Don't Miss

ಭಾರತದ ರಾಜಧಾನಿ ದೆಹಲಿಯನ್ನು ಶೀಘ್ರದಲ್ಲೇ ಇಂದ್ರಪ್ರಸ್ಥ ಎಂದು ಮರುನಾಮಕರಣ ಮಾಡಲಾಗುವುದೇ? ಸತ್ಯ ಪರಿಶೀಲನೆ

ಹೇಳಿಕೆ/Claim : ದೆಹಲಿಯನ್ನು ಶೀಘ್ರದಲ್ಲೇ ಮಹಾಭಾರತದ ಪಾಂಡವರ ನಗರವಾದ ಇಂದ್ರಪ್ರಸ್ಥ ಎಂದು ಮರುನಾಮಕರಣ ಮಾಡಲಾಗುವುದು.

ಕಡೆನುಡಿ/Conclusion :  ಈ ಹೇಳಿಕೆ ಸುಳ್ಳು. ಇತ್ತೀಚೆಗೆ ರಾಜಧಾನಿಯನ್ನು ಮರುನಾಮಕರಣ ಮಾಡುವ ಪ್ರಸ್ತಾವನೆಗಳು ಬಂದಿದ್ದರೂ, ಯಾವುದೇ ಅಧಿಕೃತ ನಿರ್ಧಾರ, ಸಮಯಸೂಚನೆ ಅಥವಾ ಶಾಸಕಾಂಗ ಕ್ರಮವನ್ನು ದೃಢೀಕರಿಸಲಾಗಿಲ್ಲ. ಅಂತಹ ಬದಲಾವಣೆ ನಡೆಯುತ್ತದೆ ಎಂಬುದನ್ನು ದೃಢೀಕರಿಸುವ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ಸರ್ಕಾರಿ ಮೂಲಗಳಿಂದಲೂ ಬಂದಿಲ್ಲ.

ರೇಟಿಂಗ್/Rating : ಸುಳ್ಳು —

******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

******************************************************

ಭಾರತದ ರಾಜಧಾನಿ ದೆಹಲಿಯನ್ನು ಶೀಘ್ರದಲ್ಲೇ ಇಂದ್ರಪ್ರಸ್ಥ ಎಂದು ಮರುನಾಮಕರಣ ಮಾಡಲಾಗುವುದು ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ‘coolfunnytshirt’ ಎಂಬ ದೃಢೀಕೃತ X ಬಳಕೆದಾರ ಇಂತಹ ಹೇಳಿಕೆ ನೀಡಿದ್ದು, ಪಾಂಡವರಿಗೆ ಸಂಬಂಧಿಸಿದ ಮಹಾಭಾರತದಲ್ಲಿನ ಪೌರಾಣಿಕ ನಗರವಾದ ಇಂದ್ರಪ್ರಸ್ಥ ಎಂದು ದೆಹಲಿಯನ್ನು ಶೀಘ್ರದಲ್ಲೇ ಮರುನಾಮಕರಣ ಮಾಡಲಾಗುವುದು ಎನ್ನುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಜನವರಿ 25, 2026 ರ ದಿನಾಂಕದ ಈ ಪೋಸ್ಟ್ ನಲ್ಲಿ ಇಂಡಿಯಾ ಗೇಟ್, ಕೃಷ್ಣ ಮತ್ತು ಅರ್ಜುನರ ಚಿತ್ರಣ ಮತ್ತು ಗೃಹ ಸಚಿವ ಅಮಿತ್ ಶಾರವರ ಚಿತ್ರವನ್ನು ಸೇರಿಸಲಾಗಿದೆ. ಈ ಪೋಸ್ಟ್ ಗೆ 346,000 ಕ್ಕೂ ಹೆಚ್ಚು ವೀಕ್ಷಣೆಗಳು ದೊರಕಿದ್ದು, ಅದನ್ನು  ಕೆಳಗೆ ನೋಡಬಹುದು –

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅದನ್ನು ಇಲ್ಲಿ ನೋಡಬಹುದು.

 

View this post on Instagram

 

A post shared by Prabhat Dutta (@prabhatdutta4)

 ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. ರಾಜಧಾನಿಯನ್ನು ಮರುನಾಮಕರಣ ಮಾಡುವ ಬಗ್ಗೆ ಚರ್ಚೆಗಳು ನಡೆದಿದ್ದರೂ, ಇಲ್ಲಿಯವರೆಗೆ ಯಾವುದೇ ಔಪಚಾರಿಕ ನಿರ್ಧಾರವನ್ನು ಕೈಗೊಳ್ಳಲಾಗಿಲ್ಲ. ಯಾವುದೇ ದೃಢೀಕೃತ ಸಮಯ ನಿಗದಿಪಡಿಸಲಾಗಿಲ್ಲ, ಯಾವುದೇ ಶಾಸಕಾಂಗ ಕ್ರಮವನ್ನು ಕೈಗೊಳ್ಳಲಾಗಿಲ್ಲ ಮತ್ತು ಅಂತಹ ಬದಲಾವಣೆ ಸಂಭವಿಸುತ್ತದೆ ಎಂದು ಸೂಚಿಸಲು ಸರ್ಕಾರಿ ಮೂಲಗಳಿಂದ ಯಾವುದೇ ವಿಶ್ವಾಸಾರ್ಹ ವರದಿ ಇಲ್ಲ.

ವಿವರಗಳು:

ಈ ವಿಷಯದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನಾವು ಮೊದಲು “ದೆಹಲಿಯನ್ನು ಇಂದ್ರಪ್ರಸ್ಥ ಎಂದು ಮರುನಾಮಕರಣ ಮಾಡಲಾಗುವುದು” ಎಂಬ ಪದಗಳೊಂದಿಗೆ ಅಂತರ್ಜಾಲದ ಹುಡುಕಾಟವನ್ನು ನಡೆಸಿದೆವು. ಹಿಂದೂಸ್ತಾನ್ ಟೈಮ್ಸ್ ನ ಅಕ್ಟೋಬರ್ 19, 2025ರ ವರದಿಯ ಪ್ರಕಾರ, ವಿಶ್ವ ಹಿಂದೂ ಪರಿಷತ್ (VHP) ದೆಹಲಿ ಸಚಿವರಾದ ಕಪಿಲ್ ಮಿಶ್ರಾ ಅವರಿಗೆ ಬರೆದ ಪತ್ರದಲ್ಲಿ ಮರುನಾಮಕರಣವನ್ನು ಪ್ರಸ್ತಾಪಿಸಿತು. ವರದಿಯು ಹೀಗಿದೆ: “ನಗರದ ಹೆಸರುಗಳು ರಾಷ್ಟ್ರದ ಪ್ರಜ್ಞೆಯನ್ನು ಪ್ರತಿಬಿಂಬಿಸುತ್ತವೆ, ಅದರ ಪ್ರಾಚೀನ ಇತಿಹಾಸ ಮತ್ತು ಸಂಸ್ಕೃತಿಯೊಂದಿಗೆ ಸಂಬಂಧ ಕಲ್ಪಿಸಬಹುದು. “ನಾವು ದೆಹಲಿ ಎಂದಾಗ, ಕೇವಲ 2,000 ವರ್ಷಗಳ ಅವಧಿಯನ್ನು ಮಾತ್ರ ನೋಡುತ್ತೇವೆ. ಆದರೆ ಇಂದ್ರಪ್ರಸ್ಥ ಎಂದಾಗ, 5,000 ವರ್ಷಗಳ ಅದ್ಭುತ ಇತಿಹಾಸದೊಂದಿಗೆ ಸಂಬಂಧ ಕಲ್ಪಿಸಬಹುದು.” ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ಇದರ ನಂತರ, ನವೆಂಬರ್ 1, 2025 ರಂದು ಪ್ರಕಟವಾದ ಟೈಮ್ಸ್ ಆಫ್ ಇಂಡಿಯಾದ ಮತ್ತೊಂದು ವರದಿಯೂ ನಮಗೆ ದೊರಕಿತು. ವರದಿಯ ಪ್ರಕಾರ, ಸಂಸದ ಪ್ರವೀಣ್ ಖಂಡೇಲ್ವಾಲ್ ರವರು ಕೇಂದ್ರ ಗೃಹ ಸಚಿವ ಅಮಿತ್ ಶಾರವರಿಗೆ ಪತ್ರ ಬರೆದು ಪ್ರಾಚೀನ ಪರಂಪರೆಯನ್ನು ಗೌರವಿಸಲು ಮರುನಾಮಕರಣ ಮಾಡುವಂತೆ ಒತ್ತಾಯಿಸಿದರು. ಹಳೆಯ ದೆಹಲಿ ರೈಲು ನಿಲ್ದಾಣವನ್ನು ‘ಇಂದ್ರಪ್ರಸ್ಥ ಜಂಕ್ಷನ್’ ಮತ್ತು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ‘ಇಂದ್ರಪ್ರಸ್ಥ ಅಂತರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಮರುನಾಮಕರಣ ಮಾಡಲು ಅವರು ಸಲಹೆ ನೀಡಿದರು. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ಆದಾಗ್ಯೂ, ದೆಹಲಿಯನ್ನು ಇಂದ್ರಪ್ರಸ್ಥ ಎಂದು ಮರುನಾಮಕರಣ ಮಾಡುವ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಸರ್ಕಾರದ ಪ್ರತಿಕ್ರಿಯೆಯನ್ನು ಗುರುತಿಸಲಾಗಿಲ್ಲ. ಎಕನಾಮಿಕ್ ಟೈಮ್ಸ್ ನ ಒಂದು ವರದಿಯು ಇತಿಹಾಸಕಾರರ ಅಭಿಪ್ರಾಯವನ್ನು ಮುಂದಿಟ್ಟಿದ್ದು “ಅಂತಹ ಕ್ರಮವು ದೆಹಲಿಯ ಬಹು-ಮುಖ ಇತಿಹಾಸವನ್ನು ಏಕರೂಪದ ನಿರೂಪಣೆಯಾಗಿಸುವ ಅಪಾಯವನ್ನುಂಟುಮಾಡುತ್ತದೆ” ಎಂದು ಹೇಳಿದೆ. 2022 ರಲ್ಲಿ, ಅಖಿಲ ಭಾರತ ಹಿಂದೂ ಮಹಾಸಭಾದ ಸ್ವಾಮಿ ಚಕ್ರಪಾಣಿಯವರು ದೆಹಲಿಯನ್ನು ಇಂದ್ರಪ್ರಸ್ಥ ಎಂದು ಮರುನಾಮಕರಣ ಮಾಡಲು ಇದೇ ರೀತಿಯ ಕರೆಗಳನ್ನು ನೀಡಿದ್ದರು, ಆದರೆ ನ್ಯಾಷನಲ್ ಹೆರಾಲ್ಡ್ ವರದಿಯ ಪ್ರಕಾರ ಇವುಗಳನ್ನು ಸಹ ಪರಿಗಣಿಸಲಾಗಿರಲಿಲ್ಲ.

ಭಾರತ ಸರ್ಕಾರದಿಂದ ಯಾವುದೇ ಹೇಳಿಕೆ ಅಥವಾ ಯಾವುದೇ ಅಧಿಕೃತ ಅಧಿಸೂಚನೆ ಬಂದಿಲ್ಲ. ಹೀಗಾಗಿ, ಹೇಳಿಕೆ ಸುಳ್ಳು.

 


ಇನ್ನಷ್ಟು ವೀಡಿಯೊಗಳು:

 

Leave a Reply

Your email address will not be published. Required fields are marked *

*