Don't Miss

Tag Archives: Kannada fake news

ಸತ್ಯ ಪರಿಶೀಲನೆ: ಕೇರಳದಲ್ಲಿ ಹಣ ಸುಲಿಗೆಯ ನಾಟಕೀಯ ವೀಡಿಯೊ ಸುಳ್ಳು ಕೋಮುವಾದಿ ಹೇಳಿಕೆಗಳೊಂದಿಗೆ ವೈರಲ್ ಆಗಿದೆ

ಹೇಳಿಕೆ/Claim:ಕೇರಳದಲ್ಲಿ ಹಣ ವಸೂಲಿಯ ನಾಟಕೀಯ ವೀಡಿಯೊವನ್ನು ಕೋಮುವಾದಿ ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಕಡೆನುಡಿ/Conclusion:ಡಿಸೆಂಬರ್ 26ರಂದು ಸುಜಿತ್ ರಾಮಚಂದ್ರನ್ ಎಂಬ ಬಳಕೆದಾರರು ಫೇಸ್‌ಬುಕ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದರು. ಬಳಕೆದಾರರು ವೀಡಿಯೊದ ಪಾತ್ರಗಳನ್ನು ಉಲ್ಲೇಖಿಸಿದರು. ಅವರು ನಂತರ, ವೀಡಿಯೊವನ್ನು ಸಂಪೂರ್ಣವಾಗಿ ಜಾಗೃತಿ ಮೂಡಿಸುವ ಉದ್ದೇಶದಿಂದ ಚಿತ್ರೀಕರಿಸಲಾಗಿದೆ ಎಂಬ ಒಂದು ಹಕ್ಕು ನಿರಾಕರಣೆಯನ್ನೂ ಸೇರಿಸಿದ್ದರು. ರೇಟಿಂಗ್:ತಪ್ಪು ನಿರೂಪಣೆ — ಸತ್ಯ ಪರಿಶೀಲನೆ ವಿವರಗಳು ಗಂಡಸರ ಗುಂಪೊಂದು ಕಾರಿನಲ್ಲಿ ಒಬ್ಬ ವ್ಯಕ್ತಿಯಿಂದ ಹಣ ವಸೂಲಿ ಮಾಡುತ್ತಿರುವುದನ್ನು ತೋರಿಸುವ ವೀಡಿಯೊವೊಂದು ಕೋಮುವಾದಿ  ಹೇಳಿಕೆಗಳೊಂದಿಗೆ ವೈರಲ್ ಆಗುತ್ತಿದೆ. ಈ ವೀಡಿಯೊವನ್ನು ಕೇರಳದಲ್ಲಿ ಸೆರೆಹಿಡಿಯಲಾಗಿದೆ ಮತ್ತು ತಮ್ಮ ಕ್ರಿಸ್ಮಸ್ ...

Read More »

ರತನ್ ಟಾಟಾರವರು ಇತ್ತೀಚೆಗೆ ಗುಂಡು ತಡೆದುಕೊಳ್ಳುವ ಮತ್ತು ಬಾಂಬ್ ತಡೆದುಕೊಳ್ಳುವ ಬಸ್ಸುಗಳನ್ನು ಭಾರತೀಯ ಸೇನೆಗೆ ಉಡುಗೊರೆಯಾಗಿ ನೀಡಿದ್ದಾರೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಟಾಟಾ ಗ್ರೂಪ್ ಅಧ್ಯಕ್ಷರಾದ ರತನ್ ಟಾಟಾರವರು ಇತ್ತೀಚೆಗೆ ಭಾರತೀಯ ಸೇನೆಗೆ ಗುಂಡು ತಡೆದುಕೊಳ್ಳುವಂತಹ ಮತ್ತು ಬಾಂಬ್ ತಡೆದುಕೊಳ್ಳುವಂತಹ ಬಸ್ ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಕಡೆನುಡಿ/Conclusion:ಸುಳ್ಳು. ಈ ಬಸ್‌ಗಳನ್ನು ಮಿಶ್ರಾ ಧಾತು ನಿಗಮ್ ಲಿಮಿಟೆಡ್ (MIDHANI) 2017 ರಲ್ಲಿ CRPF ಗೆ ನೀಡಿತ್ತು. ರೇಟಿಂಗ್:ತಪ್ಪು ನಿರೂಪಣೆ ಸತ್ಯ ಪರಿಶೀಲನೆ ವಿವರಗಳು ಟಾಟಾ ಗ್ರೂಪ್‌ನ ಅಧ್ಯಕ್ಷರಾದ ರತನ್ ಟಾಟಾರವರ ಚಿತ್ರ ಮತ್ತು ಅದರೊಂದಿಗೆ ಒಂದು ಶಸ್ತ್ರಸಜ್ಜಿತ ಬಸ್ಸಿನ  ಮತ್ತೊಂದು ಚಿತ್ರವನ್ನು ತೋರಿಸುವ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಿದೆ. ತನ್ನ ಪರೋಪಕಾರಿ ಚಟುವಟಿಕೆಗಳಿಗಾಗಿ ಹೆಸರುವಾಸಿಯಾದ ಈ ...

Read More »

ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಪ್ರಯಾಣಿಕರ ಪರ್ಸ್‌ನಿಂದ ಹಣ ಕದಿಯುತ್ತಿರುವುದನ್ನು ತಯಾರಿಸಲಾದ ವೀಡಿಯೊ ತೋರಿಸುತ್ತದೆ; ಸತ್ಯ ಪರಿಶೀಲನೆ

ಹೇಳಿಕೆ/Claim:  : ಭದ್ರತಾ ಸಿಬ್ಬಂದಿಯು ವಿಮಾನ ಪ್ರಯಾಣಿಕರೊಬ್ಬರ ಪರ್ಸ್‌ನಿಂದ ಹಣ ಕದಿಯುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion:: ವೀಡಿಯೊ ಪ್ರಕಟಪಡಿಸಿದವರು ಅಪ್‌ಲೋಡ್ ಮಾಡಿರುವ ಹಲವಾರು ವೀಡಿಯೊಗಳಲ್ಲಿ ಕಂಡುಬರುವ ನಟರ ಕಾರ್ಯ ಪ್ರಕ್ರಿಯೆಯನ್ನು ತೋರಿಸುವ ನಾಟಕೀಯ ವೀಡಿಯೊ. ರೇಟಿಂಗ್:ತಪ್ಪು ನಿರೂಪಣೆ ಸತ್ಯ ಪರಿಶೀಲನೆ ವಿವರಗಳು ವಿಮಾನ ನಿಲ್ದಾಣದ ಸಿಬ್ಬಂದಿಯೊಬ್ಬರು ಪ್ರಯಾಣಿಕರೊಬ್ಬರ ಪರ್ಸ್‌ನಿಂದ ಹಣ ಕದಿಯುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಟ್ವಿಟರ್‌ನಲ್ಲಿ ಬಳಕೆದಾರರಿಂದ  ಹಲವಾರು ಪ್ರತಿಕ್ರಿಯೆಗಳನ್ನು ಪಡೆದಿದೆ, ಕೆಳಗೆ ತೋರಿಸಿರುವಂತೆ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಯ ವಿರುದ್ಧ ಎಚ್ಚರಿಕೆ ನೀಡುತ್ತದೆ. Airport se Safar karne ...

Read More »

‘ಪ್ರೀಮಿಯಂ’ ಉಪ್ಪಿನಲ್ಲಿ ಸೈನೈಡ್ ಇದೆಯೆಂಬ ಸುಳ್ಳು ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ; ಸತ್ಯ ಪರಿಶೀಲನೆ

ಹೇಳಿಕೆ/Claim:  ಭಾರತೀಯ ಪ್ರೀಮಿಯಂ ಉಪ್ಪುಗಳು ಸೈನೈಡ್ ಅನ್ನು ಹೊಂದಿವೆ ಎಂದು ವೈರಲ್ ಸುದ್ದಿ ವರದಿ ಹೇಳುತ್ತದೆ. ಕಡೆನುಡಿ/Conclusion: ಎಫ್.ಎಸ್.ಎಸ್.ಎ.ಐ ಸಂಸ್ಥೆಯು 1 ಕೆಜಿಗೆ 10 ಮಿಗ್ರಾಂ ವರೆಗಿನ ಪೊಟ್ಯಾಸಿಯಮ್ ಫೆರೋಸೈನೈಡ್ ಬಳಕೆಯನ್ನು ಅನುಮತಿಸುತ್ತದೆ. ಟಾಟಾ ಉಪ್ಪಿನಂತಹ ಉಪ್ಪಿನ ಬ್ರ್ಯಾಂಡ್‌ಗಳು ಪಿ.ಎಫ್‌.ಸಿ ಮಟ್ಟವನ್ನು ಪ್ರತಿ ಕಿಲೋಗೆ 3 ಮಿಗ್ರಾಂನಷ್ಟಕ್ಕೆ ಇರಿಸುತ್ತವೆ, ಇದು ಅನುಮತಿಸಲಾದ ಮಿತಿಯೊಳಗಿದ್ದು ಉಪ್ಪನ್ನು ಬಳಕೆಗೆ ಸುರಕ್ಷಿತವಾಗಿಸುತ್ತದೆ. ಪಿ.ಎಫ್.ಸಿ ಎಂಬುದು ಉಪ್ಪಿನ ಕಣಗಳಲ್ಲಿ ತೇವಾಂಶ ಉಳಿಯದಂತೆ ಕಾಪಾಡುವ ಒಂದು ಆಂಟಿ-ಕೇಕಿಂಗ್ ಏಜೆಂಟ್. ಟಾಟಾ ಕೆಮಿಕಲ್ಸ್ ಸಹ ಈ ಹೇಳಿಕೆಯನ್ನು ನಿರಾಕರಿಸಿದೆ ಮತ್ತು ತಾವು ಅನುಮೋದಿತ ...

Read More »

ಲಾಸ್ ಏಂಜಲೀಸ್ನಲ್ಲಿ ಬ್ಲ್ಯಾಕ್ ಫ್ರೈಡೆಯಂದು ನೈಕಿ ಅಂಗಡಿಯಲ್ಲಿ ದರೋಡೆಯಾಗಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಲಾಸ್ ಎಂಜಲೀಸ್ ನಲ್ಲಿ ನೈಕಿ ಶೂ ರೀಟೈಲ್ ಅಂಗಡಿಯನ್ನು ಆಫ್ರಿಕನ್ ಅಮೇರಿಕನ್ನರು ದೋಚಿದ್ದಾರೆ. ಕಡೆನುಡಿ:/Conclusion: ಮೂರು ವರ್ಷಗಳ ಹಿಂದಿನ ವೀಡಿಯೊವನ್ನು ಇತ್ತೀಚಿನ ಬ್ಲ್ಯಾಕ್ ಫ್ರೈಡೆಗೆ ಮಾರಾಟಕ್ಕೆ ಸಂಬಂಧಿಸಿದ ಘಟನೆ ಎಂದು ಚಿತ್ರಿಸಲಾಗಿದೆ. ರೇಟಿಂಗ್:ದಾರಿತಪ್ಪಿಸುವ - Fact Check ವಿವರಗಳು: ಥ್ಯಾಂಕ್ಸ್‌ಗಿವಿಂಗ್ ಡೇ ಶಾಪಿಂಗ್ ಉನ್ಮಾದವನ್ನು ಗುರುತಿಸುವ ಬ್ಲ್ಯಾಕ್ ಫ್ರೈಡೆಯಂದು, ಯುನೈಟೆಡ್ ಸ್ಟೇಟ್ಸ್ ಸಾಮಾಜಿಕ ಜಾಲತಾಣಗಳಲ್ಲಿ ರೀಟೈಲ್ ವ್ಯಾಪಾರಿಗಳ ವಿಭಿನ್ನ ಕೊಡುಗೆಗಳು, ರಿಯಾಯಿತಿಗಳು ಮತ್ತು ಕೂಪನ್‌ಗಳು ಅಬ್ಬರಿಸುತ್ತಿದ್ದವು. ಈ ಶಾಪಿಂಗ್ ಉನ್ಮಾದದ ಮಧ್ಯೆ, ಆಫ್ರಿಕನ್-ಅಮೆರಿಕನ್ನರು ಲಾಸ್ ಏಂಜಲೀಸ್‌ನಲ್ಲಿ ನೈಕಿ ಅಂಗಡಿಯನ್ನು ದರೋಡೆ ಮಾಡಿದ್ದಾರೆ ಎನ್ನುವ ...

Read More »

ವಿಶ್ವಕಪ್ 2023ರ ಫೈನಲ್ನಲ್ಲಿ 1.5 ಲಕ್ಷ ಜನರು ಹನುಮಾನ್ ಚಾಲೀಸಾ ಪಠಿಸಿದರಾ? ಸತ್ಯ ಪರಿಶೀಲನೆ

Claim/ಹೇಳಿಕೆ: ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಅಂತಿಮ ವಿಶ್ವಕಪ್ ಪಂದ್ಯಾಟದ ಸಮಯದಲ್ಲಿ ಭಾರಿ ಜನಸಮೂಹವು ಹನುಮಾನ್ ಚಾಲೀಸಾ ಪಠಿಸುತ್ತಿರುವುದನ್ನು ವೈರಲ್ ವೀಡಿಯೊ ತೋರಿಸುತ್ತದೆ.Conclusion/ಕಡೆನುಡಿ: ಸುಳ್ಳು, ವೀಡಿಯೊದ ಧ್ವನಿ ಟ್ರ್ಯಾಕ್ ಅನ್ನು ಬದಲಾಯಿಸಿ ಹನುಮಾನ್ ಚಾಲೀಸಾ ಬಳಸಲಾಗಿದೆ. ರೇಟಿಂಗ್:ತಪ್ಪು ನಿರೂಪಣೆ Fact Check  ವಿವರಗಳು: ನವೆಂಬರ್ 19, 2023ರ ಭಾನುವಾರದಂದು ಅಹಮದಾಬಾದ್ನಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯಾಟದ ಕುರಿತಾದ ಅಬ್ಬರದ ಪ್ರಚಾರದ ನಂತರ, ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ವೀಡಿಯೊಗಳು ಮತ್ತು ಮೀಮ್ಗಳು ವೈರಲ್ ಆಗಲಾರಂಭಿಸಿದವು. ಅಂತಹ ಒಂದು ವೀಡಿಯೊ ಕ್ಲಿಪ್ ನಲ್ಲಿ ಬೃಹತ್ ಸಭೆಯೊಂದನ್ನು ...

Read More »

ಸತ್ಯ ಪರಿಶೀಲನೆ: ಕೋಮುಗಳ ನಡುವಿನ ಜಗಳವೆಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ, ಸ್ಟಂಟ್ ತಂಡವೊಂದು ಮಾಡಿದ ಬೀದಿ ಕಾಳಗ.

Claim/ಹೇಳಿಕೆ: ಪ್ಯಾರಿಸ್‌ನಲ್ಲಿ ತಮಗೆ ಕಿರುಕುಳ ನೀಡುತ್ತಿದ್ದ ಪುರುಷರೊಂದಿಗೆ ಮಹಿಳೆಯರ ಗುಂಪೊಂದು ಸೆಣಸಾಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಕೋಮುವಾದದ ಹೇಳಿಕೆಯೊಂದಿಗೆ ವೀಡಿಯೊ ವೈರಲ್ ಆಗುತ್ತಿದೆ. Conclusion/ಕಡೆನುಡಿ: ವೃತ್ತಿಪರವಾಗಿ ಸ್ಟಂಟ್‌ ಗಳನ್ನು ಮಾಡಲು ಜನರಿಗೆ ತರಬೇತಿ ನೀಡುವ ಫ್ರೆಂಚ್ ಸ್ಟಂಟ್ ಗುಂಪೊಂದು ಈ ವೀಡಿಯೊವನ್ನು ಮಾಡಿದೆ. ಈ ತಿಂಗಳ ಆರಂಭದಲ್ಲಿ ಆ ಗುಂಪು ಈ ವೀಡಿಯೊವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದೆ. ರೇಟಿಂಗ್:ತಪ್ಪು ನಿರೂಪಣೆ ಸತ್ಯ ಪರಿಶೀಲನೆ ವಿವರಗಳು: ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಹಲವಾರು ಗಂಡಸರೊಂದಿಗೆ  ಮಹಿಳೆಯರ ಗುಂಪೊಂದು ಹೋರಾಡುತ್ತಿರುವ ವೈರಲ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ...

Read More »

ಹಳೆ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ವೀಡಿಯೊವನ್ನು ಮಧ್ಯ ಪ್ರದೇಶದ ಚುನಾವಣೆಯದ್ದೆಂದು ಹಂಚಿಕೊಳ್ಳಲಾಗಿದೆ; ಸತ್ಯ ಪರಿಶೀಲನೆ

Claim/ಹೇಳಿಕೆ: ಮಧ್ಯಪ್ರದೇಶದಲ್ಲಿ ಮತದಾನಕ್ಕೂ ಮುನ್ನವೇ ಸಾರ್ವಜನಿಕರು ಆಡಳಿತ ಪಕ್ಷದ (ಬಿಜೆಪಿ) ನಾಯಕರನ್ನು ಓಡಿಸಲಾರಂಭಿಸಿದ್ದಾರೆ. Conclusion/ಕಡೆನುಡಿ:ಸುಳ್ಳು, ಪಶ್ಚಿಮ ಬಂಗಾಳ ಚುನಾವಣೆಗಳ ಹಳೆಯ ವೀಡಿಯೊವನ್ನು ಮಧ್ಯ ಪ್ರದೇಶದ ಮತದಾನವೆಂದು ನವೆಂಬರ್ 17, 2023ರಂದು ಹಂಚಿಕೊಳ್ಳಲಾಗಿದೆ. ರೇಟಿಂಗ್: ತಪ್ಪು ನಿರೂಪಣೆ. Fact Check ವಿವರಗಳು: ನವೆಂಬರ್ 17, 2023 ರಂದು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗಳು ನಡೆಯುವ ಕೆಲವೇ ದಿನ ಮೊದಲು, ರಾಜ್ಯದಲ್ಲಿ ಬಿಜೆಪಿ ನಾಯಕರನ್ನು ಬೂತ್ಗಳಿಂದ ಓಡಿಸಲಾಗುತ್ತಿದೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ವೀಡಿಯೊದಲ್ಲಿದ್ದ ಹಿಂದಿ ಹೇಳಿಕೆ ಹೀಗಿದೆ: “मध्यप्रदेश में वोटिंग होने से पहले ...

Read More »

ಭಾರತದಾದ್ಯಂತ ಎಲ್ಲಾ ಪಟಾಕಿಗಳ ಮಾರಾಟ ಮತ್ತು ಬಳಕೆಯನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆಯೇ? ಸತ್ಯ ಪರಿಶೀಲನೆ

Claim/ಹೇಳಿಕೆ: ಪಟಾಕಿಗಳ ಮಾರಾಟ ಮತ್ತು ಬಳಕೆಯ ಮೇಲೆ ಸರ್ವೋಚ್ಚ ನ್ಯಾಯಾಲಯವು ನಿಷೇಧ ಘೋಷಿಸಿತು, ಈ ಹಿಂದೆ ದೆಹಲಿ-NCRಗೆ ಸೀಮಿತವಾಗಿದ್ದದ್ದು ಈಗ ರಾಷ್ಟ್ರವ್ಯಾಪಿಯಾಗಿ ಅನ್ವಯಿಸುತ್ತದೆ. Conclusion/ಕಡೆನುಡಿ: ಪಟಾಕಿಗಳ ಮೇಲಿನ ಸರ್ವೋಚ್ಚ ನ್ಯಾಯಾಲಯದ ನಿಷೇಧವು ಭಾರತದಾದ್ಯಂತ ಬೇರಿಯಂ ಬಳಕೆಗೆ ಸಂಬಂಧಿಸಿದೆ ಮತ್ತಿದು ಎಲ್ಲಾ ಪಟಾಕಿಗಳ ಮೇಲೆ ಹೇರಲಾದ ನಿಷೇಧವಲ್ಲ. Rating: Misleading — Fact Check ವಿವರಗಳು: ಭಾರತದ ಸರ್ವೋಚ್ಚ ನ್ಯಾಯಾಲಯವು ಕೇವಲ ದೆಹಲಿ-NCR ಪ್ರದೇಶಕ್ಕೆ ಸೀಮಿತವಾಗಿರದೆ ಭಾರತದಾದ್ಯಂತ ಪಟಾಕಿಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದೆ ಎನ್ನುವ ತಪ್ಪು ಮಾಹಿತಿಯುಳ್ಳ ಒಂದು ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ...

Read More »

ಗೋಮಾಂಸ ಸೇವನೆ ಸಮಸ್ಯೆಯಾಗಬಾರದು ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆಯೇ? ಸತ್ಯ ಪರಿಶೀಲನೆ

Claim/ಹೇಳಿಕೆ: ಗೋಮಾಂಸ ಸೇವಿಸುವುದರಲ್ಲಿ ತಪ್ಪೇನಿಲ್ಲ ಎಂದು ದಿಗ್ವಿಜಯ್ ಸಿಂಗ್ ಹೇಳುತ್ತಾರೆ. Conclusion/ಕಡೆನುಡಿ: ಸುಳ್ಳು, ದಿಗ್ವಿಜಯ್ ಸಿಂಗ್ ಅವರು ಸಾವರ್ಕರ್ ಅವರ ಬರವಣಿಗೆಯನ್ನು ಉಲ್ಲೇಖಿಸುತ್ತಿದ್ದರು ಮತ್ತು ಇದು ಅವರ ಸ್ವಂತದ ಹೇಳಿಕೆಯಲ್ಲ. ರೇಟಿಂಗ್: ತಪ್ಪು ನಿರೂಪಣೆ. Fact Check  ವಿವರಗಳು ಕಾಂಗ್ರೆಸ್ ನಾಯಕರಾದ ದಿಗ್ವಿಜಯ್ ಸಿಂಗ್ ರವರು ಮತ್ತೊಂದು ವಿವಾದದ ಕೇಂದ್ರವಾಗಿದ್ದಾರೆ, ಅದೂ ನವೆಂಬರ್ 2023 ರಲ್ಲಿ ನಡೆಯಲಿರುವ ಮಧ್ಯಪ್ರದೇಶ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ನಡುವೆ. ಈ ಮಧ್ಯ ಪ್ರದೇಶದ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಹಿರಿಯ ನಾಯಕರನ್ನು ಒಳಗೊಂಡಿರುವ ಒಂದು ವೀಡಿಯೊ ವೈರಲ್ ಆಗುತ್ತಿದ್ದು ...

Read More »