Don't Miss

ಸೌದಿ ಅರೇಬಿಯಾ ಭಾರತಕ್ಕೆ ಬ್ಲಾಕ್ ವರ್ಕ್ ವೀಸಾಗಳನ್ನು ಸ್ಥಗಿತಗೊಳಿಸಿರುವುದು ನಮ್ಮ ವಿದೇಶಾಂಗ ನೀತಿಯ ಕುಸಿತವನ್ನು ಸೂಚಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಸೌದಿ ಅರೇಬಿಯಾ ಭಾರತ ಸೇರಿದಂತೆ 14 ದೇಶಗಳಿಗೆ ವೀಸಾಗಳನ್ನು ಸ್ಥಗಿತಗೊಳಿಸಿರುವುದು, ಮೋದಿ ನೇತೃತ್ವದಲ್ಲಿ ಭಾರತದ ವಿದೇಶಾಂಗ ನೀತಿಯ ನಿರಂತರ ಕುಸಿತದ ಮೇಲೆ ಇನ್ನೊಂದು ಹೊಡೆತವಾಗಿದೆ.

ಕಡೆನುಡಿ/Conclusion: ತಪ್ಪು ನಿರೂಪಣೆ. ಸೌದಿ ಅರೇಬಿಯಾ ಏಪ್ರಿಲ್ 13, 2025 ರಂದು ಭಾರತ ಸೇರಿದಂತೆ 14 ದೇಶಗಳಿಗೆ ಕೆಲಸದ ವೀಸಾಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು. ಹಜ್ ಯಾತ್ರಿಕರ ಬೃಹತ್ ಒಳಹರಿವನ್ನು ನಿರ್ವಹಿಸಲು ಈ ಕ್ರಮವನ್ನು ಕೈಗೊಳ್ಳಲಾಗಿದೆ ಮತ್ತು ಇದಕ್ಕೂ ಮೋದಿ ಸರ್ಕಾರದ ವಿದೇಶಾಂಗ ನೀತಿಗೂ ಯಾವುದೇ ಸಂಬಂಧವಿಲ್ಲ.

ರೇಟಿಂಗ್/Rating: ದಾರಿತಪ್ಪಿಸುವ ಸುದ್ದಿ —

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

****************************************************************

ಕಾಂಗ್ರೆಸ್ ಪಕ್ಷದ ವಕ್ತಾರ ಪವನ್ ಖೇರಾ ಅವರ X.ಕಾಮ್ ನಲ್ಲಿ ಪೋಸ್ಟ್ ನ್ನು, ಸೌದಿ ಅರೇಬಿಯಾ ಭಾರತ ಸೇರಿದಂತೆ 14 ದೇಶಗಳಿಗೆ ವೀಸಾಗಳನ್ನು ಸ್ಥಗಿತಗೊಳಿಸಿದೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ವಿದೇಶಾಂಗ ನೀತಿಯ ಕುಸಿತವನ್ನು ಸೂಚಿಸುತ್ತದೆ ಎಂದು ಹೇಳಲಾಗಿದೆ.

ಭಾರತ ಸೇರಿದಂತೆ 14 ದೇಶಗಳಿಗೆ ಸೌದಿ ಅರೇಬಿಯಾ ವೀಸಾಗಳನ್ನು ಸ್ಥಗಿತಗೊಳಿಸಿರುವುದು ಮೋದಿ ನೇತೃತ್ವದಲ್ಲಿ ಭಾರತದ ವಿದೇಶಾಂಗ ನೀತಿಯ ನಿರಂತರ ಕುಸಿತದ ಮೇಲಿನ ಇನ್ನೊಂದು ಹೊಡೆತಎಂದು ಪೋಸ್ಟ್ನಲ್ಲಿ ಬರೆಯಲಾಗಿದೆ. ಇದರೊಂದಿಗೆ ಅವರು ಇತರ ವಿದೇಶಾಂಗ ನೀತಿ ವಿವಾದಗಳನ್ನೂ ಸೇರಿಸಿದರು. ಪೋಸ್ಟ್ ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾದ ಲೇಖನವನ್ನು ಸಹ ಉಲ್ಲೇಖಿಸುತ್ತದೆ.

ಸತ್ಯ ಪರಿಶೀಲನೆ

ಗೂಗಲ್ ನ್ಯೂಸ್‌ನಲ್ಲಿ ನಡೆಸಿದ ಮೂಲಭೂತ ಹುಡುಕಾಟವು ಸುದ್ದಿ ನಿಜವಾಗಿದ್ದರೂ ಅದರ ಬಗ್ಗೆ ಇರುವ ಊಹಾಪೋಹಗಳು ಸರಿ ಅಲ್ಲ ಎಂದು ಬಹಿರಂಗಪಡಿಸಿದೆ. ಹಜ್ ಯಾತ್ರಿಕರನ್ನು ಮತ್ತು ವಲಸೆ ನಿಯಮ ಪಾಲನೆಯನ್ನು ನಿರ್ವಹಿಸಲು ಸೌದಿ ಅರೇಬಿಯಾ ಏಪ್ರಿಲ್ 13, 2025 ರಂದು 14 ದೇಶಗಳಿಗೆ (ಭಾರತ, ಬಾಂಗ್ಲಾದೇಶ, ಈಜಿಪ್ಟ್ ಮತ್ತು ಇಂಡೋನೇಷ್ಯಾ ಸೇರಿದಂತೆ) ಜೂನ್ 2025 ರವರೆಗೆ ಬ್ಲಾಕ್ ವರ್ಕ್ ವೀಸಾಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು.

ಇದು ಭಾರತ-ಪಾಕ್ ಉದ್ವಿಗ್ನತೆಗೆ ಮುಂಚಿತವಾಗಿ ತೆಗೆದುಕೊಂಡ ಹಜ್ ಸಂಬಂಧಿತ ಆಡಳಿತಾತ್ಮಕ ನಿರ್ಧಾರವಾಗಿತ್ತು ಮತ್ತು ಮೋದಿ ಸರ್ಕಾರದ ವೈಫಲ್ಯಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಅನೇಕ ಸುದ್ದಿ ವರದಿಗಳು ಈ ಬೆಳವಣಿಗೆಯನ್ನು ಇಲ್ಲಿ ಮತ್ತು ಇಲ್ಲಿ ವರದಿ ಮಾಡಿದೆ. ಆದ್ದರಿಂದ ಇದೊಂದು ದಾರಿತಪ್ಪಿಸುವ ಸುದ್ದಿ.

ಇದನ್ನೂ ಓದಿ:

ವಿಕಿರಣ ಅಪಾಯದೊಂದಿಗೆ ಕಿರಾನಾ ಬೆಟ್ಟಗಳ ಮೇಲೆ ಭಾರತ ದಾಳಿ ಎಂದು ಹಳೆಯ ವೀಡಿಯೊವನ್ನು ಹೊರತರಲಾಗಿದೆ; ಸತ್ಯ ಪರಿಶೀಲನೆ

ಕೈಕೋಳ ಹಾಕಿದ ಭಾರತೀಯ ವಲಸಿಗರನ್ನು ಗ್ವಾಟೆಮಾಲಾಗೆ ಗಡೀಪಾರು ಮಾಡಲಾಗುತ್ತಿರುವುದನ್ನು ಚಿತ್ರ ತೋರಿಸುತ್ತದೆ; ಸತ್ಯ ಪರಿಶೀಲನೆ

 

 

 

Leave a Reply

Your email address will not be published. Required fields are marked *

*