು ಸ್ಟಾಲಿನ್ ಹೇಳಿದರು. ಕಡೆನುಡಿ/Conclusion: ಸುಳ್ಳು. ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಇಂತಹ ಹೇಳಿಕೆಗಳನ್ನು ಹೊಂದಿರುವ ಯಾವುದೇ ವರದಿಯನ್ನು ನ್ಯೂಸ್ 7 ತಮಿಳು ಪ್ರಕಟಿಸಿಲ್ಲ. ಸ್ಟಾಲಿನ್ ಅವರು ಈ ಮಾತುಗಳನ್ನು ಹೇಳುತ್ತಿರುವಂತೆ ತೋರಿಸಲು ನ್ಯೂಸ್7 ತಮಿಳಿನ ಹಳೆಯ ಸುದ್ದಿಯೊಂದನ್ನು ಬದಲಾಯಿಸಲಾಗಿದೆ. ರೇಟಿಂಗ್:ತಪ್ಪು ನಿರೂಪಣೆ — ಸತ್ಯ ಪರಿಶೀಲನೆ ವಿವರಗಳು ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಅವರು ಹಿಂದೂಗಳ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ ...
Read More »ಇಲ್ಲ, ಎಲಾನ್ ಮಸ್ಕ್ ‘ನಾನು ಶಿಶುಕಾಮಿ’ ಎಂದು Xನಲ್ಲಿ ತನ್ನ ಉತ್ತರವನ್ನು ಪೋಸ್ಟ್ ಮಾಡಿಲ್ಲ; ಸತ್ಯ ಪರಿಶೀಲನೆ
ಹೇಳಿಕೆ/Claim: ಎಲಾನ್ ಮಸ್ಕ್ ತಾನು ಶಿಶುಕಾಮಿ ಎಂದು ಹೇಳುವ ಟ್ವೀಟ್ಗೆ ಸಕಾರಾತ್ಮಕವಾಗಿ ಉತ್ತರಿಸಿದರು. ಕಡೆನುಡಿ/Conclusion: ಸುಳ್ಳು, ಎಲಾನ್ ಮಸ್ಕ್ ಅವರ X ಅಥವಾ Twitter ಖಾತೆಯಿಂದ ಅಂತಹ ಯಾವುದೇ ಉತ್ತರವನ್ನು ನೀಡಲಾಗಿಲ್ಲ. ರೇಟಿಂಗ್:ತಪ್ಪು ನಿರೂಪಣೆ — ಸತ್ಯ ಪರಿಶೀಲನೆ ವಿವರಗಳು X ಸಾಮಾಜಿಕ ಜಾಲತಾಣದ ಮಾಲೀಕ ಎಲಾನ್ ಮಸ್ಕ್ ಅವರ ಪೋಸ್ಟ್ ನ ಸ್ಕ್ರೀನ್ಶಾಟ್ನೊಂದಿಗೆ ತೋರಿಸುವ ಹೇಳಿಕೆಯನ್ನು ಹೊಂದಿರುವ ಟ್ವೀಟ್ X ನಲ್ಲಿ ತಿರುಗಾಡುತ್ತಿದೆ. “ನೀವು ಶಿಶುಕಾಮಿ” ಎಂದು ಯಾರೋ ಸುಳ್ಳು ಹರಡುತ್ತಿರುವ ಬಗ್ಗೆ ಬಳಕೆದಾರರೊಬ್ಬರ ಎಚ್ಚರಿಕೆಯು ಇದಕ್ಕೆ ಕಾರಣವಾಗಿತ್ತು. ಶೀಘ್ರದಲ್ಲೇ ಮಾಸ್ಕ್ ಉದ್ದೇಶಪೂರ್ವಕವಾಗಿ ...
Read More »ಭಾರತದಲ್ಲಿ ಈಗ ಹೊಸ ರೈಲು ಹಳಿ ಯಂತ್ರಗಳನ್ನು ಬಳಸಲಾಗುತ್ತಿದೆ ಎಂದು ವೈರಲ್ ವೀಡಿಯೊ ಹೇಳುತ್ತದೆ; ಸತ್ಯ ಪರಿಶೀಲನೆ
ಹೇಳಿಕೆ/Claim: ಅರವತ್ತು ವರ್ಷ ಹಿಂದಿನ ಅವಧಿಗೆ ಹೋಲಿಸಿದರೆ ಈಗ ಭಾರತದ ತಂತ್ರಜ್ಞಾನವು ಬಹಳ ಉತ್ತಮವಾಗಿದೆ ಎಂಬ ಹೇಳಿಕೆಯೊಂದಿಗೆ ರೈಲು ಹಳಿ ಇರಿಸುವ ಯಂತ್ರದ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಕಡೆನುಡಿ/Conclusion: ಸುಳ್ಳು. ಭಾರತವು ಸುಧಾರಿತ ತಂತ್ರಜ್ಞಾನದೊಂದಿಗೆ ಹೊಸ ರೈಲುಮಾರ್ಗಗಳನ್ನು ಹೇಗೆ ನಿರ್ಮಿಸುತ್ತಿದೆ ಎಂಬುದನ್ನು ತೋರಿಸುವ ವೈರಲ್ ವೀಡಿಯೊ ವಾಸ್ತವವಾಗಿ ಚೈನಾ ಕಮ್ಯುನಿಕೇಷನ್ಸ್ ಕನ್ಸ್ಟ್ರಕ್ಷನ್ ಮಲೇಷ್ಯಾದಲ್ಲಿ ರೈಲು ಮಾರ್ಗವನ್ನು ನಿರ್ಮಿಸುತ್ತಿರುವ ವೀಡಿಯೊ. ರೇಟಿಂಗ್:ತಪ್ಪು ನಿರೂಪಣೆ — ಸತ್ಯ ಪರಿಶೀಲನೆ ವಿವರಗಳು ಟ್ಯಾಂಪಿಂಗ್ ಯಂತ್ರವೊಂದು ಚಲಿಸುತ್ತಾ ರೈಲು ಸ್ಲೀಪರ್ ಗಳನ್ನು ಇರಿಸುವ ಒಂದು ಸಣ್ಣ ವೈರಲ್ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ, ...
Read More »ಬಿಜೆಪಿ ಚಿಹ್ನೆಯನ್ನು ಹೊಂದಿರುವ ಟೀ ಶರ್ಟ್ ಧರಿಸಿರುವಂತೆ ರಾಹುಲ್ ಗಾಂಧಿಯವರ ಸುಳ್ಳು ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ; ಸತ್ಯ ಪರಿಶೀಲನೆ
ಹೇಳಿಕೆ/Claim:ರಾಹುಲ್ ಗಾಂಧಿಯವರು ಬಿಜೆಪಿ ಚಿಹ್ನೆ ಇರುವ ಟೀ ಶರ್ಟ್ ಧರಿಸಿರುವ ಚಿತ್ರವನ್ನು ಆತ ಬಿಜೆಪಿ ಏಜೆಂಟ್ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಕಡೆನುಡಿ/Conclusion: ಸುಳ್ಳು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಬಿಜೆಪಿ ಏಜೆಂಟ್ ಎಂದು ತಪ್ಪಾಗಿ ತೋರಿಸಲು ಅವರ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ. ರೇಟಿಂಗ್: ದಾರಿತಪ್ಪಿಸುವ ಸುದ್ದಿ— ಬೆನ್ನಿನ ಭಾಗದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಚಿಹ್ನೆ ಇರುವ ಟೀ ಶರ್ಟ್ ಅನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಧರಿಸಿರುವ ಚಿತ್ರವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. हमने तो पहले ही कहा था की यह ...
Read More »ಜೋ ಬಿಡೆನ್, ರಿಷಿ ಸುನಕ್, ಜಸ್ಟಿನ್ ಟ್ರುಡೊ ರವರು ರಾಮಮಂದಿರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ವೀಡಿಯೊ ಹೇಳಿಕೊಂಡಿದೆ; ಸತ್ಯ ಪರಿಶೀಲನೆ
ಹೇಳಿಕೆ/Claim: ಅಯೋಧ್ಯೆಯ ರಾಮಮಂದಿರ ಶಂಕುಸ್ಥಾಪನೆ ಸಮಾರಂಭದಲ್ಲಿ ಹಲವಾರು ವಿಶ್ವ ನಾಯಕರು ಭಾಗವಹಿಸಿದ್ದರು. ಕಡೆನುಡಿ/Conclusion: ರಾಷ್ಟ್ರಗಳ ಮುಖ್ಯಸ್ಥರು ಸೆಪ್ಟೆಂಬರ್ 2023ರಲ್ಲಿ G20 ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಬಂದ ವೀಡಿಯೊವನ್ನು ಜನವರಿ 2024 ರಲ್ಲಿ ನಡೆದ ರಾಮಮಂದಿರ ಕಾರ್ಯಕ್ರಮದ್ದು ಎನ್ನುವಂತೆ ಹಂಚಿಕೊಳ್ಳಲಾಗಿದೆ. ರೇಟಿಂಗ್: ಸಂಪೂರ್ಣವಾಗಿ ಸುಳ್ಳು— ಸತ್ಯ ಪರಿಶೀಲನೆ ವಿವರಗಳು ಅಮೇರಿಕಾದ ರಾಷ್ಟ್ರಪತಿ ಜೋ ಬಿಡೆನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತಿತರ ವಿಶ್ವ ನಾಯಕರು ಸೇರಿದಂತೆ ವಿದೇಶಿ ಗಣ್ಯರು ಜನವರಿ 22, 2024 ರಂದು ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂಬ ...
Read More »ಯೋಗಿ ಆದಿತ್ಯನಾಥ್ 2017 ರಲ್ಲಿ ಮುಖ್ಯ ಮಂತ್ರಿಯಾಗುವ ಮೊದಲು ಉತ್ತರ ಪ್ರದೇಶದಲ್ಲಿ ಕೇವಲ 2 ವಿಮಾನ ನಿಲ್ದಾಣಗಳಿದ್ದವು? ಸತ್ಯ ಪರಿಶೀಲನೆ
ಹೇಳಿಕೆ/Claim: ಬ್ರಿಟಿಷರ ಕಾಲದಿಂದ 2017ರ ವರೆಗೆ ಉತ್ತರ ಪ್ರದೇಶದಲ್ಲಿ ಕೇವಲ ಎರಡು ವಿಮಾನ ನಿಲ್ದಾಣಗಳಿದ್ದವು. ಯೋಗಿ ಆದಿತ್ಯನಾಥ್ ರವರಡಿಯಲ್ಲಿ ಈಗ 24 ವಿಮಾನ ನಿಲ್ದಾಣಗಳಿವೆ. ಕಡೆನುಡಿ/Conclusion: 2017 ರ ಮೊದಲು, ದಾಖಲೆಯನುಸಾರ ಉತ್ತರ ಪ್ರದೇಶದಲ್ಲಿ 6 ವಿಮಾನ ನಿಲ್ದಾಣಗಳಿದ್ದವು ಮತ್ತು ಪ್ರಸ್ತುತ 10 ಕಾರ್ಯಾಚರಣೆಯಲ್ಲಿರುವ ವಿಮಾನ ನಿಲ್ದಾಣಗಳಿವೆ ಹಾಗೂ 14 ನಿರ್ಮಾಣ ಹಂತದಲ್ಲಿವೆ ಎಂದು ವಿಮಾನಯಾನ ಸಚಿವರ ಪ್ರಕಟಣೆ ತಿಳಿಸಿದೆ. ರೇಟಿಂಗ್: ದಾರಿತಪ್ಪಿಸುವ ಸುದ್ದಿ— ಸತ್ಯ ಪರಿಶೀಲನೆ ವಿವರಗಳು ಯೋಗಿ ಆದಿತ್ಯನಾಥ್ ರವರು 2017 ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಉತ್ತರ ಪ್ರದೇಶದಲ್ಲಿ ...
Read More »ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳಿಂದಾಗಿ ಆಂಧ್ರ, ತೆಲಂಗಾಣದಲ್ಲಿ ಶಾಲೆಗಳನ್ನು ಮುಚ್ಚಲಾಗಿದೆಯೇ? ಸತ್ಯ ಪರಿಶೀಲನೆ
ಹೇಳಿಕೆ/Claim: ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಹಿನ್ನೆಲೆಯಲ್ಲಿ ಎರಡು ತೆಲುಗು ರಾಜ್ಯ ಸರ್ಕಾರಗಳು ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿವೆ. ಕಡೆನುಡಿ/Conclusion: ಪ್ರಸ್ತುತ ಕೋವಿಡ್ -19 ಪ್ರಕರಣಗಳ ಹಿನ್ನೆಲೆಯಲ್ಲಿ ತೆಲುಗು ರಾಜ್ಯ ಸರ್ಕಾರಗಳು ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿಲ್ಲ. ಹಳೆಯ ಮಾರ್ಚ್ 2020 ರ ವೀಡಿಯೊವನ್ನು ಈಗ ಹಂಚಿಕೊಳ್ಳಲಾಗುತ್ತಿದೆ. ರೇಟಿಂಗ್:ದಾರಿತಪ್ಪಿಸುವ ಸುದ್ದಿ— ಸತ್ಯ ಪರಿಶೀಲನೆ ವಿವರಗಳು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಕೊರೊನಾದ JN.1 ರೂಪಾಂತರದ ಹೊಸ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಈ ಎರಡೂ ತೆಲುಗು ರಾಜ್ಯ ಸರ್ಕಾರಗಳು ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿವೆ ಎಂಬ ಒಂದು ಪೋಸ್ಟ್ ಅನ್ನು ...
Read More »ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ನೀಡುತ್ತಿದೆಯೇ? ಹಳೆಯ ಹೇಳಿಕೆಯ ಮರುಕಳಿಕೆ; ಸತ್ಯ ಪರಿಶೀಲನೆ
ಹೇಳಿಕೆ/Claim: ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಸರ್ಕಾರವು ಉಚಿತ ಲ್ಯಾಪ್ಟಾಪ್ಗಳನ್ನು ನೀಡುತ್ತಿದೆ ಎಂದು ವೈರಲ್ ಸಂದೇಶವೊಂದು ಹೇಳುತ್ತದೆ. ಕಡೆನುಡಿ/Conclusion:ಹೇಳಿಕೆ ಸಂಪೂರ್ಣವಾಗಿ ಸುಳ್ಳು. ಕೇಂದ್ರ ಸರ್ಕಾರವು ಈವರೆಗೆ ತಮ್ಮ ಯಾವುದೇ ಯೋಜನೆಯಡಿಯಲ್ಲಿ ಇಂತಹ ಯಾವುದೇ ಸ್ಕೀಮನ್ನು ಪ್ರಾರಂಭಿಸಿಲ್ಲ. ರೇಟಿಂಗ್: ಸಂಪೂರ್ಣವಾಗಿ ಸುಳ್ಳು. ಸತ್ಯ ಪರಿಶೀಲನೆ ವಿವರಗಳು ಸರ್ಕಾರವು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಗಳನ್ನು ನೀಡುತ್ತಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಸಲುವಾಗಿ ಸರ್ಕಾರವು ಉಚಿತ ಯೋಜನೆಯನ್ನು ಪ್ರಾರಂಭಿಸಿದೆ ಎಂದು ವೈರಲ್ ಸಂದೇಶವು ಹೇಳುತ್ತದೆ. ವೈರಲ್ ಸಂದೇಶವು ಹೀಗಿದೆ: ...
Read More »ಅಯೋಧ್ಯೆ ರಾಮಮಂದಿರ ಕಾರ್ಯಕ್ರಮದ ಭಾಗವಾಗಿರುವ 25,000 ಹವನ ಕುಂಡಗಳನ್ನು ವೀಡಿಯೊ ತೋರಿಸುತ್ತದೆ: ಸತ್ಯ ಪರಿಶೀಲನೆ
ಹೇಳಿಕೆ/Claim: ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ 25,000 ಹವನ ಕುಂಡಗಳನ್ನು ವೈರಲ್ ವೀಡಿಯೋ ತೋರಿಸುತ್ತದೆ. ಕಡೆನುಡಿ/Conclusion: 25,000 ಹವನ ಕುಂಡಗಳನ್ನು ತೋರಿಸುವ ವೀಡಿಯೊ ಅಯೋಧ್ಯೆಯಿಂದಲ್ಲ, ಅದು ಡಿಸೆಂಬರ್ 2023 ರಲ್ಲಿ ನಡೆದ ವಾರಣಾಸಿಯ ಸ್ವರ್ವೇದ್ ಮಹಮಂದಿರ ಧಾಮದ ವೀಡಿಯೊ. ರೇಟಿಂಗ್:ತಪ್ಪು ನಿರೂಪಣೆ — ಸತ್ಯ ಪರಿಶೀಲನೆ ವಿವರಗಳು ಜನವರಿ 22, 2024 ರಂದು ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿ ರಾಮಮಂದಿರವನ್ನು ಉದ್ಘಾಟಿಸಲಿರುವ ಮುನ್ನ ಸುಮಾರು 25,000 ಹವನ ಕುಂಡಗಳನ್ನು ತೋರಿಸುವ ವೈರಲ್ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಮಾಡುತ್ತಿದೆ. इन 25000 हजार हवन कुंडो से होगा ...
Read More »
Digiteye Kannada Fact Checkers