ಹೇಳಿಕೆ/Claim: ಪ್ರಧಾನಿ ಮೋದಿಯವರು ತಮ್ಮ 26ನೇ ವಯಸ್ಸಿನಲ್ಲಿ ಕೇದಾರನಾಥ ದೇವಸ್ಥಾನದಲ್ಲಿ ಹಸ್ತಾಧಾರ ಯೋಗ ಮುದ್ರೆಯನ್ನು ಪ್ರದರ್ಶಿಸಿದರು. ಮೋದಿಯವರ ಅಪರೂಪದ ವೀಡಿಯೊ. ಕಡೆನುಡಿ/Conclusion: ಸುಳ್ಳು. ವೀಡಿಯೊದಲ್ಲಿ ಹಸ್ತಾಧಾರ ಯೋಗ ಮಾಡುತ್ತಿರುವ ವ್ಯಕ್ತಿ ಆಚಾರ್ಯ ಸಂತೋಷ್ ತ್ರಿವೇದಿಯವರು, ಪ್ರಧಾನಿ ಮೋದಿ 26ರ ವಯಸ್ಸಿನವರಾಗಿದ್ದಾಗ ಅಲ್ಲ. ರೇಟಿಂಗ್: ಸಂಪೂರ್ಣವಾಗಿ ತಪ್ಪು-- ಸತ್ಯ ಪರಿಶೀಲನೆ ವಿವರಗಳು ಮುಂದೊಂದು ದಿನ ಈತ ಭಾರತದ ಪ್ರಧಾನಿಯಾಗುತ್ತಾರೆ ಎಂದು ಯಾರೂ ಅಂದುಕೊಂಡಿರಲಿಲ್ಲ ಎಂಬ ಹೇಳಿಕೆಯೊಂದಿಗೆ ಯೋಗಿಯೊಬ್ಬರು ತಮ್ಮ ಕೈಗಳ ಮೇಲೆ ತಲೆಕೆಳಗಾಗಿ ನಡೆಯುವ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ, ಇದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ...
Read More »ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ರವರ ಬಂಧನವನ್ನು ಪ್ರತಿಭಟಿಸುತ್ತಿರುವ ಜನಸಮೂಹವೆಂದು ಜಗನ್ನಾಥ ರಥಯಾತ್ರೆಯ ಚಿತ್ರವನ್ನು ತೋರಿಸಲಾಗಿದೆ; ಸತ್ಯ ಪರಿಶೀಲನೆ
ಹೇಳಿಕೆ/Claim: ದೆಹಲಿ ಮುಖ್ಯ ಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನದ ನಂತರ ನಡೆದ ಪ್ರತಿಭಟನೆಗಳನ್ನು ತೋರಿಸುವ ಬೃಹತ್ ಜನಸಮೂಹದ ಚಿತ್ರ. ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. 2023 ರಲ್ಲಿ ಪ್ರಸಿದ್ಧ ಜಗನ್ನಾಥ ರಥ ಯಾತ್ರೆಯಲ್ಲಿ ಭಾಗವಹಿಸಿದ ಜನರನ್ನು ಚಿತ್ರ ತೋರಿಸುತ್ತದೆ. ರೇಟಿಂಗ್: ತಪ್ಪು ನಿರೂಪಣೆ-- ಸತ್ಯ ಪರಿಶೀಲನೆ ವಿವರಗಳು ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರವರ ಬಂಧನವನ್ನು ಪ್ರತಿಭಟಿಸುತ್ತಿರುವ ಜನಸಮೂಹವನ್ನು ತೋರಿಸುತ್ತಿರುವುದೆಂಬ ಹೇಳಿಕೆಯೊಂದಿಗೆ ರಸ್ತೆಯಲ್ಲಿ ಜನರ ಬೃಹತ್ ಸಮೂಹವನ್ನು ತೋರಿಸುವ ಚಿತ್ರವೊಂದನ್ನು ಹಂಚಿಕೊಳ್ಳಲಾಗಿದೆ. ದೆಹಲಿಯ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥರಾದ ಅರವಿಂದ್ ಕೇಜ್ರಿವಾಲ್ ...
Read More »ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷವನ್ನು ಟೀಕಿಸಿ ಬಿಜೆಪಿಯನ್ನು ಹೊಗಳುತ್ತಿರುವುದನ್ನು ತೋರಿಸುವ ತಿದ್ದಿದ ವಾಟ್ಸಾಪ್ ವೀಡಿಯೊ; ಸತ್ಯ ಪರಿಶೀಲನೆ
ಹೇಳಿಕೆ/Claim: ರಾಹುಲ್ ಗಾಂಧಿಯವರು ಬಿಜೆಪಿಯನ್ನು ಕಾಂಗ್ರೆಸ್ನೊಂದಿಗೆ ಗೊಂದಲಿಸಿಕೊಂಡು , ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಿದ್ದಾರೆಂದು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion: ಸುಳ್ಳು. ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಿರುವುದನ್ನು ತೋರಿಸಲು ವೀಡಿಯೊವನ್ನು ತಿದ್ದಲಾಗಿದೆ ಮತ್ತು ಧ್ವನಿಯನ್ನು ಬದಲಾಯಿಸಲಾಗಿದೆ. ರೇಟಿಂಗ್:ಸಂಪೂರ್ಣವಾಗಿ ಸುಳ್ಳು– ಸತ್ಯ ಪರಿಶೀಲನೆ ವಿವರಗಳು ಮಧ್ಯಪ್ರದೇಶದಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಪಾಲ್ಗೊಂಡು ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವೀಡಿಯೊವನ್ನು ವಾಟ್ಸಾಪ್ನಲ್ಲಿ “ಪರಮ ಸತ್ಯ” ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಈ ವೀಡಿಯೊದಲ್ಲಿ, ರಾಹುಲ್ ಗಾಂಧಿಯವರು ಬಿಜೆಪಿಯನ್ನು ಕಾಂಗ್ರೆಸ್ಗೆ ಹೋಲಿಸುತ್ತಾ ಅವರ ಪಾತ್ರಗಳನ್ನು ಹೇಗೆ ...
Read More »ಭಾರತದಲ್ಲಿ ರಸ್ತೆ ಇಲಾಖೆಯ ಕಟ್ಟಡದ ಮುಂಭಾಗದಲ್ಲಿ ನೀರು ಕಟ್ಟಿಕೊಂಡಿರುವ “ಕಚ್ಚಾ” ರಸ್ತೆ ಕಾಣಿಸುತ್ತದೆಯೇ? ಸತ್ಯ ಪರಿಶೀಲನೆ
ಹೇಳಿಕೆ/Claim: ಭಾರತೀಯ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರನ್ನು ಟ್ಯಾಗ್ ಮಾಡಿ, “ರಸ್ತೆಗಳ ಇಲಾಖೆ” ಕಟ್ಟಡದ ಮುಂಭಾಗದಲ್ಲಿ ಜಲಾವೃತಗೊಂಡ ರಸ್ತೆಯನ್ನು ಹಂಚಿಕೊಳ್ಳಲಾಗಿದೆ. ಕಡೆನುಡಿ/Conclusion:ಸುಳ್ಳು. ಕಟ್ಟಡ ಮತ್ತು ಜಲಾವೃತ ರಸ್ತೆಯೆರಡೂ ನೇಪಾಳದಲ್ಲಿದೆ, ಭಾರತದಲ್ಲಿ ಅಲ್ಲ. ರೇಟಿಂಗ್:ತಪ್ಪು ನಿರೂಪಣೆ-- ಸತ್ಯ ಪರಿಶೀಲನೆ ವಿವರಗಳು ಜಲಾವೃತಗೊಂಡ ರಸ್ತೆಯನ್ನು ಚಿತ್ರಿಸುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ, ಇದು “ರಸ್ತೆ ಇಲಾಖೆ” ಕಟ್ಟಡದ ದೃಶ್ಯವೆಂಬುದು ಚಿತ್ರದ ಜೊತೆಯಿರುವ ಹೇಳಿಕೆ. பாஜகவின் சாதனைகளில் இதுவும் ஒன்று…. “Department of Roads” “சாலை போக்குவரத்து துறை”ஒட்டிய சாலைக்கே சாலை அமைக்க வக்கில்லை 💦💦💦 pic.twitter.com/53ECsR62jt ...
Read More »ನಾಗಾರ್ಜುನ ಸಿಮೆಂಟ್ಸ್ 9/11 ವಿಷಯವಸ್ತುವನ್ನು ಒಳಗೊಂಡ ಜಾಹೀರಾತನ್ನು ತೋರಿಸಿದೆಯೇ? ಸತ್ಯ ಪರಿಶೀಲನೆ
ಹೇಳಿಕೆ/Claim: ನಾಗಾರ್ಜುನ ಸಿಮೆಂಟ್ಸ್ ತನ್ನ ಜಾಹೀರಾತಿನಲ್ಲಿ “ದಯಾಹೀನವಾಗಿ”; 9/11 ದುರಂತವನ್ನು ಬಳಸಿದೆ. ಕಡೆನುಡಿ/Conclusion: ಸುಳ್ಳು, ಅಂತಹ ಯಾವುದೇ ಜಾಹೀರಾತನ್ನು ನಾಗಾರ್ಜುನ ಸಿಮೆಂಟ್ಸ್ ಎಂದೂ ತೋರಿಸಿಲ್ಲ. ರೇಟಿಂಗ್: ತಪ್ಪು ನಿರೂಪಣೆ-- ಸತ್ಯ ಪರಿಶೀಲನೆ ವಿವರಗಳು ಆಂಧ್ರಪ್ರದೇಶ ಮೂಲದ ಸಿಮೆಂಟ್ ತಯಾರಕ ಕಂಪನಿಯಾದ ನಾಗಾರ್ಜುನ ಸಿಮೆಂಟ್ನ ಜಾಹೀರಾತು ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ 9/11 ದಾಳಿಯನ್ನು ನೆನಪಿಸುವಂತೆ ನ್ಯೂಯಾರ್ಕ್ ನಗರದ ಅವಳಿ ಕಟ್ಟಡಗಳ ಮೇಲೆ ವಿಮಾನ ಎರಗುತ್ತಿರುವ ಅನಿಮೇಶನ್ ಅನ್ನು ತೋರಿಸಲಾಗಿದೆ, ಆದರೆ ಕಟ್ಟಡವನ್ನು ಭೇದಿಸಲು ಸಾಧ್ಯವಾಗದೆ ಅದು ತಕ್ಷಣವೇ ಹಿಂತೆಗೆದು ...
Read More »ಡಿಎಂಕೆ ಶಾಸಕ ಮನ್ಸೂರ್ ಮೊಹಮ್ಮದ್ ಪೊಲೀಸ್ ಇನ್ಸ್ಪೆಕ್ಟರ್ ಗೆ ಹೊಡೆದರಾ? ವೀಡಿಯೊ ವೈರಲ್; ಸತ್ಯ ಪರಿಶೀಲನೆ
ಹೇಳಿಕೆ/Claim: ಡಿಎಂಕೆ ನಾಯಕರೊಬ್ಬರು ಸಮವಸ್ತ್ರದಲ್ಲಿರುವ ಪೊಲೀಸ್ ಅಧಿಕಾರಿಯನ್ನು ಥಳಿಸುತ್ತಿರುವುದನ್ನು ತೋರಿಸುವ ವೀಡಿಯೊ, ತಮಿಳುನಾಡಿನ ಹತಾಶ ಪರಿಸ್ಥಿತಿಯನ್ನು ಸೂಚಿಸುತ್ತದೆ. ಕಡೆನುಡಿ/Conclusion: ಸುಳ್ಳು. ಮೀರಟ್ ಬಿಜೆಪಿ ಕೌನ್ಸಿಲರ್ ಮುನೀಶ್ ಕುಮಾರ್ ಅವರ ಹಳೆಯ 2018 ರ ವೀಡಿಯೊವನ್ನು ತಮಿಳುನಾಡಿನ ಡಿಎಂಕೆ ನಾಯಕ ಎಂದು ತಪ್ಪಾಗಿ ತೋರಿಸಲಾಗಿದೆ. ರೇಟಿಂಗ್: ಸಂಪೂರ್ಣವಾಗಿ ಸುಳ್ಳು— ಸತ್ಯ ಪರಿಶೀಲನೆ ವಿವರಗಳು ವ್ಯಕ್ತಿಯೊಬ್ಬ ಸಮವಸ್ತ್ರದಲ್ಲಿದ್ದ ಪೊಲೀಸ್ ಅಧಿಕಾರಿಯನ್ನು ಥಳಿಸುತ್ತಿರುವ ವೀಡಿಯೊ ಎಲ್ಲಾ ಸುದ್ದಿವಾಹಿನಿಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಆ ವ್ಯಕ್ತಿಯು ಡಿಎಂಕೆ ನಾಯಕ ಎಂದು ಹೇಳಲಾಗುತ್ತಿದೆ. ಶೀರ್ಷಿಕೆಯು ಹೀಗಿದೆ: “ಡಿಎಂಕೆ ಶಾಸಕ ಮನ್ಸೂರ್ ...
Read More »ಬೆಂಗಳೂರಿನಲ್ಲಿ ಅಂಗಡಿಗಳ ಕೇಸರಿ ಬಣ್ಣದ ಸೂಚನಾ ಫಲಕಗಳನ್ನು ಬೃ.ಬೆಂ.ಮ.ಪಾ ತೆಗೆದುಹಾಕುತ್ತಿದ್ದಾರಾ? ಸತ್ಯ ಪರಿಶೀಲನೆ
ಹೇಳಿಕೆ/Claim: ಕರ್ನಾಟಕ ಸರ್ಕಾರವು ಹಿಂದೂ ಅಂಗಡಿ ಮಾಲೀಕರ ಕೇಸರಿ ಬಣ್ಣದ ಫಲಕಗಳನ್ನು ತೆಗೆದುಹಾಕುತ್ತಿದೆ. ಕಡೆನುಡಿ/Conclusion: ಸುಳ್ಳು. BBMPಯು ಬೆಂಗಳೂರಿನಲ್ಲಿ ಫೆಬ್ರವರಿ 28, 2024 ರ ಗಡುವಿನೊಂದಿಗೆ 60% ಕನ್ನಡ ನಾಮಫಲಕಗಳ ನಿಯಮವನ್ನು ಜಾರಿಗೆ ತಂದಿತ್ತು, ಆ ಗಡುವನ್ನು ಎರಡು ವಾರಗಳ ಕಾಲ ವಿಸ್ತರಿಸಲಾಯಿತು. ರೇಟಿಂಗ್: ದಾರಿತಪ್ಪಿಸುವ ಸುದ್ದಿ— ಸತ್ಯ ಪರಿಶೀಲನೆ ವಿವರಗಳು ಹಿಂದಿಯಲ್ಲಿ ಸಂದೇಶವನ್ನು ಹೊಂದಿರುವ ವೀಡಿಯೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅದರ ಅನುವಾದ ಹೀಗಿದೆ: “ನೀವು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದರೆ, ಕರ್ನಾಟಕದಲ್ಲಿ ನಿಮ್ಮ ಅಂಗಡಿ, ಮನೆ, ಪ್ರದೇಶ, ದೇವಸ್ಥಾನ ಇತ್ಯಾದಿಗಳಲ್ಲಿ ಕೇಸರಿ ...
Read More »ಮೋದಿಯವರು ಶೇಖ್ಗಳಿಗೆ ಕೇಸರಿ ತೊಡಿಸಿದರೇ? ನಕಲಿ ಚಿತ್ರ ಪುನರುದ್ಭವ; ಸತ್ಯ ಪರಿಶೀಲನೆ
ಹೇಳಿಕೆ/Claim: ಮೋದಿಯವರು ಸ್ವಯಂ ಟೋಪಿ ಧರಿಸುವುದಿಲ್ಲ ಆದರೆ ಶೇಖ್ಗಳಿಗೆ ಕೇಸರಿ ತೊಡಿಸುತ್ತಾರೆ. ಕಡೆನುಡಿ/Conclusion: ಸುಳ್ಳು. ವೈರಲ್ ಆದ ಚಿತ್ರ ಫೋಟೋಶಾಪ್ ಮಾಡಿರುವುದು. ರೇಟಿಂಗ್: ತಪ್ಪು ನಿರೂಪಣೆ — ಸತ್ಯ ಪರಿಶೀಲನೆ ವಿವರಗಳು ಅಬುಧಾಬಿಯ ಆಡಳಿತಗಾರ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ‘MBZ’ ಜೊತೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಇರುವ ಚಿತ್ರವನ್ನು ವಾಟ್ಸಾಪ್ನಲ್ಲಿ ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಮೊಹಮ್ಮದ್ ರವರು ಕೇಸರಿ ಉಡುಪನ್ನು ಧರಿಸಿರುವುದನ್ನು ಕಾಣಬಹುದು. ಹಿಂದಿಯಲ್ಲಿರುವ ಶೀರ್ಷಿಕೆ ಹೀಗಿದೆ: “ಇದು ಮೋದಿ! ತಾವು ಸ್ವಯಂ ಟೋಪಿ ಧರಿಸುವುದಿಲ್ಲ, ಆದರೆ ಶೇಖ್ ಕೇಸರಿ ಧರಿಸುವಂತೆ ...
Read More »ಯೋಗಿ ಆದಿತ್ಯನಾಥ್ ಸರ್ಕಾರವು ಉತ್ತರ ಪ್ರದೇಶದಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿ ಮೀಸಲಾತಿಯನ್ನು ರದ್ದುಗೊಳಿಸಿದೆಯೇ? ಸತ್ಯ ಪರಿಶೀಲನೆ
ಹೇಳಿಕೆ/Claim: ಯೋಗಿ ಆದಿತ್ಯನಾಥ್ ಸರ್ಕಾರವು ಉತ್ತರ ಪ್ರದೇಶದ ಖಾಸಗಿ ವೈದ್ಯಕೀಯ ಕಾಲೇಜುಗಳಿಂದ ಮೀಸಲಾತಿಯನ್ನು ರದ್ದುಗೊಳಿಸಿದೆ. ಕಡೆನುಡಿ/Conclusion: ಸುಳ್ಳು. ಯೋಗಿ ಆದಿತ್ಯನಾಥ್ ಸರ್ಕಾರವು ಉತ್ತರ ಪ್ರದೇಶದ ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಿಂದ ಮೀಸಲಾತಿಯನ್ನು ರದ್ದುಗೊಳಿಸಿಲ್ಲ. ಹಿಂದಿನ ಅಖಿಲೇಶ್ ಯಾದವರ ಸಮಾಜವಾದಿ ಪಕ್ಷದ ಸರ್ಕಾರವೇ ಈ ನಿಯಮವನ್ನು ಜಾರಿಗೆ ತಂದಿತ್ತು. ರೇಟಿಂಗ್: ತಪ್ಪು ನಿರೂಪಣೆ-- ಸತ್ಯ ಪರಿಶೀಲನೆ ವಿವರಗಳು ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರವು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಮೀಸಲಾತಿಯನ್ನು ರದ್ದುಗೊಳಿಸಿದೆ ಎಂಬ ಹೇಳಿಕೆಯೊಂದಿಗೆ, ಪೋಸ್ಟರ್ ಹೊಂದಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.”ಯುಪಿ ...
Read More »ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಬ್ಯಾರಿಕೇಡ್ಗಳ ಹೊರತಾಗಿಯೂ ದೆಹಲಿಯೊಳಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹಳೆಯ ವೀಡಿಯೊವನ್ನು ಬಳಸಿ ತೋರಿಸಲಾಗಿದೆ; ಸತ್ಯ ಪರಿಶೀಲನೆ
ಹೇಳಿಕೆ/Claim: ರೈತರು ತಮ್ಮ ಟ್ರ್ಯಾಕ್ಟರ್ಗಳಲ್ಲಿ ಚಲಿಸುತ್ತಿರುವ ವೀಡಿಯೊವನ್ನು ದೆಹಲಿಯ ಗಡಿಯ ವೀಡಿಯೊ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಕಡೆನುಡಿ/Conclusion: ಸುಳ್ಳು. ಒಂದು ವಾರ ಹಳೆಯ ಪಂಜಾಬ್ನ ವೀಡಿಯೊವನ್ನು, ರೈತರು ತಮ್ಮ ಟ್ರ್ಯಾಕ್ಟರ್ಗಳಲ್ಲಿ ದೆಹಲಿಯೊಳಗೆ ಪ್ರವೇಶಿಸುತ್ತಿರುವುದು ಎನ್ನುವಂತೆ ತೋರಿಸಲಾಗಿದೆ. ರೇಟಿಂಗ್: ತಪ್ಪು ನಿರೂಪಣೆ -- ಸತ್ಯ ಪರಿಶೀಲನೆ ವಿವರಗಳು ಫೆಬ್ರವರಿ 13, 2024 ರ ಮಂಗಳವಾರದಂದು ಪ್ರತಿಭಟನೆ ನಡೆಸಲು ದೊಡ್ಡ ಪ್ರಮಾಣದಲ್ಲಿ ರೈತರು ದೆಹಲಿಯೊಳಗೆ ಪ್ರವೇಶಿಸಲು ಪ್ರಾರಂಭಿಸಿದಾಗಿನಿಂದ, ವಿಭಿನ್ನ ಹೇಳಿಕೆಗಳನ್ನು ಹೊಂದಿರುವ ಹಲವಾರು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿವೆ. ಅವುಗಳಲ್ಲಿ, ರೈತರನ್ನು ಹೊತ್ತಿರುವ ಒಂದು ಟ್ರ್ಯಾಕ್ಟರ್ ರಾಷ್ಟ್ರ ...
Read More »