Don't Miss

ಈ ವೀಡಿಯೊದಲ್ಲಿ ತೆಲಂಗಾಣದಲ್ಲಿ ಕ್ಯಾಥೋಲಿಕ್ ಶಾಲೆಯನ್ನು ‘RSS ಉಗ್ರಗಾಮಿಗಳು ಧ್ವಂಸಗೊಳಿಸುವುದನ್ನು’ ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim : ತೆಲಂಗಾಣದ ಮಂಚೇರಿಯಲ್‌ನಲ್ಲಿರುವ ಒಂದು ಕ್ಯಾಥೋಲಿಕ್ ಶಾಲೆಯನ್ನು ‘RSS ಉಗ್ರಗಾಮಿಗಳು ಧ್ವಂಸ ಮಾಡಿ’, ಪ್ರಾಂಶುಪಾಲರಾದ ಫಾದರ್ ರೈಮನ್ ಜೋಸೆಫ್ ರವರ ಮೇಲೆ ದಾಳಿ ಮಾಡಿದ್ದಾರೆ ಎನ್ನಲಾಗಿರುವ ದೃಶ್ಯಗಳನ್ನು ವೀಡಿಯೊ ತೋರಿಸುತ್ತದೆ.

ಕಡೆನುಡಿ/Conclusion : ಹೇಳಿಕೆಯು ತಪ್ಪು ನಿರೂಪಣೆ ನೀಡುತ್ತದೆ. ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದ ಮದುವೆಯಲ್ಲಿ ಅತಿಥಿಗಳು ಚಿಪ್ಸ್‌ನಂತಹ ಉಚಿತ ತಿಂಡಿಗಳಿಗಾಗಿ ಧಾವಿಸಿ ಕಾಲ್ತುಳಿತದ ಪರಿಸ್ಥಿತಿ ಉಂಟಾಗಿತ್ತು, ಈ ವೀಡಿಯೊದಲ್ಲಿ ಅದೇ ಚಿತ್ರಿಸುತ್ತದೆ.

ರೇಟಿಂಗ್/Rating : ತಪ್ಪು ನಿರೂಪಣೆ —Five rating

******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.
******************************************************

ತೆಲಂಗಾಣದ ಮಂಚೇರಿಯಲ್‌ನಲ್ಲಿರುವ ಒಂದು ಕ್ಯಾಥೋಲಿಕ್ ಶಾಲೆಯ ಮೇಲೆ RSS ಉಗ್ರಗಾಮಿಗಳು ದಾಳಿ ನಡೆಸಿದ್ದಾರೆ ಎಂದು ಆರೋಪಿಸುವ ಹೇಳಿಕೆಯೊಂದಿಗೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. X ಬಳಕೆದಾರ ‘Kussikhuelafn’ ಅಂತಹ ಹೇಳಿಕೆಯನ್ನು ಹಂಚಿಕೊಳ್ಳುತ್ತಾ, “ಅವರು ಪ್ರಾಂಶುಪಾಲರಾದ ಫಾದರ್ ರೈಮನ್ ಜೋಸೆಫ್ ಅವರ ಮೇಲೆ ಹಲ್ಲೆ ಮಾಡಿ ಬಲವಂತವಾಗಿ ಹಣೆಗೆ ತಿಲಕದ ಗುರುತು ಹಾಕಿದ್ದಾರೆ. ಇದು ಗಾಂಧಿಯವರ ಭಾರತವಲ್ಲ” ಎಂದು ಬರೆದಿದ್ದಾರೆ. ಈ ಕ್ಲಿಪ್ 35,500 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ, ಅದನ್ನು ಕೆಳಗೆ ವೀಕ್ಷಿಸಬಹುದು –

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ಈ ಹೇಳಿಕೆಯನ್ನು ತನಿಖೆ ಮಾಡಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. RSS ಉಗ್ರಗಾಮಿಗಳು ತೆಲಂಗಾಣದಲ್ಲಿ ಕ್ಯಾಥೋಲಿಕ್ ಶಾಲೆಯನ್ನು ಧ್ವಂಸಗೊಳಿಸುತ್ತಿರುವುದನ್ನು ಅಥವಾ ಫಾದರ್ ರೈಮನ್ ಜೋಸೆಫ್ ಅವರನ್ನು ಥಳಿಸುತ್ತಿರುವುದನ್ನು ಕ್ಲಿಪ್ ತೋರಿಸಿಲ್ಲ. ಈ ಕ್ಲಿಪ್ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದ ಮದುವೆಯೊಂದರಿಂದ ಬಂದಿರುವಂಥದ್ದು, ಈ ಘಟನೆಯಲ್ಲಿ ಅತಿಥಿಗಳು ಉಚಿತ ಆಹಾರಕ್ಕಾಗಿ ಧಾವಿಸಿದರು.

ವೀಡಿಯೊದ ಮೂಲವನ್ನು ಕಂಡುಹಿಡಿಯಲು ನಾವು ಮೊದಲು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ನವೆಂಬರ್ 27, 2025 ರಂದು ಒರಿಸ್ಸಾಪೋಸ್ಟ್‌ಲೈವ್ ಅಪ್‌ಲೋಡ್ ಮಾಡಿದ ಯೂಟ್ಯೂಬ್ ಕಿರುಚಿತ್ರ ನಮಗೆ ದೊರಕಿತು. ಕ್ಲಿಪ್‌ನ ಶೀರ್ಷಿಕೆ ಹೀಗಿತ್ತು “ಹಮೀರ್‌ಪುರದ ಸಾಮೂಹಿಕ ವಿವಾಹಗಳಲ್ಲಿ ತಿಂಡಿಗಳ ಲೂಟಿ”, ಈ ವೀಡಿಯೊದಲ್ಲಿ ಪರಿಸ್ಥಿತಿಯನ್ನು ವಿವರಿಸುವ ವಿವರಣೆಯನ್ನು ಕೂಡ ನೀಡಲಾಗಿತ್ತು. ಸ್ಕ್ರೀನ್‌ಶಾಟ್ ಅನ್ನು ಕೆಳಗೆ ನೋಡಿ –

ಇದೇ ಘಟನೆಯನ್ನು ಇತರರು ದೃಢಪಡಿಸಿದ್ದಾರೆ ಮತ್ತು ವರದಿ ಮಾಡಿದ್ದಾರೆ, ಅದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಇದರ ನಂತರ, ಹೇಳಿಕೆಯ ಬಗ್ಗೆ ತಿಳಿಯಲು ನಾವು ” ಉತ್ತರ ಪ್ರದೇಶದಲ್ಲಿ ಒಂದು ಸಾಮೂಹಿಕ ವಿವಾಹ ಸಮಾರಂಭದ ಅತಿಥಿಗಳು ತಿಂಡಿಗಳನ್ನು ಲೂಟಿ ಮಾಡಿದರು” ಎಂಬ ಪದಗಳೊಂದಿಗೆ ಅಂತರ್ಜಾಲ ಹುಡುಕಾಟವನ್ನು ನಡೆಸಿದೆವು. ನವೆಂಬರ್ 28, 2025 ರಂದು ಬಿಗ್ ಟಿವಿಯ ವರದಿಯ ಪ್ರಕಾರ, “ಈ ವಾರ ಉತ್ತರ ಪ್ರದೇಶದಲ್ಲಿ ಸಾಮೂಹಿಕ ವಿವಾಹ ಸಮಾರಂಭವು ಹಿಂಸಾತ್ಮಕ ತಿರುವು ಪಡೆದು ಅಸ್ತವ್ಯಸ್ತವಾಯಿತು. ಹಮೀರ್‌ಪುರ ಜಿಲ್ಲೆಯಲ್ಲಿ ಹಿಂದುಳಿದ ದಂಪತಿಗಳಿಗಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸುಂದರವಾದ ಆಚರಣೆಯಾಗಿ ಪ್ರಾರಂಭವಾದದ್ದು ಬೇಗನೆ ಅಪಾಯಕಾರಿ ಕಾಲ್ತುಳಿತಕ್ಕೆ ತಿರುಗಿತು.” ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ನವೆಂಬರ್ 27, 2025 ರಂದು NDTV ಪ್ರಕಟಿಸಿದ ಮತ್ತೊಂದು ವರದಿಯ ಪ್ರಕಾರ, “ರಥ್ ಪಟ್ಟಣದ ಬ್ರಹ್ಮಾನಂದ ಮಹಾವಿದ್ಯಾಲಯದ ಕ್ರೀಡಾ ಮೈದಾನದಲ್ಲಿ ಮುಖ್ಯಮಂತ್ರಿಗಳ ಸಾಮೂಹಿಕ ವಿವಾಹ ಯೋಜನೆಯಡಿಯಲ್ಲಿ 383 ಹಿಂದುಳಿದ ಜೋಡಿಗಳ ಸಾಮೂಹಿಕ ವಿವಾಹವನ್ನು ಆಯೋಜಿಸಲಾಗಿತ್ತು. ದಂಪತಿಗಳ ವಿವಾಹ ವಿಧಿವಿಧಾನಗಳು ಪೂರ್ಣಗೊಂಡ ನಂತರ, ತಿಂಡಿಗಳನ್ನು ಬಡಿಸಲಾಗುತ್ತಿತ್ತು” ಮತ್ತು ಅತಿಥಿಗಳು ಅದನ್ನು ಪಡೆಯಲು ಮುಂದಾದರು.

ನಂತರ, ಶಾಲೆಯ ಮೇಲೆ ಇತ್ತೀಚೆಗೆ ನಡೆದ ಯಾವುದೇ ದಾಳಿಯ ವರದಿಗಳಿಗಾಗಿ ಅಥವಾ ಫಾದರ್ ರೈಮನ್ ಜೋಸೆಫ್ ಅವರ ಬಗ್ಗೆ ನಾವು ಹುಡುಕಿದೆವು. ಅಂತಹ ಯಾವುದೇ ದಾಳಿಯ ಬಗ್ಗೆ ಅಥವಾ ತೆಲಂಗಾಣದಿಂದ ಘಟನೆಯ ಬಗ್ಗೆ ಯಾವುದೇ ಸುದ್ದಿ ಇರಲಿಲ್ಲ.

ಮತ್ತೊಂದೆಡೆ, ಏಪ್ರಿಲ್ 16, 2024 ರಂದು ರಾಮ ನವಮಿ ಸಮವಸ್ತ್ರ ವಿವಾದಕ್ಕೆ ಸಂಬಂಧಿಸಿದಂತೆ ಕೇಸರಿ ವಸ್ತ್ರ ಧರಿಸಿದ ಗುಂಪೊಂದು ಕ್ರಿಶ್ಚಿಯನ್ ಶಾಲೆಯ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿತು ಎಂಬ ಸಬ್ರಂಗ್ ಮಾಡಿದ ಹಳೆಯ ವರದಿಯು ನಮ್ಮ ಕೈಸಿಕ್ಕಿತು. ಆ ಸಂದರ್ಭದಲ್ಲಿ ಮದರ್ ತೆರೇಸಾರ ಒಂದು ಪ್ರತಿಮೆಯನ್ನು ಹಾನಿಗೊಳಿಸಿ, ಪ್ರಾಂಶುಪಾಲ ಫಾದರ್ ಜೈಮನ್ ಜೋಸೆಫ್ (ಹೇಳಿಕೆಯಲ್ಲಿ ಬರೆದಿರುವಂತೆ ರೈಮನ್ ಅಲ್ಲ) ಮೇಲೆ ಹಲ್ಲೆ ನಡೆಸಲಾಗಿತ್ತು ಮತ್ತು ಬಲವಂತವಾಗಿ ತಿಲಕ ಹಚ್ಚಲಾಗಿತ್ತು. ಇದರ ಒಂದು ಭಾಗವನ್ನು ಕೆಳಗೆ ನೋಡಿ-

ಆದ್ದರಿಂದ, ವೀಡಿಯೊವನ್ನು ಆಧರಿಸಿ ಮಾಡಲಾದ ಹೇಳಿಕೆ ಸುಳ್ಳು.

******************************************************
ಇದನ್ನೂ ಓದಿ:

ಆಧಾರ್ ಕಾರ್ಡ್ ಹೊಂದಿರುವ ಭಾರತೀಯ ನಾಗರಿಕರಿಗೆ ಪ್ರಧಾನಿ ಮೋದಿಯವರು ಉಚಿತ ಸ್ಪ್ಲೆಂಡರ್ ಬೈಕ್ ಯೋಜನೆಯನ್ನು ಘೋಷಿಸಿದ್ದಾರೆಯೇ? ಸತ್ಯ ಪರಿಶೀಲನೆ

ಈ ವೀಡಿಯೊ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಯುವತಿಯೊಂದಿಗೆ ವಿದೇಶಕ್ಕೆ ಹೋಗುವುದನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*