Don't Miss

ಕವಿತಾ ರವರ ಅಮಾನತುಗೊಳುವಿಕೆಯ ಆಚರಣೆ ನಡೆಸುವಾಗ BRS ಕಾರ್ಯಕರ್ತರು ಹೈದರಾಬಾದ್‌ನಲ್ಲಿ ತೆಲಂಗಾಣ ಭವನಕ್ಕೆ ಬೆಂಕಿ ಹಚ್ಚಿದರೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಕಲ್ವಕುಂಟ್ಲ ಕವಿತಾ ರವರನ್ನು ಪಕ್ಷದಿಂದ ಅಮಾನತುಗೊಳಿಸಿದ್ದಕ್ಕಾಗಿ ಸಂಭ್ರಮಿಸುವಾಗ ಭಾರತ ರಾಷ್ಟ್ರ ಸಮಿತಿ (BRS) ಕಾರ್ಯಕರ್ತರು ಹೈದರಾಬಾದ್‌ನಲ್ಲಿ ತೆಲಂಗಾಣ ಭವನಕ್ಕೆ ಬೆಂಕಿ ಹಚ್ಚಿದ್ದಾರೆ.

ಕಡೆನುಡಿ/Conclusion: ತಪ್ಪು ನಿರೂಪಣೆ. ತೋರಿಸಿರುವ ದೃಶ್ಯಗಳು ಇತ್ತೀಚಿನವಲ್ಲ, ಇವು ಮಾರ್ಚ್ 2021 ರಲ್ಲಿ ಪಟಾಕಿಗಳಿಂದಾಗಿ ಬೆಂಕಿ ಕಾಣಿಸಿಕೊಂಡಾಗ ಸಂಭವಿಸಿರುವ ದೃಶ್ಯ..

ರೇಟಿಂಗ್/Rating: ತಪ್ಪು ನಿರೂಪಣೆ —

****************************************************************************

ಕಲ್ವಕುಂಟ್ಲ ಕವಿತಾ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದ್ದಕ್ಕಾಗಿ ಸಂಭ್ರಮಿಸುತ್ತಿದ್ದಾಗ ಭಾರತ ರಾಷ್ಟ್ರ ಸಮಿತಿ (BRS) ಕಾರ್ಯಕರ್ತರು ಹೈದರಾಬಾದಿನಲ್ಲಿರುವ ತೆಲಂಗಾಣ ಭವನಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ಒಬ್ಬ X ಬಳಕೆದಾರರು ಸೆಪ್ಟೆಂಬರ್ 2, 2025 ರಂದು ಒಂದು ದೃಶ್ಯಾವಳಿಯನ್ನೊಳಗೊಂಡ ಅಂತಹ ಒಂದು ಹೇಳಿಕೆಯನ್ನು ಹಂಚಿಕೊಂಡಿದ್ದಾರೆ.

ಈ ಪೋಸ್ಟ್ ನಲ್ಲಿ ಹೈದರಾಬಾದಿನಲ್ಲಿರುವ ತೆಲಂಗಾಣ ಭವನದಿಂದ ಬೆಂಕಿ ಮತ್ತು ಹೊಗೆ ಹೊರಹೊಮ್ಮುತ್ತಿರುವುದನ್ನು ತೋರಿಸುವ ವೀಡಿಯೊ ಒಳಗೊಂಡಿತ್ತು. ಪೋಸ್ಟ್ ಅನ್ನು ಕೆಳಗೆ ನೋಡಿ:

 

ಮತ್ತೊಬ್ಬ X ಬಳಕೆದಾರರು ಅದೇ ಕ್ಲಿಪ್ ಅನ್ನು ಮತ್ತು ಅದೇ ವೀಡಿಯೊ ತುಣುಕನ್ನು ಮತ್ತು ತೆಲುಗಿನಲ್ಲಿ ಈ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ: “కల్వకుంట్ల కవితను పార్టీ నుండి సస్పెండ్ చేసిన సంబరంలో బీఆర్ఎస్ కార్యకర్తలు తెలంగాణ భవన్‌కు నిప్పంటించారు.”

ಇದರ ಕನ್ನಡ ಅನುವಾದ ಹೀಗಿದೆ: ಕಲ್ವಕುಂಟ್ಲ ಕವಿತಾ ರವರನ್ನು ಪಕ್ಷದಿಂದ ಅಮಾನತುಗೊಳಿಸಿದ್ದಕ್ಕೆ ಸಂಭ್ರಮಿಸುವಾಗ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಕಾರ್ಯಕರ್ತರು ಹೈದರಾಬಾದ್‌ನಲ್ಲಿ ತೆಲಂಗಾಣ ಭವನಕ್ಕೆ ಬೆಂಕಿ ಹಚ್ಚಿದರು. ಪೋಸ್ಟ್ ಅನ್ನು ಇಲ್ಲಿ ನೋಡಿ:

 

 ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯ ಕುರಿತು ತನಿಖೆ ಮಾಡಲು ನಿರ್ಧರಿಸಿತು. ಅಮಾನತುಗೊಳಿಸುವಿಕೆಯ ಕುರಿತಾದ ಹೇಳಿಕೆಗಳು ನಿಖರವಾಗಿದ್ದರೂ, ವೀಡಿಯೊದ ವಿವಿಧ ಕೀಫ್ರೇಮ್‌ಗಳನ್ನು ಬಳಸಿ ನಾವು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, ಸಿಯಾಸತ್ ಡೈಲಿ ತಮ್ಮ ಯೂಟ್ಯೂಬ್ ವಾಹಿನಿಯಲ್ಲಿ ಪೋಸ್ಟ್ ಮಾಡಿದ ವೀಡಿಯೊ ನಮ್ಮನ್ನು ನಿಜವಾಗಿ ಮಾರ್ಚ್ 20, 2021ರಂದು ನಡೆದ ಘಟನೆಗೆ ಕೊಂಡೊಯ್ಯಿತು.

ಈ ದೈನಿಕದ ಪ್ರಕಾರ, MLC ಚುನಾವಣೆಯಲ್ಲಿ BRS ಸದಸ್ಯರ ಗೆಲುವನ್ನು ಆಚರಿಸಲು ಒಡೆದ ಪಟಾಕಿಗಳಿಂದಾಗಿ ಬೆಂಕಿ ಅಪಘಾತ ಸಂಭವಿಸಿತ್ತು. ಇತರ ಬಳಕೆದಾರರು ಮತ್ತು ಸುದ್ದಿ ಮಾಧ್ಯಮಗಳು ಮಾರ್ಚ್ 20, 2021ರಂದು ಈ ದೃಶ್ಯಗಳನ್ನು ಹಂಚಿಕೊಂಡಿದ್ದವು, ಅದನ್ನು ಇಲ್ಲಿಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.

ಈ ಫಲಿತಾಂಶಗಳನ್ನು ಅನುಸರಿಸಿ, ನಾವು “ತೆಲಂಗಾಣ ಭವನದಲ್ಲಿ ಬೆಂಕಿ ಅಪಘಾತ” ಎಂಬ ಪದಪುಂಜದೊಂದಿಗೆ ಕೀವರ್ಡ್ ಹುಡುಕಾಟವನ್ನು ನಡೆಸಿದೆವು, ಆಗ ಮಾರ್ಚ್ 20, 2021 ರಂದು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ, ಈ ಅಪಘಾತವನ್ನು ದೃಢಪಡಿಸುವ ವರದಿಯು ನಮ್ಮ ಕೈಸೇರಿತು.

“ಮಹಬೂಬ್‌ನಗರ-ರಂಗರೆಡ್ಡಿ-ಹೈದರಾಬಾದ್ ಪದವೀಧರರ MLC ಕ್ಷೇತ್ರದಿಂದ ಚುನಾವಣೆಯಲ್ಲಿ ಗೆದ್ದ ಸುರಭಿ ವಾಣಿ ದೇವಿಯವರ ಗೆಲುವನ್ನು ಆಚರಿಸಲು ಪಕ್ಷದ ಕಾರ್ಯಕರ್ತರು ಶನಿವಾರ ಪಟಾಕಿ ಸಿಡಿಸಿದಾಗ ತೆಲಂಗಾಣ ರಾಷ್ಟ್ರ ಸಮಿತಿ (TRS) ಪಕ್ಷದ ಪ್ರಧಾನ ಕಚೇರಿಯಾದ ತೆಲಂಗಾಣ ಭವನದಲ್ಲಿ ಸಣ್ಣ ಬೆಂಕಿ ಅವಘಡ ಸಂಭವಿಸಿತು” ಎಂದು ವರದಿಯು ಹೇಳುತ್ತದೆ.

ವರದಿಯ ತುಣುಕನ್ನು ಕೆಳಗೆ ನೋಡಿ-

 

ಇತ್ತೀಚೆಗೆ ಸೆಪ್ಟೆಂಬರ್ 2025 ರಲ್ಲಿ ತೆಲಂಗಾಣ ಭವನದಲ್ಲಿ ಸಂಭವಿಸಿದ ಬೆಂಕಿ ಅವಘಡಗಳ ಕುರಿತು ಹುಡುಕಾಟಗಳು ಯಾವುದೇ ಫಲಿತಾಂಶಗಳನ್ನು ಅಥವಾ ಅಂತಹ ಯಾವುದೇ ಘಟನೆಯ ವರದಿಗಳನ್ನು ನೀಡಿಲ್ಲ. ಆದ್ದರಿಂದ, ಈ ಹೇಳಿಕೆ ತಪ್ಪು ನಿರೂಪಣೆಯಾಗಿದೆ.

************************************************************

ಇದನ್ನೂ ಓದಿ:

ಬಿಹಾರದಲ್ಲಿ ರಾಹುಲ್ ಗಾಂಧಿಯವರ ಮತದಾರ ಅಧಿಕಾರ ಯಾತ್ರೆಯ ಸಮಯದಲ್ಲಿ ಡಿಕೆ ಶಿವಕುಮಾರ್ ಅವರನ್ನು ಬಲವಂತವಾಗಿ ನಡೆಸಲಾಯಿತೇ? ಸತ್ಯ ಪರಿಶೀಲನೆ

ತಾರಕೇಶ್ವರ ಗಂಗೆಗೆ ಭೇಟಿ ನೀಡುವ ಹಿಂದೂ ತೀರ್ಥಯಾತ್ರಿಕರಿಂದ ಪಶ್ಚಿಮ ಬಂಗಾಳ ಸರ್ಕಾರವು ಜಿಜ್ಯಾ ತೆರಿಗೆಯನ್ನು ಸಂಗ್ರಹಿಸುತ್ತಿದೆಯೇ? ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*